ಮಸಲತ್ತು ಮಾಡುವ ಕವಿತೆಗಳಿಗೆ..

ಗೀತಾ ಜಿ ಹೆಗಡೆ ಕಲ್ಮನೆ

ಮಸಲತ್ತು ಮಾಡುವ ಕವಿತೆಗಳಿಗೆ
ಮನಸೋ ಇಚ್ಛೆ ರೆಕ್ಕೆಗಳು
ಪುಟಿದೇಳುತ್ತವೆ ಆಗಲೇ
ತಮ್ಮ ಹಕ್ಕು ಸ್ಥಾಪಿಸಲು.

ಇರೆ ಇರೆ ಸ್ವಲ್ಪ
ಬರಿ ಬರಿ ಬೇಗ
ಬದಿಗೊತ್ತಿಡು ನಿನ್ನ ಕೆಲಸ
ನಾ ಬಿಟ್ಟರೆ ಸಿಕ್ಕಾ
ಎಂದು ದುಂಬಾಲು ಬೀಳುತ್ತವೆ.

ಈ ಮಾತಿಗೆ ತಗಲಾಕ್ಕೊಳದೇ ಇರುವವರು ಯಾರು?
ಗೊತ್ತುಮಾಡಿಕೊಂಡು ಬಿಟ್ಟಿದೆ
ನಮ್ಮ ವೀಕ್ನೆಸ್ಸು!

ಇದಕ್ಕೆ ಸರಿಯಾಗಿ
ಅಲ್ಲೋ ಇಲ್ಲೋ ಎಲ್ಲೋ
ಪ್ರತೀ ಹಬ್ಬಕ್ಕೂ ಹುಣ್ಣಿಮೆಗೂ
ಸ್ಪರ್ಧೆ ಬೇರೆ
ಕಳಿಸಿ ಬೇಗ ಬೇಗ
ಗೀಟಾಕಿರ್ತಾರೆ ಅಂತಿಮ ದಿನಾಂಕ.

ಸರಿ ಹೋಯ್ತು….
ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಅದೇ
ಮತ್ತಿನ್ನೇನು ಕೂತು ಗೀಚೋದೆ.

ತಿದ್ದಿ ತೀಡಿ ಒನಪು ಮಾಡಿ
ಕಳಿಸುವ ಗಡಿಬಿಡಿ ಆತುರ
ಒಂದಿಷ್ಟು ನಿರೀಕ್ಷೆಯಲ್ಲಿ
ಇನ್ನು ಹಬ್ಬ ಹುಣ್ಣಿಮೆ ಕೆಲಸದ ತಯಾರಿಗೆ ಹಿಂದೇಟು
ಮಾಡಿದರಾಯಿತು….
ಎಷ್ಟು ಹಬ್ಬಗಳಪ್ಪಾ…?
ಉದಾಸೀನ ಈಗೀಗ.

ಮೈ ತುಂಬಾ ದಂಡಿ ಕೆಲಸಗಳನ್ನು
ಸರಸರನೆ ಹೊತ್ತು ತರುವ ಹಬ್ಬಗಳ ಸಾಲು
ಮೈಗಳ್ಳತನ ದೂರ ಸರಿಸಿ ಮನೆ ಮನ ಶುಚಿಗೊಳಿಸುವುದಂತೂ ದಿಟವೇ…

ಆದರೆ ಬರೆಯುವ ಕೈಗೆ ಕೋಳ ತೊಡಿಸುತ್ತಲ್ಲಾ
ಅದೇ ಬೇಜಾರು
ಪುರುಸೊತ್ತಿಲ್ಲವೆಂದು ದೂರ ತಳ್ಳೋದಕ್ಕೂ ಆಗದೆ
ಬಿಡಲೂ ಆಗದೆ
ಭಯಂಕರ ಒದ್ದಾಟ…
ಆಗೆಲ್ಲಾ ಅನಿಸುವುದು
ಈ ಹಬ್ಬವಾದರೂ ಯಾಕೆ ಬರುವುದೋ…
ಈ ಶಾಸ್ತ್ರ ಸಂಪ್ರದಾಯ ಯಾರು ಮಾಡಿಟ್ಟರೋ…
ಈ ಹೆಣ್ಣು ಜನ್ಮಕ್ಕಿಷ್ಟು….

‍ಲೇಖಕರು avadhi

February 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: