ಮಂಜುನಾಥ ಚಾರ್ವಾಕ
ವೇಲಂಕಣಿ ಚರ್ಚಿನ ಜಾತ್ರೆಗೆ ಸಂಸಾರ ಸಮೇತ ಊರವರೊಂದಿಗೆ ಹೋಗುವ ಮುಮಟಿ, ಮರಳಿ ಬರುವಾಗ ಯಾವುದೋ ಕನಸಿಗೆ ಜಾರುವವನಂತೆ ತಮಿಳುನಾಡಿನ ನಾಲ್ಕು ಚಕ್ರದ ಗಾಡಿ ಓಡಾಡಲಾಗದಷ್ಟು ಕಿರಿದಾದ ಓಣಿಗಳುಳ್ಳ ಸಣ್ಣ ಹಳ್ಳಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ಮನೆಗೆ ಮರಳಿ ಬಾರದವನೊಬ್ಬನ ಮನೆಗೆ ತಾನೇ ಅವನು ಎನ್ನುವವನ ಹಾಗೆ ಹೋಗಿ ಒಂದೆರಡು ದಿನ ಕಳೆವ ಕತಾ ಎಳೆಯ ಸುತ್ತ ತೆಗೆದಿರುವ ಚಿತ್ರವೇ ‘ನಲ್ ಪಗಲ್ ನೇರತ್ತು ಮಯಕಂ’
ಮೇಲ್ನೋಟಕ್ಕೆ ಮುಮಟ್ಟಿಯ ಸುತ್ತಲೇ ತೆಗೆದಿರುವ ಚಿತ್ರವಾಗಿ ಕಂಡರೂ, ಇದು ತಮ್ಮ ತಮ್ಮ ಸರಳ ಜೀವನಗಳ ದೈನಂದಿನ ಲಯದಲ್ಲಿ ಮುಳುಗಿ ಹೋದ ಜನರ ಕತೆ ಮತ್ತು ಸಹ ಜೀವಿಗಳ ಬಗೆಗೆ ಮನುಷ್ಯ ತೋರಬಹುದಾದ ಆರ್ದತೆ, ಅಂತಕರಣಗಳ ಚಿತ್ರಣದ ಕತೆ.
ಯಾರೋ ಅನಾಮಿಕ ಇದ್ದಕಿದ್ದ ಹಾಗೆ ಮನೆಗೆ ಬಂದರೆ ಎದುರಾಗಬಹುದಾದ ಅಸಂಬದ್ದ ಪರಿಸ್ಥಿತಿ ಸೃಷ್ಟಿಸಿ ತನ್ಮೂಲಕ ನಿರ್ದೇಶಕ ಮನುಷ್ಯನ ಭಾವನೆಗಳ ಭಾಷೆ , ಧರ್ಮ, ದೇಶಕಾಲಗಳ ಮೀರಿದ ಯೂನಿವರಿಸಾಲಿಟಿಯನ್ನು ಹೇಳುತ್ತಾ ಹೋಗುವ ರೀತಿ ಅದ್ಬುತ.
ಅಬ್ಬರ ಗದ್ದಲಗಳೇ ಸಿನೆಮಾ ಎಂದಾಗುತ್ತಿರುವ ಈ ಕಾಲದಲ್ಲಿ, ಒಂದು ಬಿಂದುವಿನಿಂದ ಶುರುವಾಗಿ ಇನ್ನೊಂದು ಬಿಂದುವಿನಲಿ ಕೊನೆಯಾಗಲೇ ಬೇಕಾದ ಕತಾ ಹಂದರಗಳ ಜೇಡರಬಲೆಯಲಿ ಸಿಲುಕಿರುವ ಸಿನೆಮಾ ಮಾದ್ಯಮದ ಕತಾ ನಿರೂಪಣೆಯ ಮಿತಿಗಳನ್ನು ಮೀರಿ ನಿರ್ದೇಶಕನ ಧೈರ್ಯ ಮೆಚ್ಚಲೇ ಬೇಕು.
ಅಂದಹಾಗೆ, ಈಗಾಗಲೇ V L Narasimhamurthy ಮತ್ತು Sripad Bhat ಅವರು ಹೇಳಿದ ಹಾಗೆ ಇದು ಮಾರ್ಕ್ವೆಜನ ಮಕಾಂಡೋದ ಬೇಸಗೆಯ ಮದ್ಯಾಹ್ನದ ಕಿರುನಿದ್ದೆಯಲ್ಲಿ (ಸಿನೆಮಾ ಹೆಸರಿನ ಅರ್ಥ ಕೂಡ ಅದೇ) ಜರುಗುವ ಸ್ವಪ್ನಲೋಕವೇ ಹೌದು .
ಸಿನೆಮಾ ತಿಯೇಟರಿನಲಿ ನೋಡಿ ಎರಡು ಮೂರುದಿನ ಅದೇ ಗುಂಗಿನಲ್ಲಿದ್ದೆನಾದರೂ, ಏನೂ ಬರೆಯಲಾಗಿರಲಿಲ್ಲ
ಈಗ ನೆಟ್ಫ್ಲಿಕ್ಸ್ನಲ್ಲಿದೆ , ಒಮ್ಮೆ ನೋಡಿ.
0 ಪ್ರತಿಕ್ರಿಯೆಗಳು