ಸಂಘರ್ಷ
1
ಇಗರ್ಜಿಯ ಹೊಸ್ತಿಲ ಬಳಿ
ಚಪ್ಪಲಿಗಳೆರಡು ಏದುಸಿರು ಬಿಡುತ್ತಿವೆ;
ಗದ್ದೆ ದಾಟಿ ಏರಿ ಮೀರಿ
ಗುಡ್ಡ ಹತ್ತಿ ಮಣ್ಣು ಮೆತ್ತಿಕೊಂಡ
ಚಪ್ಪಲಿಗಳು ತಮ್ಮ ಪಾಪಗಳಿಗಾಗಿ
ಬಿಕ್ಕಿ ಬಿಕ್ಕಿ ಅಳುತ್ತಿವೆ-
ಇಗರ್ಜಿಯ ಮೊದಲ ಘಂಟೆ
ಇನ್ನು ಸದ್ದುಗೈಯ್ಯಬೇಕಷ್ಟೇ.,,.
2
ರೊಂಯ್ಯನೆ ಬಂದ ಕಾರಿಗೆ
ಎದ್ದ ಧೂಳು
ಆ ಪಾದರಿಯ
ಪ್ರಭೋದನೆಯ ಮಂತ್ರಮುಗ್ಧತೆಗೇ
ಮಂಕು ಬಡಿಸುತ್ತದೆ,
ಬೆಳ್ಳಗಿನ ಕಾರಿನಿಂದಿಳಿದ
ಕರಿ ಬೂಟುಗಳು
ಮಣ್ಣು ಮೆತ್ತಿದ ಚಪ್ಪಲಿಗಳ
ಎದೆಯ ಮೆಟ್ಟಿ ವಿರಮಿಸುತ್ತವೆ;
3
“ಮೊದಲಿಗರೆಲ್ಲಾ ಕಡೆಯವರಾಗುವರು
ಕಟ್ಟಕಡೆಯವರೂ ಮೊದಲಿಗರಾಗುವರು”
ಪಾದರಿ ಉಲಿದ ಏಸುವಿನ ಮಾತು
ಮಣ್ಣು ಮೆತ್ತಿದ ಚಪ್ಪಲಿಗಳ
ಕತ್ತ ಹಿಸುಕಿ ಕಂಗಾಲಾಗಿಸುವುದು..,
ಆ ನರಳುವಿಕೆಯಿಂದ ಅರಳಿದ
ಕರ್ರ್ರಗಿನ ಬೂಟುಗಳು
ಮಿರಮಿರ ಮಿಂಚುವವು…
ಕೊಂಕಣಿ ಮೂಲ: ಆಂಡ್ರ್ಯೂ ಎಲ್ ಡಿಕುನ್ನ
ಅನುವಾದ: ಜಾನ್ ಸುಂಟಿಕೊಪ್ಪ.
ಅನುವಾದ ಚನ್ನಾಗಿದೆ
Great ….
very nice ..uttama kavana
kaviteya ashaya channaagide