ಅಜ್ಜನ ಕಣ್ಣ ಬೆಳಕಿನ ಹಾದಿಯಲಿ

ಬಿದಲೋಟಿ ರಂಗನಾಥ್
ಅಜ್ಜನ ಕಣ್ಣ ಬೆಳಕಿನ ಹಾದಿಯಲಿ
ಸಾಗಿದ ಬದುಕಿನ ಹೆಜ್ಜೆಗಳು
ಆತ್ಮಸ್ಥೈರ್ಯದ ರೆಕ್ಕೆಗಳು
ತಿರೆಯನು ನಂಬಿ
ತರಿದ ಕತ್ತಲೆಯಲಿ
ಬದುಕಿನ ಅಜ್ಜನ ಬೆವರಹನಿಗಳು
ಹಸಿರು ಕಂಡ ಕನಸುಗಳು
ತುಳಿದ ಹೆಜ್ಜೆಗಳ ಮೇಲೆ
ಸಕ್ಕರೆ ತಿಂದ ಇರುವೆಗಳ ಸಾಲು..
ಸಕ್ಕರೆ ಕರಗಿದ ಮೇಲೆ
ಆ ಹೆಜ್ಜೆಯೋ ಮರಳುಗಾಡು.
ಬೋಳು ಗೋಳಿನ ಮರಕೆ
ಅಸ್ಮಿತೆಯನು ತುಂಬಿ
ನಗುವನು ಕೂರಿಸಿದ
ಅಜ್ಜನ ಮನಸಿನ ಇಷ್ಟ
ಸಮಾನತೆಯ ಬಾಗಿಲ ತೆರೆಯುವುದು.
ಕಾಗೆ ಕೂಗಿನ ಸದ್ದಿಗೆ
ಕಿವಿಗೊಡದ ಮನಸಿನ ಹೆದ್ದಾರಿಯಲಿ
ಮುಟ್ಟಬಾರದ,ನೋವುಂಡ ಮನಸುಗಳಿಗೆ ಜೋಲಿ.
ಪೊರೆಬಂದ ಕಣ್ಣ ಕೂಗಿನಲಿ
ನೊಂದ ಮನಸಿನ ಚೂರುಗಳಿಗೆ ಸಾಂತ್ವಾನ.
ಬೆಳಕಿಗಾಗಿ ಹಂಬಲಿಸಿ
ಬೆಳಕಾದ ಅಜ್ಜನ ಬದುಕಿನ ಪಾತ್ರ
ತೆರೆ ಸರಿಸಿದ ತೊರೆ.





0 Comments