ಭುವನೇಶ್ವರಿ ಹೆಗ್ಡೆ
ಇವತ್ತು ನನ್ನ ವ್ರತ್ತಿ ಜೀವನದ ಒಂದು ಸ್ಮರಣೀಯ ದಿನ
ನನ್ನಿಷ್ಟದ ಪ್ರಕಾರ ನಮ್ಮ ಕಾಲೇಜಿನಲ್ಲಿ ’ಬನಸಿರಿ ಬಯಲು ವೇದಿಕೆ” ಅಸ್ತಿತ್ವಕ್ಕೆ ಬಂತು .
ನಮ್ಮ ಹನಿಗವಿ ಮಿತ್ರ ಡುಂಡಿರಾಜ್ ಬಿದಿರಬಾಗಿಲು ತೆರೆದು ಬನಸಿರಿಯೊಳಗೆ ಪ್ರವೇಶಿಸಿ ವಿಧ್ಯಾರ್ಥಿ ಕವಿಗೋಷ್ಟಿಯನ್ನು ಆಸ್ವಾದಿಸಿ ತಮ್ಮ ಎಂದಿನ ಹನಿ ಸವಿ ಉಣಿಸಿ ಮೇಷ್ಟ್ರುಗಳ ಮುಖದಲ್ಲೂ ನಗೆ ಚಿಮ್ಮಿಸಿದರು. ಯುವ ವಿದ್ಯಾರ್ಥಿಗಳಂತೂ ಫುಲ್ ಖುಶ್
Congratulation ಮೇಡಂ. ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ನಗೆ ಬರಹಗಳನ್ನು ಸದಾ ಓದುತ್ತಿದ್ದೆ. ನಾನೂ ಹೀಗೆ ಬರೆಯಬೇಕೆನ್ನುವ ಹಂಬಲವಿತ್ತು.
ನಮಸ್ಕಾರಗಳು.
ಪ್ರಿಯ ಭುವನೇಶ್ವರಿ ಹೆಗ್ಡೆ ಅವರಿಗೆ:
ನಮಸ್ಕಾರ. ಬಹು ದಿನಗಳ ಮೇಲೆ ನಿಮ್ಮನ್ನು ಹಾಗೂ ನಿಮ್ಮ ಕಾರ್ಯಕ್ರಮಗಳ ವಿವರಗಳನ್ನೂ ನೋಡಿ ತುಂಬಾ ಸಂತೋಷವಾಯಿತು. ಮತ್ತೆ ಮಂಗಳೂರಿನ ನೂರು ವರ್ಷದ ಸರಕಾರಿ ಕಾಲೇಜು, ನಿಮ್ಮ ಲೇಖನಗಳು, ಡುಂಡಿರಾಜ್ ಅವರ ಕವನಗಳು ಎಲ್ಲವೂ ನೆನಪಿಗೆ ಬಂದು, ನಾನು ನಿಮ್ಮ ತೋಟದಲ್ಲಿ ಇರಬೇಕಿತ್ತು ಎನಿಸಿತು. ಎಲ್ಲವೂ ಶುಭಕರವಾಗಲಿ. ಸಿ. ಎನ್. ರಾಮಚಂದ್ರನ್
ಸರ್, ನಿಮ್ಮ ಪ್ರತಿಕ್ರಿಯೆ! ನಿರಿಕ್ಶಿಸಿರಲಿಲ್ಲ. ತಡವಾಗಿ ನೋದಿದೆ. ತುಂಬಾ ತುಂಬಾ ಖುಶಿಯಾಯ್ತು. ಧನ್ಯವಾದಗಳು ಸರ್. ನೀವೇನೋ ಮಂಗಳೂರು ಬಿಟ್ಟು ಬೆಂಗಳೂರು ಸೇರಿದಿರಿ. ಇಲ್ಲಿ ಸಾಹಿತ್ಯಿಕ ಚಟುವಟಿಕೆಗಳೇ ಅಪರೂಪವಾದವು. ಬನ್ನಿ ಸಾರ್ ಮರದಡಿ ಸಾಹಿತ್ಯ ಗೋಶ್ಟಿ ಮಾಡೋಣ . ಮನೆಯವರಿಗೆ ನಮಸ್ಕಾರ ತಿಳಿಸಿ ಆದರಗಳೊಡನೆ ಭು. ಹೆ.