ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಸಿಜಿಕೆಯವರ ಮೂರ್ತಿಯೊಂದು ಹೈಲೈಟ್
– ಶಿವು ಮೊರಿಗೇರಿ
ಈ ಮೂರ್ತಿಯನ್ನು ನೋಡಿದ ತಕ್ಷಣ ಕಾಡಿದ ಪ್ರಶ್ನೆಗಳಿಗೆ ಮೂರ್ತಿ ತಯಾರಕರಲ್ಲೊಬ್ಬರಾದ ಎಂ.ರವಿಯವರು ಉತ್ತರಿಸಿದ್ದು ಹೀಗೆ.
ಮೂರ್ತಿ ತಯಾರಿಸಿದ್ದು ಯಾವಾಗ ?
ಸಿ.ಜಿ.ಕೆ.ರಾಷ್ಟ್ರೀಯ ರಂಗೋತ್ಸದ ಹಬ್ಬಕ್ಕಾಗಿಯೇ ಸಿದ್ಧಗೊಳಿಸಿದ ಮೂರ್ತಿ ಇದು.
ಸಹಾಯಕರುಗಳ ವಿವರ ತಿಳಿಸುತ್ತೀರಾ ?
ತಪನ್ ಕಲಾವಿದರ ತಂಡವೇ ಶ್ರಮಿಸಿದೆ. ಅಪ್ಪಯ್ಯ, ಶ್ರೀಧರ್ ಅಡಪ್ಪ ಮತ್ತು ನಾನು ಮೂರೂ ಕಲಾವಿದರು ಸೇರಿ ಮೂರ್ತಿ ತಯಾರಿಸಿದ್ದು.
ಮೂರ್ತಿ ನಿರ್ಮಿಸಲು ತೆಗೆದುಕೊಂಡ ಸಮಯ ಎಷ್ಟು ?
ತಿಂಗಳಿಗಿಂತ ಜಾಸ್ತಿ ದಿನಗಳನ್ನು ಮೂರ್ತಿ ತಯಾರಿಗಾಗಿ ಸಮಯ ತೆಗೆದುಕೊಂಡಿದ್ದೇವೆ.
ಇದಕ್ಕೂ ಮುಂಚೆ ಎಷ್ಟು ಮೂರ್ತಿ ಮಾಡಿದ್ದೀರಿ ?
ಯಾವುದೂ ಇಲ್ಲ. ಸಿ.ಜಿ.ಕೆ.ಯವರ ಮೂರ್ತಿ ತಯಾರಿಸಿದ್ದೇ ಮೊದಲು. ಆ ಕುರಿತು ಹೆಮ್ಮೆ ಇದೆ ನನಗೆ.
ಸಿ.ಜಿ.ಕೆ.ಯವರ ಮೂರ್ತಿಯನ್ನು ಇದೇ ಭಂಗಿಯಲ್ಲೇಕೆ ನಿರ್ಮಿಸಿದ್ದೀರಿ ?
ಇದು ಅವರು ‘ಸಂಸ’ ಬಯಲು ರಂಗಮಂದಿರದಲ್ಲಿ ಕೂಡುತ್ತಿದ್ದ ಭಂಗಿ. ಹಾಗಾಗಿ ಅದೇ ಭಂಗಿಯಲ್ಲಿ ಮೂರ್ತಿ ನಿರ್ಮಿಸಿದ್ದೇವೆ.
ರಂಗೋತ್ಸವ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೂರ್ತಿ ಕುರಿತು ನಿಮ್ಮ ಅಭಿಪ್ರಾಯ ?
ಖುಷಿಯಾಗುತ್ತೆ. ಕಾರ್ಯಕ್ರಮಕ್ಕೆ ಹೋಗುವ ಮೊದಲೇ ಪ್ರತಿಯೊಬ್ಬರಿಗೂ ಈ ಮೂರ್ತಿಯ ದರ್ಶನವಾಗುತ್ತೆ. ಆ ಮೂರ್ತಿಯ ಕಡೆ ತಿರುಗಿ ನೋಡಿದಾಗ ಧನ್ಯತಾ ಭಾವ ಮೂಡುತ್ತೆ.
ಮೂರ್ತಿ ರಚನೆಯ ಪ್ರಕ್ರಿಯೆಗಳನ್ನು ತಿಳಿಸುತ್ತೀರಾ ?
ಸಿ.ಜಿ.ಕೆ.ಯವರ ಇನ್ನೊಂದು ಮೂರ್ತಿ ಸಾಣೇಹಳ್ಳಿಯಲ್ಲಿದೆ. ಅವರದೇ ಹೆಸರಿನಲ್ಲಿ ರಂಗೋತ್ಸವ ನಡೆಯುತ್ತಿರುವಾಗ ಒಂದು ಮೂರ್ತಿ ನಿರ್ಮಿಸುವ ಕುರಿತು ತುಂಬಾ ಜಾಗರೂಕತೆ ಮತ್ತು ಅಭಿಮಾನದಿಂದ ತಫನ್ ಕಲಾ ತಂಡ ಶ್ರಮಿಸಿದೆ.
ಮೂರ್ತಿ ಅನಾವರಣಗೊಂಡ ತಕ್ಷಣದ ನೆರೆದವರ ಪ್ರತಿಕ್ರಿಯೆ ಹೇಗಿತ್ತು ?
ಅದೊಂದು ಅದ್ಭುತವಾದ ಘಳಿಗೆ…..!
ಈ ಮೂರ್ತಿಯನ್ನು ನೋಡಿದ ಸಭಿಕರಲ್ಲಾರಾದರೂ ಈ ಮೂರ್ತಿ ನಿರ್ಮಿಸಿದವರಾರೆಂದು ಕೇಳಿದ್ದಾರಾ ?
ತುಂಬಾ ಜನ ಕೇಳಿದ್ದಾರೆ. ಅವರು ಹಾಗೆ ಕೇಳುತ್ತಿರುವಾಗ ನಮಗೆ ತುಂಬಾ ಸಾರ್ಥಕ ಭಾವನೆ ಮೂಡಿದೆ.
ಸಂಸ ದಲ್ಲಿರುವ ಸಿಜಿಕೆ ಮೂರ್ತಿ :
ಈ ರಂಗಕರ್ಮಿ ಸಿ,ಜಿ ಕೆ ಗೊಂದು ಹೃದಯದಾಳದ ರಂಗನಮನ ..ಽವರ ಮೂರ್ತಿ ಯನ್ನು ಅದ್ಬುತವಾಗಿ ಸೃಷ್ಟಿಸಿದ ಎಲ್ಲ ಕ್ರಿಯಾಶೀಲ ಮನಸ್ಸುಗಳಿಗೂ ವಂದನೆ ಅಭಿನಂದನೆ…
ಮೂರ್ತಿ ತುಂಬಾ ಚೆನ್ನಾಗಿದೆ. ನಿರ್ಮಿಸಿದವರಿಗೆ ಅಭಿವಂದನೆಗಳು