ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುರಿದು ಬಿದ್ದ ಫಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!

ನಾಗೇಂದ್ರ ಕುಮಾರ್ ಕೆ ಎಸ್



ಕೋಟೆ ಕೊತ್ತಲಗಳೆಂದರೆ ನನಗಿಷ್ಟ!
ಮನಸು ತುಂಬಿಬರುವುದು;
ಮನಸನೆಳವುದು;
ಭಾವ ಉಕ್ಕುವುದು;
ಏಕೋ ಗೊತ್ತಿಲ್ಲ ನಾ ಕಾಣೆ?
ಹೋರಾಟಗಳ ಸಂಕೇತವೆಂದೋ?
ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?
ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?
ಕೋಟೆ-ಕೊತ್ತಲಗಳೆಂದರೆ
ಮನಸು ತುಂಬಿಬರುವುದು;
ಭಾವ ಉಕ್ಕುವುದು;

ಗತಕಾಲದ ನೆನಪೊಂದು
ಮನದ ಮುಂದೆ ಬಾರಲಾರದೆ
ಪ್ರೀತಿಯ ಭಾವವಾಗಿ ಹೊರಹೊಮ್ಮುತಿಹುದೋ ನಾ ಕಾಣೆ?
ಯಾವ ಯುದ್ಧದಲ್ಲೋ
ನನ್ನ ಭೂಮಿ,ನನ್ನ ಕೋಟೆ,
ನನ್ನವರಿಗಾಗಿ ಹೋರಾಡುತ್ತಾ ಮಡಿದನೇನೋ?
ಈ ಕೋಟೆ-ಕೊತ್ತಲಿನಲ್ಲಿ ನೆನಪು ಬಾರದು
ಭಾವ ಉಕ್ಕುವುದು;
ಕೋಟೆ,ರಾಜ್ಯ ಕೈತಪ್ಪಿಹೋಯಿತೋ?
ವೈರಿ ಪಡೆಯ ನಾಮಾವಶೇಷವಾಗಿ ಗೆಲುವು ನಮಗಾಯಿತೋ?
ಒಂದೂ ನೆನಪಿಲ್ಲ;
ತುಪಾಕಿ-ಪಿರಂಗಿಗಳ ಶಬ್ದ;
ಸಾವು-ನೋವುಗಳ ಚೀರಾಟ;
ರಣಕಹಳೆ ದುಂದುಬಿಯ ಮೊಳಗಾಟ;
ಮನದಲ್ಲಿ ಇನ್ನೂ ಹಸಿರಾಗಿದೆ
ಪೌರುಷವನೆ ತುಂಬುತಿಹುದು;
ಕಣ್ಣ ಮುಂದೆ ಯಾವಚಿತ್ರವೂ ಬಾರದೆ
ಮನದ ಪರದೆಯ ಹಿಂದೆ ಯಾವುದೋ ಶಕ್ತಿ ನರಳುವಂತೆ ಮಾಡುತ್ತಿದೆ
ಕೋಟೆ ಎಂದರೆ ಭಾವ ಉಕ್ಕುವುದು;
ಏನನ್ನೂ ಮಾತನಾಡದೆ ಸುಮ್ಮನೆ ನಿಂತಿರುವ ಕೋಟೆಯ ಗೋಡೆ,
ಮುರಿದು ಬಿದ್ದ ಪಿರಂಗಿ,ಬಾಗಿಲುಗಳೇ ಹೇಳಿ ನಾನಾರೆಂದು?
ಗುಂಡು,ಪಿರಂಗಿಗಳಿಗೆ ಎದೆಯ್ಯೊಡ್ಡಿದರೂ
ಅಚಲರಾಗಿ ಅಜೇಯರಾಗಿದ್ದೀರಿ;
ಗುಂಡೇಟುಗಳಿಂದ ಘಾಸಿಯಾದ ಜಾಗಗಳು;
ಪಿರಂಗಿಗಳ ಹೊಡೆತದಿಂದ ಮುರಿದು ಬಿದ್ದ
ಗೋಡೆ-ಚಾವಣಿಗಳು
ಎಲ್ಲವೂ ನೆನಪಿದೆ
ಆದರೆ ನಾನಾರೆಂದು ಮಾತ್ರ ಮರೆತಿದೆ;
ಕೋಟೆ ಎಂದರೆ ಭಾವ ಉಕ್ಕುವುದು;


‍ಲೇಖಕರು avadhi

5 February, 2014

1 Comment

  1. mmshaik

    kote…gatakaalada nenapu..! chennaagide ..naagendra avarige avadhige swaagata..!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading