ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊಳಕೆ ಚಿಗುರಿತ್ತು ನೆನೆದ ನೆಲವಿಲ್ಲದೆ…

ಕಾರಣವಿಲ್ಲದೆ..

ಷಡಕ್ಷರಿ ತರಬೇನಹಳ್ಳಿ

ಕಂಪಿಸಿತ್ತು
ಅಲೆಯಿಲ್ಲದೇ,
 
ಉಕ್ಕೇರಿತ್ತು
ಉಬ್ಬರವಿಲ್ಲದೇ,
 
ಸುಳಿಯುಟ್ಟಿತ್ತು
ನಿರ್ವಾತವಿಲ್ಲದೇ,
 
ಮಳೆ ಸುರಿದಿತ್ತು
ಮೋಡವಿಲ್ಲದೇ,
 
ಜಲಪಾತ ಧುಮ್ಮಿಕ್ಕಿತ್ತು
ನದಿಯಿಲ್ಲದೇ,
 
ಬೀಜ ಉದುರಿತ್ತು
ಮರವಿಲ್ಲದೇ,

ಮೊಳಕೆ ಚಿಗುರಿತ್ತು
ನೆನೆದ ನೆಲವಿಲ್ಲದೇ,
 
ಹಸಿವು ನೀಗಿತ್ತು
ಹೊಟ್ಟೆಯಿಲ್ಲದೇ,
 
ಬಂಧನಕ್ಕೊಳಗಾಗಿದ್ದೆವು
ಭೇಟಿಯಾಗದೇ,
 
ಪ್ರೀತಿ ನನಸಾಗಿತ್ತು
ಕನಸುಕಾಣದೇ,
 
ಇಬ್ಬರೂ ಸೋತು, ಗೆದ್ದಿದ್ದೆವು
ಯುಧ್ಧವಿಲ್ಲದೇ,
 
ಕಾರಣ ನಕ್ಕಿತ್ತು
ಸೂಕ್ಷ್ಮ ಸ್ಥೂಲಗಳ ತಿಳಿವಿಲ್ಲದೇ

‍ಲೇಖಕರು avadhi

7 February, 2014

2 Comments

  1. mmshaik

    tumbaa chennaagide..

    • Anonymous

      thanks …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading