ಕೆಲವು ದ್ವಿಪದಿಗಳು
– ಬಸವರಾಜ ಸೂಳಿಭಾವಿ
ಲಡಾಯಿ ಪ್ರಕಾಶನ
೧
ತೀರ ನಾಜೂಕಾಗಿ ವ್ಯವಹರಿಸುವುದು ಬರಡಾಗಿಯೇ ಉಳಿಯಿತು
ಅಲ್ಲಿ ನೋಡು ಭೂಮಿ ಕೆಸರಾಯಿತೆಂದೇ ಬೀಜ ಮೊಳಕೆಯೊಡೆಯಿತು
೨
ನಡೆವ ಹಾದಿಯ ನೋಡಿ ನಕ್ಕವರ ಮರೆಯುವುದೇನೂ ಕಷ್ಟವೇನಿಸಲಿಲ್ಲ
ರೆಪ್ಪೆ ಒದ್ದೆ ಮಾಡಿಕೊಂಡವರನು ಏನೂ ಮಾಡಿದರೂ ಮರೆಯಲಾಗಲಿಲ್ಲ!
೩
ನೀ ಉರಿ ಹೊತ್ತ ಸೂರ್ಯನಾಗದೇ ಹೋದರೆ
ನಿನ್ನದೇ ಭೂಮಿ ನಿನ್ನ ಸುತ್ತ ತಿರುಗುವುದಿಲ್ಲ..!
೪
ಮನೆಯಲಿ ಸ್ವರ್ಗ ಬಯಸಿದರೆ ತೋಳಬಂಧಿಯಾಗಿ ಇಂದು ಮನುಷ್ಯರಾಗೋಣ
ಕಣ್ಣೆದುರೆ ನರಕವು ಸೃಷ್ಟಿಯಾಗುವುದು ಬೇಕಿದ್ದರೆ ನಾವೂ ದೇವರಾಗಿ ಬಿಡೋಣ
೫
ಏನೂ ಕಾಣದಿದ್ದರೂ ಈ ಇರುಳಿಗೇಕೆ ಒಲಿದೆ ?
ಬೆಳಕಿನಲ್ಲಿ ದೇಹಕಿಂತ ನೆರಳುಗಳೇ ಉದ್ದವಾಗುವುದು
೬
ಅಂಬೆಗಾಲಿನಿಂದ ಸುರುವಾದ ಈ ಹಾದಿ
ಏನಿದ್ದರೂ ಚಿಟ್ಟೆಯಾಗಿ ಹಾರಿದಾಗಲೇ ಮುಗಿಯುವುದು
೭
ಈ ಬಾರಿ ಯಾತನೆಯ ಬದುಕನ್ನಲ್ಲ ನಾ ಬರೆದಿದ್ದು ನಗುವಿನ ಬಗೆಗೆ
ದೋಷ ಎಲ್ಲಾಗಿತ್ತೋ? ಅದನ್ನೊದಿದ ಮೇಲೂ ಅವಳ ಕಣ್ಣಲ್ಲಿ ನೀರಾಡಿತು
]]>





ಸುಂದರ ಸಾಲುಗಳು
ನಮಸ್ತೆ ಬಸವರಾಜ ಸರ್, ನಿಮ್ಮ ದ್ವಿಪದಿಗಳು ದೀಪದ ಸಾಲುಗಳಂತಿವೆ…
ನಿಮ್ಮ ಸ್ಪಂದನಕ್ಕೆ ನಮನಗಳು ವಿಜಯಕುಮಾರ