ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೂಲ: ಬಹಾದ್ದೂರ್ ಷಾ ಜಫರ್

ಕನ್ನಡಕ್ಕೆ : ಮೆಹಬೂಬಿ

ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…
ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ…

ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ ಹೋಗುವೆ..
ನಾನು ನದಿ ಸಮುದ್ರದೊಂದಿಗೆ ಸೇರಿಹೋಗುವೆ…

ಆಗದು ನಾವಿಕನೇ ನನ್ನಿಂದ ನಿನ್ನ ಆರೈಕೆ
ನಾನು ಆ ಸ್ವಾಭಿಮಾನಿ ದೋಣಿಯಿಂದ ಇಳಿದುಬಿಡುವೆ…

ನನಗೆ ಗಲ್ಲಿಗೇರಿಸುವ ಜರೂರತ್ತೇನಿದೆ
ನನ್ನ ಕೈಯಿಂದ ಲೆಕ್ಕಣಿಕೆ ಕಸಿದುಕೊಳ್ಳಿ ಸತ್ತು ಹೋಗುವೆ…

ನನಗೆ ಈ ಜಗತ್ತಿನಿಂದ ಅಳಿಸುವರಾರು ಜಫರ್
ನಾನು ಕವಿ ಪುಸ್ತಕಗಳಲಿ ಚದುರಿಬಿಡುವೆ….

‍ಲೇಖಕರು Admin

21 February, 2022

1 Comment

  1. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading