ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ
ಇವರ ಇತ್ತೀಚಿನ ಕೃತಿ ‘ಕಾಡ ಸೆರಗಿನ ಸೂಡಿ’
ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ.
ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ.
‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೂಡಿ ಹಿಡಿದು ಮೂರೂವರೆ ತಿಂಗಳಲ್ಲಿ ಅದನ್ನ ಬೆಳಗಿದ್ದೆ.
ಮಂಜುನಾಥ್ ಗೆ ‘ಚಾಂದ್’ ಕೈ ಕುಲುಕಿದ್ದು ಯಾವಾಗ ?
ಬಹುಶಃ ಹುಟ್ಟುವಾಗ್ಲೆ. ನನ್ನ ತಂದೆ ರಂಗಭೂಮಿ ಯಕ್ಷಗಾನ ಕಲಾವಿದರಾಗಿದ್ದರು. ಅವರಿಗೆ ಆ ಹೆಸರು ಬಂದದ್ದು ನನಗೂ ಮುಂದುವರೆದಿದೆ.
ಕಾಡ ಸೆರಗಿನ ಸೂಡಿ. ಮುಂದೆ ‘ನಾಡ ಒಡಲ ಮೋಡಿ’ ಬರಬಹುದಾ ?
ಇಲ್ಲ. ಬೇರೆ ವಿಷಯಗಳು ಇವೆ.
ಮಂಜುನಾಥ ಕೈಲಾಸ ಬಿಟ್ಟು ಇಲ್ಲೇನ್ ಮಾಡ್ತಿದಾರೆ ?
ಮಂಜುನಾಥ ಕೈಲಾಸ ಸೇರಲೇ ಇಲ್ಲ. ಮೊದಲಿನಿಂದಲೂ ಧರೆಯಲ್ಲಿಯೇ ಇದ್ದವನು.
ಮುಂದಿನ ಪಯಣ ?
ನಾನೊಬ್ಬ ಅಕ್ಷರ ಪ್ರೇಮಿ. ಈ ಅಕ್ಷರ ಪ್ರೇಮದೊಳಗೆ ಮುಂದುವರೆಯುವುದು.
0 ಪ್ರತಿಕ್ರಿಯೆಗಳು