ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹದಾಯಿ ಕನಸಿಟ್ಟು ಕಳಿಸಿದರೂ..

ಮತ್ತೆ ಇಳಿದು ಬಾ…

mallikarjuna gowda tulahalli

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಗಿಡ ಮರ ಸ್ತಬ್ದ ಚಿತ್ರ
ಉರಿವ ಓಣಿ ಬೀದಿ
ಚಡಪಡಿಸುವ ನೆರಳು
ನಾಲಗೆ ಸೀಟಿದರೂ ಉಗುಳಿಲ್ಲ

ಉಟ್ಟಿದ್ದ  ಕಳಚಿ
ಕುಡಿದಿದ್ದ ಕಪ್ಪು ನೀರೂ
ಬೆವರ ಸೆಲೆಯಾಗಿ ಹರಿದು
bendre child art2ಅದೂ ಒಣಗಿ
ಮೈಗೆ ಉಪ್ಪಡರಿ
ಉಸಿರೂ ಝಳ ಝಳ
ನೆಲಕ್ಕೇ ಜ್ವರ

ಯಪ್ಪಾ ನಾಗಲಿಂಗ
ಯವ್ವಾ ಭೀಮವ್ವ
ಶಿಶು
ನಾ


ಒಡಲೆಲ್ಲಾ
ನಿಮ್ಮ ತತ್ವಗಳೋಗರವುಂಡು
ಕುಡಿಯಲು ನೀರಿಲ್ಲದೆ
ಬೇಧಿ ಕಿತ್ತು ನಿತ್ರಾಣ

ಹಳ್ಳ ಕೊಳ್ಳವ ನುಂಗಿದ ಮಂದಿ
ನದಿಗೆ ಕಾಲುವೆ ಕಟ್ಟ
ಗಂಗಾವತರಣ ಮಾಡುವ
ಮಾತಾಡುತ್ತಲೇ
ಹೆಬ್ಬೆಟ್ಟೊತ್ತಿಸಿಕೊಂಡು
ದೊರೆಗಳಾದರೋ ತಂದೆ

ಕೆರೆಗಳ ನುಂಗಿ
ಶಹರಗಳ ಹಡೆದರು
ಮುತ್ತಿನ ಜೋಳದ ಕನಸ
ಸುಳಿಯಲ್ಲೇ ಹಿಸುಕಿ

ಖಾಲಿ ಮಡಕೆಯಲಿ
ಹಾವು ಚೇಳು
ಒರತೆಗಳೂ ಒಣಗಿ
ಇಟ್ಟಂಗಿ ಭಟ್ಟಿಗಳ ಧೂಳು

ಮತ ಮತಕು
ಮಹದಾಯಿ ಕನಸಿಟ್ಟು ಕಳಿಸಿದರೂ
ಠಕ್ಕ ಮಾತಿಗೆ ಧಗೆಯು ತಣಿಯಲಿಲ್ಲೋ
ಲೋಕವಿಲ್ಲದ ಸಭೆ
ವಿಕಾಸವರಿಯದ ಸೌಧ
ಕೂಡಿ ಕಳೆಯುವ ಲೆಕ್ಕ
ನಿಲ್ಲಲಿಲ್ಲೋ

ಬಸುರಿಗೂ ನೀರಿಲ್ಲ
ಕೂಸು ಬಾಣತಿಗಿಲ್ಲ
ಕೂಲಿ ಮೈ
ಆಡು ಕುರಿ ಹಕ್ಕಿಪಕ್ಷಿಗಳಿಗಿಲ್ಲ
ಕುಂತು ಬೇಡಿದರಿಲ್ಲ
ನಿಂತು ಬೇಡಿದರಿಲ್ಲ

ಇಲ್ಲವೆಂಬುದಲ್ಲಗಳೆದುದೆ ಬಂತೋ
ನರಭಕ್ಷಕ ವ್ಯಾಘ್ರಗಳ ಹಿಂಡು ಹಿಂಡು

ಬ್ಯಾಡ ಯಜ್ಜೋ ಇವರು
ನೀನೆ ಬಾರೋ
ಬೇಂದ್ರೆ
ಅಂಬಿಕಾತನಯದತ್ತ
ನಿನ್ನ ಕೂಡಿ ಹಾಡತೇವೋ
ಹುಗಿದ ದನಿಯೆತ್ತಿ
ಮತ್ತೆ
ಮತ್ತೆ
ಇಳಿದು ಬಾ ತಾಯೇ

ಳಿ
ದು
ಬಾ…..

‍ಲೇಖಕರು Admin

4 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading