ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಮಿ ಕೆಸರಾಯಿತೆಂದೇ ಬೀಜ ಮೊಳಕೆಯೊಡೆಯಿತು

ಕೆಲವು ದ್ವಿಪದಿಗಳು

– ಬಸವರಾಜ ಸೂಳಿಭಾವಿ

ಲಡಾಯಿ ಪ್ರಕಾಶನ

ತೀರ ನಾಜೂಕಾಗಿ ವ್ಯವಹರಿಸುವುದು ಬರಡಾಗಿಯೇ ಉಳಿಯಿತು

ಅಲ್ಲಿ ನೋಡು ಭೂಮಿ ಕೆಸರಾಯಿತೆಂದೇ ಬೀಜ ಮೊಳಕೆಯೊಡೆಯಿತು

ನಡೆವ ಹಾದಿಯ ನೋಡಿ ನಕ್ಕವರ ಮರೆಯುವುದೇನೂ ಕಷ್ಟವೇನಿಸಲಿಲ್ಲ

ರೆಪ್ಪೆ ಒದ್ದೆ ಮಾಡಿಕೊಂಡವರನು ಏನೂ ಮಾಡಿದರೂ ಮರೆಯಲಾಗಲಿಲ್ಲ!

ನೀ ಉರಿ ಹೊತ್ತ ಸೂರ್ಯನಾಗದೇ ಹೋದರೆ

ನಿನ್ನದೇ ಭೂಮಿ ನಿನ್ನ ಸುತ್ತ ತಿರುಗುವುದಿಲ್ಲ..!

ಮನೆಯಲಿ ಸ್ವರ್ಗ ಬಯಸಿದರೆ ತೋಳಬಂಧಿಯಾಗಿ ಇಂದು ಮನುಷ್ಯರಾಗೋಣ

ಕಣ್ಣೆದುರೆ ನರಕವು ಸೃಷ್ಟಿಯಾಗುವುದು ಬೇಕಿದ್ದರೆ ನಾವೂ ದೇವರಾಗಿ ಬಿಡೋಣ

ಏನೂ ಕಾಣದಿದ್ದರೂ ಈ ಇರುಳಿಗೇಕೆ ಒಲಿದೆ ?

ಬೆಳಕಿನಲ್ಲಿ ದೇಹಕಿಂತ ನೆರಳುಗಳೇ ಉದ್ದವಾಗುವುದು

ಅಂಬೆಗಾಲಿನಿಂದ ಸುರುವಾದ ಈ ಹಾದಿ

ಏನಿದ್ದರೂ ಚಿಟ್ಟೆಯಾಗಿ ಹಾರಿದಾಗಲೇ ಮುಗಿಯುವುದು

ಈ ಬಾರಿ ಯಾತನೆಯ ಬದುಕನ್ನಲ್ಲ ನಾ ಬರೆದಿದ್ದು ನಗುವಿನ ಬಗೆಗೆ

ದೋಷ ಎಲ್ಲಾಗಿತ್ತೋ? ಅದನ್ನೊದಿದ ಮೇಲೂ ಅವಳ ಕಣ್ಣಲ್ಲಿ ನೀರಾಡಿತು

 ]]>

‍ಲೇಖಕರು G

13 August, 2012

3 Comments

  1. Swarna

    ಸುಂದರ ಸಾಲುಗಳು

  2. vijayakumar hanchinal

    ನಮಸ್ತೆ ಬಸವರಾಜ ಸರ್, ನಿಮ್ಮ ದ್ವಿಪದಿಗಳು ದೀಪದ ಸಾಲುಗಳಂತಿವೆ…

    • ಬಸೂ

      ನಿಮ್ಮ ಸ್ಪಂದನಕ್ಕೆ ನಮನಗಳು ವಿಜಯಕುಮಾರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading