ಮತ್ತೆ ಮುತ್ತಿನ ಕಂದಾಯ ಕೊಡು..

ದಾಕ್ಷಾಯಣಿ ಮಸೂತಿ

**

ತುಟಿಗೆ ತುಟಿ

ಒತ್ತಿದಾಗ 

ಧಗ್ಗನೆ ಹೊತ್ತಿದ

ಬೆಂಕಿ ಆರಲು

ಮತ್ತೆ ಮುತ್ತಿನ

ಕಂದಾಯ ಕೊಡು

ಎಂಬ ನಿನ್ನ ಕಳ್ಳನೋಟವ

ಕಂಡಾಗ

ನಾಭಿಯಲಿ ಸಣ್ಣ ನಡುಕ

ಜೊತೆಗೊಂದಿಷ್ಟು ಪುಳಕ

ಅದೆಷ್ಟು ಚೆಂದ

ನಿನ್ನೊಲವಿನ ಅಮಲು‌

ಗೊತ್ತಾ?

ಮೊಗೆಮೊಗೆದು

ಒಮ್ಮೆಲೇ

ಕುಡಿದು ಬಿಡುವ 

ಬಯಕೆ ಮೂಡಿ

ಮುಗಿದುಬಿಡುವ

ಹೆದರಿಕೆ ಹುಟ್ಟುವಷ್ಟು ! 

ಇಷ್ಟೀಷ್ಟೇ ಹೀರಿದರೆ

ಬದುಕಿನುದ್ದಕ್ಕೂ 

ಇರಬಹುದೆ ಎಂಬ

ದುರಾಸೆ ಮೊಳೆಯುವಷ್ಟು

ಜಗದ ಪರಧಿಯೊಳಗೆ

ಇರುವ

ನಾನು ನೀನು 

ಆನು ತಾನುಗಳ

ಮೀರಿ 

ಭಾವಪರವಶತೆಯಲಿ

ಉರಿಯಬೇಕು

ನಮ್ಮ ದೇಹಗಳು

ಜೊತೆಗೆ ಆತ್ಮಗಳು

ಒಲವು ಚಿನ್ನದಂತೆ

ಚೊಕ್ಕವಾಗಲೂ

ಚೊಕ್ಕದಲ್ಲೂ ಇರುವ

ಮುಕ್ಕನ್ನು ಅಪ್ಪಿಕೊಳ್ಳಲು

ಆಸೆ ನಿರಾಸೆಗಳ

ಅಲೆಗಳಲ್ಲೂ

ಮೋಹದ ಪೊರೆಯ

ಧರಿಸುತ್ತಾ ತೊರೆಯುತ್ತಾ

ಬದುಕಾಗಲು

ನನ್ನಿಂದ ನೀನು

ನಿನ್ನಿಂದ ನಾನು

ಬಿಡುಗಡೆಗೊಳ್ಳಲು

ಪ್ರೇಮದ ಉರಿಯೊಳಗೆ

ಬಿದ್ದು ಸುಟ್ಟು ಬೂದಿಯಾಗುತ್ತಾ

ಒಲುಮೆಯ ಗಾಳಿಯೊಳಗೆ

ತೇಲಿ ಹೋಗಲು

ಬಂದು ಬಿಡು

ಗೆಳೆಯ ಇಂದಾದರೂ

ಒಲುಮೆಯ ಕುಲುಮೆಯಲಿ

ಬೇಯಲು ಅನ್ನವಾಗಲು..

‍ಲೇಖಕರು Admin MM

June 9, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: