ಮಡಿಕೇರಿಯಲ್ಲಿ ಈಗ ತಾನೆ ನಡೆದ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ೮೧ ಸಾಹಿತ್ಯ ಸಮ್ಮೇಳನದ ಸ್ಥಳ ನಿರ್ಧಾರವಾಗಿದೆ
ಮುಂದಿನ ಸಮ್ಮೇಳನ ಹಾವೇರಿಯಲ್ಲಿ ನಡೆಯಲಿದೆ
ಕಲಬುರ್ಗಿ, ಬಳ್ಳಾರಿ ಮತ್ತು ಹಾವೇರಿ, ಈ ಮೂರೂ ಹೆಸರುಗಳೂ ಚರ್ಚೆಯಲ್ಲಿದ್ದು ಕಡೆಗೆ ಸಮ್ಮತವಾದ ಹೆಸರು ಹಾವೇರಿ.
ಹಾವೇರಿ ಜಿಲ್ಲಾ ರಚನೆ ಆಗಿದ್ದು 1996 ರಲ್ಲಿ. ಅಲ್ಲಿ ಇಲ್ಲಿಯವರೆಗೆ ಒಂದೂ ಸಾಹಿತ್ಯ ಸಮ್ಮೇಳನ ನಡೆದಿರುವುದಿಲ್ಲ.



ಎಲ್ಲ ಅಂಕಣಗಳನ್ನವಲೋಕಿಸಿದ ನನಗೆ ಅನಿಸಿದ್ದು… ಇದು ಸಾಹಿತ್ಯ ಸಮ್ಮೇಲನ ಎನ್ನುವುದಕ್ಕಿಂತ ಸಾಹಿತಿಗಳ ಸಮ್ಮೇಲನ ಎನ್ನಬಹುದಿತ್ತೇನೋ ಅಂತ. ಮತ್ತೆ ಕನ್ನಡ ಇಂದು ಬದುಕಿದ್ದದ್ದು ಹಳ್ಳಿಯ ಕುಂಬಾರ ಕಮ್ಮಾರ ಅಕ್ಕಸಾಲಿ ರೈತ ಕೃಷಿ ಕೂಲಿ ಕಾರ್ಮಿಕನ ಜೋಪಡಿಗಳಲ್ಲಿ, ಆ ಕುರಿತ ಯಾವ ಗೋಷ್ಟಿಗಳೂ ಇಲ್ಲ.. ಅವರನ್ನು ಕಾಣುವುದೂ ಇಲ್ಲ ಇಲ್ಲಿ. ಇಂದು ವಿಜ್ಞಾನದೆಡೆಗೆ ಆಕರ್ಷಿತರಾಗಿ ನಮ್ಮ ವಿದ್ಯಾರ್ಥಿಗಳು ಆಗ್ಲದ ಮೊರೆಹೋಗುತ್ತಿದ್ದಾರೆ.. ಅವರಲ್ಲಿ ಕನ್ನಡವನ್ನು ಜಾಗೃತಗೊಳಿಸಬಲ್ಲ, ಅವರನ್ನು ಕನ್ನಡಕ್ಕೆ ಸೆಳೆಯಬಲ್ಲ ಯಾವ ಕಾರ್ಯಕ್ರಮವೂ ಕಾಣಲಿಲ್ಲ,
ಕನ್ನಡ ಬಿಟ್ಟು ತುಂಬ ವರ್ಷ ಆದವರು ಒಂದೆಡೆ ಸೇರಿದ ಪಿಕ್ ನಿಕ್ ಆಗಿತ್ತು ಎನ್ನಬಹುದು.