ಹೀಗೊಮ್ಮೆ ಇಲ್ಲೆ..
– ಸಂವರ್ಥ ’ಸಾಹಿಲ್’
ಮೃಗೀಯ ಕೃತ್ಯವಲ್ಲವೇನೋ ಇದು
ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು
ಮೃಗೀಯವಾಗಿದ್ದಲ್ಲಿ
ಯಾವುದೋ ರಾಮನ ಉರಿಯುವ ಬಾಣ
ಎದೆ ಸೀಳಿ ಸಂಹರಿಸುತಿತ್ತು
ರಾಕ್ಷಸ ದೊರೆಯ
ಹೊತ್ತಿ ಉರಿಯುತ್ತಿತ್ತು ಲಂಕಾ ನಗರಿ
ಉರಿ ಬೆಂಕಿಯ
ವಶಕ್ಕೆ ಬಾಗುತಿತ್ತು.
.
ಮೃಗೀಯವಾಗಿದ್ದರೆ
ಮಹಾಭಾರತದ ಕುರುಕ್ಷೇತ್ರ ತಾಂಡವವಾಡುತಿತ್ತು
ಶತಶತಮಾನಗಳ ತನಕ ನೆಲದ ಬಣ್ಣ ಕೆಂಪಾಗುತಿತ್ತು
ಸುಡುವಗ್ನಿ ಆಕಾಶದುದ್ದಗಲವ ಆವರಿಸುತಿತ್ತು.
.
ಮೃಗೀಯ ಕೃತ್ಯವಲ್ಲವೇನೋ ಇದು
ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು.
ಪಂಜಾಬಿ ಮೂಲ: ಧೀರ್
(1978ನೆ ಇಸವಿಯಲ್ಲಿ ಪ್ರಿತಂ ಕೌರ್ ಎಂಬ ಹರಿಜನ ಹೆಣ್ಣುಮಗಳ ಜನನಾಂಗದೊಳಕ್ಕೆ 22 ಇಂಚಿನ ಕಟ್ಟಿಗೆ ನೂಕಿ ಹತ್ಯೆಗೈದ ಸಂದರ್ಭದಲ್ಲಿ ಬರೆದ ಕವಿತೆ )







saamanya sangathi……!nijakkoo mana kalakuva gatanegalu saamanya annisibiduthiruvudu hedarike huttisuthade.nimma novoo samaanyavaguva apayadalliddeve..saahil…intha vishaya kandisuvudara jathe naviddeve.
ಮೃಗೀಯ ಕೃತ್ಯವಲ್ಲವೇನೋ ಇದು
ಬಹುಶಃ ಸಾಮಾನ್ಯ ಸಂಗತಿ ಆಗಿರಬೇಕು – ಇವು ಪರಿಣಾಮಕಾರಿಯಾಗಿ ನೋವನ್ನು ಹೇಳುವ ಸಾಲುಗಳು. ಕಾಯುವ ಶಿವ ಕಾಲು ಮುರಿದುಕೊಳ್ಳುವಾಗ ಎಲ್ಲಿದ್ದ ಎಂಬಂತೆ. ಕವಿತೆ ಮತ್ತು ಕಾರಣವಾದ ಘಟನೆ ನಿಜಕ್ಕೂ ಹೃದಯ ವಿದ್ರಾವಕ… ಆ ಹೆಣ್ಣುಮಗಳನ್ನು ಆ ರೀತಿ ನಡೆಸಿಕೊಂಡವರು ಮನುಷ್ಯರಲ್ಲ, ಈ ಭೂಮಿಯ ಮೇಲಿರಲು ಅರ್ಹರಲ್ಲ…
ಹೌದು…ಇದು ಮೃಗೀಯ ಕೃತ್ಯ ಅಲ್ಲವೇ ಅಲ್ಲ….ಮೃಗಗಳಾದರೋ ಹಸಿವೆಗೆ-ಬದುಕಿಗೆ ಹೋರಾಡುತ್ತವೆ. ಅದು ನಿಸರ್ಗ ನಿಯಮ.
ಇದು..”ನಾಗರೀಕ ಸಮಾಜ”…ಅದರಲ್ಲೂ ಎಲ್ಲೂ ಕಾಣಸಿಗದಂತ ನಾಗರೀಕ ಜನಸಾಮಾನ್ಯರ-ನಾಗರೀಕ ಜನನಾಯಕರ ಭಾರತ…
ನನಗೆ-ನಮಗೆಲ್ಲಾ ಒಂದು ಧಿಕ್ಕಾರವಿರಲಿ…
ತೀವ್ರವಾಗಿ ಮನಕಲಕುವ ವಿಶಾದನಿಯ ಸತ್ಯ…ನಾಗರಿಕತೆಯ ಮುಕಕ್ಕೆ ಮಸಿಬಲಿದು ಕೊಳ್ಳುವ ಧಾರುಣ ಘಟನೆ ಇದು…..ಇಲ್ಲಿ ಈ ನಾಡಲ್ಲಿ ಇನ್ನು ಈ ತರಹದ ಪೈಶಾಚಿ ಕೃತಿಗಳು ನಡೆಯುತ್ತಲೇ ಇವೆ.. ಕೆಲವು ಮಾತ್ರ ಗಮನಕ್ಕೆ ಬರುತ್ತಿವೆ… ಇನ್ನು ಹಲವು ಇತಿಹಾಸದ ಒಡಲಲ್ಲಿ ಮುಚ್ಚಿ ಹೋಗುತ್ತಿವೆ…. ನಿಮ್ಮ ಚಿಂತಂಗೆ,ಮಾನವೀಯ ಕಳಕಳಿಗೆ ಪ್ರೀತಿಪುರ್ವಕ ಶರಣು…..
paishachi krutyagalu….