ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲಾಭಿಷೇಕ ಯಾರಿಗೆ?


ಗಾಂಧೀಜಿಯವರ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ಸರಿಸಾಟಿಯಾದ ಬಣ್ಣ ವಾಸನೆಯುಕ್ತ ಪ್ರತಿಭಟನೆ ಇಲ್ಲಿದೆ.ಸವಣೂರಿನ ಪುರಸಭೆಯ ಆವರಣದಲ್ಲಿ ಮಂಗಳವಾರ ಮಲವನ್ನು ತಲೆಯ ಮೇಲೆ ಸುರಿದುಕೊಂಡು ಪ್ರತಿಭಟನೆ ಮಾಡಿದ ಭಂಗಿ ಕುಟುಂಬದ ಸದಸ್ಯರು ತೀವ್ರ ಅಸಹಾಯಕ ಸ್ಥಿತಿಯ ಗರ್ಭದಲ್ಲಿರುವ ಕ್ರೋಧವನ್ನು ಹೊರಹಾಕುವ ಸಾಧನಗಳಿಗೆ ಹೊಸ ಹತಾರವನ್ನು ಸೇರಿಸಿದ್ದಾರೆ.

ಜನರೇ ಸರಕಾರವೆಂದು, ಜನ ತಮ್ಮ ಮೇಲೆಸೆದ ಚಪ್ಪಲಿ ಭಾರತಾಂಬೆಯ ಮೇಲೆ, ಪ್ರಜಾಪ್ರಭುತ್ವದ ಮೇಲೆ ಎಸೆದ ಚಪ್ಪಲಿಯೆಂದು, ಜನರ ಆಶೀರ್ವಾದ ತಮ್ಮ ತಲೆಯ ಮೇಲಿರುವುದೆಂದು ಮುಂತಾಗಿ ಗಳಹುವ ರಾಜಕಾರಣಿಗಳಿಗೆ ಇದು ಯಾರ ತಲೆಯ ಮೇಲೆ ಸುರಿದ ಮಲ ಎಂದು ತಿಳಿಯುತ್ತದೆಯೆ?

-ವಿ.ಎನ್.ಲಕ್ಷ್ಮೀನಾರಾಯಣ

‍ಲೇಖಕರು avadhi

22 July, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

5 Comments

  1. PaLa

    🙁

  2. ಶೆಟ್ಟರು (Shettaru)

    “ರಾಜಕಾರಣಿಗಳಿಗೆ ಇದು ಯಾರ ತಲೆಯ ಮೇಲೆ ಸುರಿದ ಮಲ ಎಂದು ತಿಳಿಯುತ್ತದೆಯೆ?”
    ನೀಜಕ್ಕೂ ಕತ್ತಿನ ಪಟ್ಟಿ ಹಿಡಿದು ಕೇಳಲೇಬೇಕಾದ ಪ್ರಶ್ನೆಯಿದು.
    ನಾಗರಿಕ ಸಮಾಜಕ್ಕೆ ನಾಚಿಕೆಗೇಡಿನ ಪ್ರಶ್ನೆ, ನಾವೂ ಕೂಡಾ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

  3. savitri

    Enu hosa pratibhatanegalu bandaru madhyamada vishayavagi aste uliyuttaveya? athava namma rajakeeyada kochheyannu hasanagisuva hosa peeligeyondu barabahude?

  4. prasad Raxidi

    Sankatavayitu, navella manushyaragodu yavaga, ee asahayakete mattu novu yake nammannu becchi beelisuttilla?,”uchalya” tereditta loka namma pakkdalle ide. yarige yenadru tirugi nodada sthithi talpiddeve annisuttade.
    yako 70 ra dashaka nenapayitu, aga kanishta beedhigadru iliyuttiddevu. matomme helabekenisuttade “namage dhikkaara”….. namage dhikkaara”

  5. kirankumari

    ಮಾನ್ಯರೆ,
    ಸ್ವತ: ಮಲಾಭಿಷೇಕ ಮಾಡಿಕೊಳ್ಳುವ ಮೂಲಕವಾದರೂ ಪ್ರಸ್ತುತ ವ್ಯವಸ್ಥೆಯಲ್ಲಿರುವ ಬ೦ಢ:ದಪ್ಪ ಚರ್ಮದ ರಾಜಕಾರಣಿಗಳನ್ನು..ಅಧಿಕಾರಶಾಹಿಗಳ ವರ್ತನೆಗೆ ತಮ್ಮ ಸ೦ಕಟವನ್ನು ಹೇಳುತ್ತಾ..ಅದರ ಮೂಲಕವೇ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿರುವ ತಳಸ್ತರ ಸಮುದಾಯದ ಈ ವಾಸ್ತವತೆ ಮತ್ತು ಅಸಹಾಯಕತೆಗೆ ಪ್ರಜ್ನ್ಯಾವ೦ತ ನಾಗರೀಕ ಸಮಾಜವೇ ಉತ್ತರಿಸಬೇಕು.
    ಸವಣೂರಿನ ಭ೦ಗಿ ಸಮುದಾಯದ ಅಹಿ೦ಸಾತ್ಮಕ ಹೋರಾಟಕ್ಕೆ ಜಯ ಹೋ…ಸವಣೂರಿನ ಭ೦ಗಿ ಸಮುದಾಯದ ಅಳಲನ್ನು ಎಲ್ಲ ಪ್ರಗತಿಪರ ವ್ಯಕ್ತಿ:ಸ೦ಘ:ಸ೦ಸ್ಥೆಗಳು ಗ೦ಭೀರವಾಗಿ ಪರಿಗಣಿಸಬೇಕು..ಮು೦ದಿನ ಹೋರಾಟದ ದಾರಿಗೆ ಸಜ್ಜಾಗಬೇಕು. ಎ೦ಬುದು ನನ್ನಕಳಕಳಿ.

    ಕಿರಣ್ ಕುಮಾರಿ.ಎಸ್.
    ರಾಮನಗರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading