ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ದಲಿತ ಚಿಂತನೆ ಕೃತಿಯಿಂದ ..
ಅಂದಿನ ಸಚಿವ ಬಿ. ಬಸವಲಿಂಗಪ್ಪ (ಬೂಸಾ ಪ್ರಕರಣ) ರಾಜಿನಾಮೆ ನೀಡಿದ ನಂತರ ಮಾಡಿದ ಭಾಷಣ (ಸಂಪಾದಕರು: ಮೊಗಳ್ಳಿ ಗಣೇಶ್)
..ಈ ಹೇಲು- ಉಚ್ಚಿ ಹೊರುವಂಥಹುದನ್ನು ನಾನು ನಿಲ್ಲಿಸಿದೆ.
ಪತ್ರಿಕೆಗಳಲ್ಲೆಲ್ಲ ಮಲ-ಮೂತ್ರ ಹೊರುವುದನ್ನು ನಿಲ್ಲಿಸಲು ಬಸವಲಿಂಗಪ್ಪ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬರೆದರೇ ಹೊರತು ಹೇಲು-ಉಚ್ಚಿ ಅಂತ ಒಬ್ಬರೂ ಬರೆಯಲಿಲ್ಲ.
ನಾನು ಹೇಳಿದ್ದೆಲ್ಲ ಹೇಲು-ಉಚ್ಚಿ ಅಂತಲೇ. ಏಕೆಂದರೆ ಎಲ್ಲರಿಗೂ ತಿಳುವಳಿಕೆಯಾಗುತ್ತದೆ.
ಮಲನೂ ಸಂಸ್ಕೃತ ಮೂತ್ರನೂ ಸಂಸ್ಕೃತ. ಯಾರಿಗೆ ಅರ್ಥವಾಗುತ್ತದೆ?
ನಾನು ವೇದಿಕೆಯಿಂದ ಹೇಲು-ಉಚ್ಚಿ ಅಂದರೆ ‘ಅಸಿಸಿಸಿ’ ಅಂತ ಹೇಳುತ್ತಿದ್ದರು.
ಹೇಳಿದ್ದನ್ನು ಕೇಳಿಯೇ ‘ಅಸಿಸಿಸಿ’ ಅಂದರೆ ಹೊರುವಂತಹ ವ್ಯಕ್ತಿಗೆ ಅದು ಹೇಗಿರಬೇಕು?
ಮಂಜುನಾಥ್ ಲತಾ ಮೂಲಕ
0 ಪ್ರತಿಕ್ರಿಯೆಗಳು