ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊದಲ ದಿನ ಮೌನ…!

– ಮಾನಸ
ವಿಜ್ಞಾನ, ತಂತ್ರಜ್ಞಾನ, ವಾಸ್ತವತೆ ಎಂಬ ಹೆಸರಿನಲ್ಲಿ ದೇಶದ ಅತಿ ಸೂಕ್ಷ್ಮ ಭಾವುಕ ಮನಸ್ಸುಗಳನ್ನೂ ಸೂಜಿಗಲ್ಲಿನಂತೆ ತನ್ನತ್ತ ಸೆಳೆದು ಜಗದ ಸುಖವನ್ನೆಲ್ಲ ಬೊಗಸೆಗೆ ನೀಡುವೆನೆಂಬ ಭರವಸೆ ಹುಟ್ಟಿಸೋ ಪ್ರಪಂಚದ ಅತಿ ಬಲಾಡ್ಯ- United states of America- ದೇಶದ ಮಣ್ಣಿನ ಮೇಲೆ (marble tiles ಮೇಲೆ) ಮೊದಲ ಹೆಜ್ಜೆಯೂರಿದ ಆ ಕ್ಷಣ……! ಒಂದು ರೀತಿಯ ವಿಶಿಷ್ಟ ಅನುಭೂತಿಯ ನೀಡಿತ್ತು. Welcome to Washington DC.

ಇಳಿಸಂಜೆ, ಸೂರ್ಯ ಆಗಷ್ಟೆ ತನ್ನ ಕರ್ತವ್ಯ ಮುಗಿಸಿ ನಮ್ಮ ದೇಶದ ಜನರ ಕಣ್ತೆರೆಸಲು ಅಣಿಯಾಗುತ್ತಿದ್ದ ಹೊತ್ತು. ಒಮ್ಮೆ ಮೈಮುರಿದು ಸುತ್ತಲೂ ನೋಡಿದೆ, ಅಲ್ಲಲ್ಲಿ ಕಣ್ಣು ಕುಕ್ಕುವ ಬೆಳಕು, ನಿಮಿಷಕ್ಕೆರಡರಂತೆ ಹಾರಿ ಇಳಿಯುತ್ತಿರೋ ಲೋಹ ಪಕ್ಷಿಗಳು, ಸಮವಸ್ತ್ರಧಾರಿ ಪಹರೆ ಸಿಪಾಯಿಗಳು, ಗಜಿಬಿಜಿ ವರ್ಣ ರಂಜಿತ ಜನಗಳು. ನಮ್ಮೂರಿನಲ್ಲಿರದ ವಿಶೇಷತೆ ಇಲ್ಲೇನಿದೆ, ವಿಧಿ ವಿಧಾನಗಳೆಲ್ಲವು ಅದೇ ರೀತಿಯಿದೆಯಲ್ಲಾ. ಆದರೂ ಏನೋ ಇಲ್ಲದ ಭಾವ, ಮತ್ತೇನೋ ಇರುವ ಭಾವ. ಶುರುವಾಯ್ತು ಮನದ ತುಮುಲಗಳು. ಇರುವ-ಇಲ್ಲದ ತುಲನೆಗಳು.

ನಮ್ಮವರು ತಮ್ಮವರು, ಬಂಧು ಬಳಗ, ಭಾಂದವ್ಯಗಳನ್ನೆಲ್ಲ ಪಕ್ಕಕ್ಕೆ ಸರಿಸಿ  ಹಾತೊರೆದು ಬರುವ ಆಗಂತುಕರನು  ಪ್ರೀತಿಯಿಂದಲೇ ಸ್ವಾಗತಿಸಿ ಸಲುಹಿ, ಬಿಟ್ಟು ಹೋಗದಂತೆ ಮಾಡೋ ಈ ದೇಶದ ಮಣ್ಣಿನ ಗುಣದಲ್ಲಿ ಅದೇನು  ಮೋಡಿಯಿದೆಯೋ  ತಿಳಿಯಲು ಪ್ರಯತ್ನಿಸಿ ಸೋತು ಕೊನೆಗೆ ತಾವೂ ಈ ನೆಲದ ಆಡಂಬರದ ಆಮಿಷಗಳಿಗೆ ಬಲಿಯಾಗಿ ಬಂಧಿಯಾಗಿಬಿಟ್ಟರೆಷ್ಟೋ ಜನ.  ನನ್ನ ನಿಯತ್ತನ್ನು ಪ್ರಶ್ನಿಸಲು ಕಾಡು ಕುಳಿತಿದೆ ಈಗ.

ಏನಾಗುವೆ ನಾ ಇಲ್ಲಿಯ ನೆಲ ಜಲ ಸೋಕಿದ ಮೇಲೆ ಅರಿಯೆ?

ನಮ್ಮೂರ, ನಮ್ಮೋರ ಹಿತಾಸಕ್ತಿಗಳಿಗೆ ಉತ್ತರವಾಗಲು ನಾ ಹಿಂತಿರುಗಲೇ ಬೇಕು, ಹಣದ ಅಣೆಕಟ್ಟೆಯಿಂದ, ವಿಜ್ಞಾನದ ವೈಭವೀಕರಣದಿಂದ, ತಂತ್ರಜ್ಞಾನದ ಮಂತ್ರಗಳಿಂದ ತಡೆಯಬೇಡ ಅಂದು, ನಾ ಹೊರಟು ನಿಂತಾಗ. ಅಲ್ಲಿಯವರೆಗೆ ತಾವರೆಯ ಎಲೆಯಂತೆ ಅಂಟಿಯೂ ಅಂಟದ ಭಾವವಿರಲಿ ನನ್ನ ಮನಕ್ಕೂ- ಇಲ್ಲಿಯ ಮಣ್ಣಿಗೂ.

ಮೊದಲ ದಿನವೇ ಹೊರಡೋ ಮಾತೇಕೆ, ಮೌನದಿ ದಿನಗಳ ಕಳೆದರೆ ಕಾಲವೇ ಉತ್ತರವಾಗುವುದು ಬದುಕಿನ ತಿರುವುಗಳಿಗೆ. ಮಾತೃದೇಶದಿಂದ ಹೊರಬಂದ ಪ್ರಥಮ ದಿನ, ಮನಸ್ಸು ಭಾರವಾಗಿದೆ – ಹಗುರವೆನಿಸಿದಾಗ ಇಲ್ಲಿಯ ಅಂದದ ಹಂದರಗಳಾ ಹರಡುವೆ.

“ಹಾರಿ ಬಂದರೂ ಹರದೂರ
ಕಾಡುತಿದೆ ಕರೆಯುತಿದೆ
ಮಾತೃಭೂಮಿಯ ಮಮಕಾರ/

ಮರೆಯದಿರಲಿ ನನ್ನ ಜನ
ಮರಳಿ ಹೋಗೋ ತನಕ
ಅಳಿಯದಿರಲಿ ಮನದಿಂದ
ಮಧುರ ನೆನಪಿನ ತವಕ”/

‍ಲೇಖಕರು avadhi

10 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

4 Comments

  1. Mahesh

    ನಿಯತ್ತನ್ನು ಪ್ರಶ್ಸಿಸುವ ಆಡಂಬರ, ಆಮಿಷ. ನಿಮ್ಮ ತುಮುಲಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ

  2. NagarajK(NRK)

    Lines at the end are very good.

  3. ಚಾರು

    vary good

  4. Manasa

    Dhanyavadagalu geleyare….!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading