ಶಾಂತಿ ಕೆ ಅಪ್ಪಣ್ಣ
ನಾದವಿರದ ನನ್ನ ಬದುಕಿಗೆ
ಹೊಸ ಉನ್ಮಾದವನೇ ತಂದವನು ನೀನು…
ನಿನ್ನ ಕೈಯೊಳಗಿನ ತಾನ ನಾನು..
ನಿನ್ನ ನೆನಪಲ್ಲೊಮ್ಮೆ ಮೈ ಮುರಿದರೂ..
ಮೈಯ ತಿರುವುಗಳಲಿ ಮಧುರ ಗುನುಗು…
ಕಿವಿಯಾನಿಸು ದೊರೆಯೇ…ಕೇಳಬಹುದು ನಿನಗೂ ..
ಈ ಹೃದಯ ಮಧುಪಾತ್ರೆಯೇ ಹೌದಾದರೆ ..
ಅದೀಗ ತುಂಬಿದೆ.
ನಿನ್ನ ತುಟಿಗಳಿಗಾಗಿ ಮಾತ್ರವೇ ತವಕಿಸುತ್ತಿರುವ
ಈ ನಿಷ್ಕಳಂಕ ಮದಿರೆಗಾಗಿ
ನಿನ್ನ ದಾಹವನು ಮೀಸಲಿಡು ಗೆಳೆಯ.
ಹುಡುಗ ಒಳ್ಳೆಯವನು…
ಎಲ್ಲಿಂದ ಕರೆದೊಯ್ದನೋ
ಮತ್ತೆ ಅಲ್ಲೇ ತಂದು ನಿಲ್ಲಿಸಿ ಹೋಗಿದ್ದಾನೆ …
ಮತ್ತೇನಿಲ್ಲ..
ಇನ್ನೂ ಬಹಳಷ್ಟು ನಡೆಯಬೇಕಿದೆ..
ಆದರೆ ಈ ಬಾರಿ
ಅವನ ವಿರಹದ ಭಾರವನೂ
ಹೊರಬೇಕಿದೆ…
ದೊರೆ,
ನೀ ಜೊತೆಗಿರದ ಈ ಸಂಜೆ..
ಹೋಳಿಯಾಡಿದ ಅಂಗಳದಲಿ..
ಬಣ್ಣ ಮೆತ್ತಿದ ಹೆಜ್ಜೆಗಳು ..
ಸುಖದ ಗುರುತುಗಳಂತೆ ಕಂಡವು..
ಅಂಗಡಿಯ ಕಪಾಟಿನಲಿ
ಬಿಕರಿಯಾಗದೇ ಉಳಿದ ಬಣ್ಣಗಳು..
ನನ್ನ ಕನಸುಗಳಂತೆ ಕಂಡವು…
ನಿನ್ನದೇ ಬಣ್ಣ..ತೊಟ್ಟಿದ್ದೇನೆ ದೊರೆಯೇ…
ಹೊಸತಾಗಿ ಮತ್ತೇನು ಉಡಲಿ…
ಕಣ್ಣಿನೊಳಗೆ ಇಳಿದ ಬಣ್ಣ…
ಮಣ್ಣ ಕಂಪಿನಲಿ ಇಣುಕಿದೆ…
ಒಡಲ ಒಳಹೊರಗೆ..ಹೂಬಳ್ಳಿ..ಹಬ್ಬಿ..
ಕನಸುಗಳ ತಬ್ಬಿದೆ..
ಭೂಮಿಯ ಬಯಕೆಗೆ ಒಲಿಯದ ಮುಗಿಲು …
ಸಂಜೆಯ ಕೊನೆಗಂಟಿದ ಕತ್ತಲಿನ ನೆರಳು…
ಕಡೆವರೆಗೂ ಯಾವುದೋ ಒಂದು ಉಸಿರ ಹಂಗಿನಲಿ ಉಳಿವ ಕೊಳಲು…
ನಿನ್ನಡೆಗೆ ಚಾಚಿಕೊಂಡೂ
ಮುಟ್ಟಲಾರದೆ ಉಳಿದಿರುವ ಈ ನತದೃಷ್ಟ ಬೆರಳು…
ಬಿಡಿ ಚಿತ್ರಗಳಂತೆ ಕಂಡರೂ…
ದೊರೆಯೇ…
ಇಲ್ಲಿ ತೂಗುತಿರುವ ವಿರಹದ ಬಣ್ಣ ಒಂದೇ.
ಅಂಗಡಿಯ ಕಪಾಟಿನಲಿ
ಬಿಕರಿಯಾಗದೇ ಉಳಿದ ಬಣ್ಣಗಳು..
ನನ್ನ ಕನಸುಗಳಂತೆ A beautiful rendering a devotional romance and love….too good…
ಚೆನ್ನಾಗಿದೆ.
girl’s feelings are portrayed well…
ತುಂಬಾ ತಡವಾಗಿ ಈ ಕವಿತೆ ಗಮನಿಸಿದೆ. ಕವಿತೆಯ ಗುಟ್ಟು ಕವಿತೆಗೆ ಮಾತ್ರ ಗೊತ್ತು.
ವಾಹ್ ಕ್ಯಾ ಬಾತ್ ಹೆ