
ಕುವೆಂಪು ಅವರ ‘ಜಲಗಾರ’ ನಾಟಕದಲ್ಲಿ ಜಗದ ಕೊಳೆ ತೆಗೆಯುವ ಜಲಗಾರನೊಬ್ಬ ಬರುತ್ತಾನೆ. ಹಾಗೆ ಅಲ್ಲೊಬ್ಬ ಸೌದಿ, ಇಲ್ಲೊಬ್ಬ ಪ್ಯಾಟಿ, ಇನ್ನೆಲ್ಲೋ ಒಂದು ಪತ್ರಕರ್ತರ ಸಂಘ ಪೊರಕೆ ಹಿಡಿದು ನಿಂತಿದೆ. ಅವರಿಗೆ ಗೊತ್ತಾಗಿದೆ ನಮ್ಮ ಊರುಗಳ ಕೊಳೆ ನಾವೇ ತೊಳೆಯಬೇಕು ಅಂತ. ಪಿ ಸಾಯಿನಾಥ್ ಎಂಬ ಮಾಧ್ಯಮ ಲೋಕದ ಭಿನ್ನ ಪಯಣಿಗನೊಬ್ಬ ಹುಟ್ಟಿದ್ದೂ ಹೀಗೇ ಅಲ್ಲವೇ. ರವೀಂದ್ರನಾಥ ಟ್ಯಾಗೂರರ ಪದ್ಯವೊಂದಿದೆ. ಜಗತ್ತೆಲ್ಲಾ ಕತ್ತಲೆಯಲ್ಲಿ ಮುಳುಗಿದ್ದಾಗ ಪುಟ್ಟ ಹಣತೆಯೊಂದು ಹೇಳುತ್ತದೆ- ‘ಭಯಪಡಬೇಡಿ ನಾನಿದ್ದೇನೆ’.
ಚಂದ್ರನ ಮೇಲೆ ನೀರಿದೆ ಎಂಬುದನ್ನು ಕಂಡು ಹಿಡಿಯುತ್ತೇವೆ. ಆದರೆ ನಮ್ಮ ಊರುಗಳಲ್ಲೇ ಕುಡಿಯಲೂ ಒಂದು ಹನಿ ನೀರಿಲ್ಲ ಎಂದು ಗೊತ್ತಾಗದೇ ನಿಂತಿದ್ದೇವೆ. ಅಂತಹವರ ಮಧ್ಯೆ ಈ ಬದಲಾವಣೆಯ ಹರಿಕಾರರು ಇದ್ದಾರೆ ಎಂಬುದೇ ಸಮಾಧಾನ.





0 Comments