ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮೆರವಣಿಗೆ ಹೊರಟು ಸೀದಾ ನನ್ನೂರ ಮುಟ್ಟಿವೆ…’ – ಸ್ಮಿತಾ

ಹಣತೆ ಹಾಡುತ್ತಿದೆ

ಸ್ಮಿತಾ ಅಮೃತರಾಜ್

ಮಗಳೆಂದಳು,
ಅಮ್ಮಾ…
ಈ ಸಲದ ದೀಪಾವಳಿಗೆ
ಮನೆ ಜಗಲಿಯ ಸುತ್ತಾ
ಮಣ್ಣ ಹಣತೆ ಹಚ್ಚಿಡುವಾ…

ಬರೇ ದುಂದು ವೆಚ್ಚ
ಹೇಗೂ ದಿನ ನಿತ್ಯ
ಉರಿಯುತ್ತಲೇ ಇರುತ್ತದಲ್ಲ
ವಿದ್ಯುತ್ ದೀಪ
ಪುಟ್ಟ ಮಗನ ಉವಾಚ.

**

ಚೆಂಡು ಹೂವು ಸೇವಂತಿಗೆಯ
ರಂಗೋಲಿ ಇಟ್ಟು
ನಡುವಲ್ಲೆಲ್ಲಾ ಪುಟ್ಟ ಪುಟ್ಟ
ಹಣತೆ ಹಚ್ಚಿಟ್ಟು
ಸಂಸ್ಕೃತಿಯ ಎಳೆಗೆ ಕಸೂತಿ
ನೇಯುತ್ತಿದ್ದಾಳೆ ಮಗಳು.
 
ಆ ಬೆಳಕ ಪ್ರಭೆಯಲ್ಲಿ
ಸಾಲಂಕೃತವಾಗಿ ಮೆರವಣಿಗೆ
ಹೊರಟು ಸೀದಾ ನನ್ನೂರ ಮುಟ್ಟಿವೆ
ಅಳಿದುಳಿದ ಸ್ಮೃತಿಯ ಅಚ್ಚುಗಳು.
ದೂರದಲ್ಲಿ ರಾಕೇಟು ನೆಟ್ಟು
ಅಷ್ಟೇ ಎಚ್ಚರಿಕೆಯಿಂದ ಅದಕೆ
ಬೆಂಕಿ ಕೊಟ್ಟು
ನೆಲದ ನಕ್ಷತ್ರ ಆಕಾಶಕ್ಕೆ
ಲಗ್ಗೆಯಿಡುವ ವಿಸ್ಮಯಕ್ಕೆ
ತೆರೆದುಕೊಳ್ಳುತ್ತಿದ್ದಾನೆ ಮಗ.
 
** ** **
 
ತುಳಸಿ ಕಟ್ಟೆಯಲ್ಲಿ ಹಚ್ಚಿಟ್ಟ
ಕಿರು ಮಣ್ಣ ಹಣತೆ ಧ್ಯಾನಿಸುತ್ತಿದೆ.
ಸುಳಿವ ಗಾಳಿಗೆ ತುಯ್ಯುತ್ತಾ
ಒಡ್ಡಿಕೊಳ್ಳುತ್ತಾ ಚಾಚಿದ ಇರುಳ
ಬೆರಳನ್ನೆಲ್ಲಾ ಇಂಚಿಂಚೇ ನುಂಗುತ್ತಾ..
 
ಕತ್ತಲ ನೀಗುವುದಿದೆ
ಬಹಳಷ್ಟು..
ಕಾಲ ದೇಶಗಳ ಮೀರಿ ದೀಪ
ದಾಟಿಸಬೇಕಿದೆ ದೂರ
ಎರೆದು ಬಿಡಿ ಇಷ್ಟಿಷ್ಟೇ ತೈಲ
ಹಾಡುವ ಹಣತೆಯೊಳಗೆ
ಬ್ರಹ್ಮಾಂಡವನ್ನೇ ಬೆಳಗುವ ಛಲ.
 

‍ಲೇಖಕರು G

29 October, 2014

7 Comments

  1. Rupa Hassan

    Padya chennagide Smita….
    Rupa

  2. ಅಕ್ಕಿಮಂಗಲ ಮಂಜುನಾಥ

    ಪದ್ಯ ಇಷ್ಟವಾಯಿತು ಮೇಡಂ.

  3. Anonymous

    nice poem smitha

  4. D.Ravivarma

    ಕತ್ತಲ ನೀಗುವುದಿದೆ
    ಬಹಳಷ್ಟು..
    ಕಾಲ ದೇಶಗಳ ಮೀರಿ ದೀಪ
    ದಾಟಿಸಬೇಕಿದೆ ದೂರ
    ಎರೆದು ಬಿಡಿ ಇಷ್ಟಿಷ್ಟೇ ತೈಲ
    ಹಾಡುವ ಹಣತೆಯೊಳಗೆ
    ಬ್ರಹ್ಮಾಂಡವನ್ನೇ ಬೆಳಗುವ ಛಲ.
    excellent…

  5. vasudev nadig

    nimma padyagalu pakvateyannu padedu kollhuttiruvudara sanketa illi kaanasiguttide.vasudev

  6. mmshaik

    tumbaa chendada kavana heNediddiri deepavaLige smita…

  7. ramesh gabbur

    ಪದ್ಯ ಚೆನ್ನಾಗಿದೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading