ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಕಿಗೆ ಬೇಧವಿಲ್ಲ..

ಬಾನು ಬೆಳಗಿತು..

-ಶಿವಾನಂದ ತಗಡೂರು

ಯಾರು ದೀಪ ಹಚ್ಚಿದರೇನು
ಬೆಳಕಿಗೆ ಬೇಧವಿಲ್ಲ

ಯಾವ ಹಾಡಿಗೂ ಗಂಧ ಗಾಳಿಗೂ
ಬೆಂದು ಉರಿವ ಬೆಂಕಿಗೆ ಬೇಲಿ ಏನು?

ಬೋಧಿ ಮರ ಸುರಿವ ನೆರಳಿಗೆ
ಋಣದ ಸ್ವಾರ್ಥವಾದರೂ ಇದೆಯೇ?

ಮೋಡ ಹಡೆದು ಸುರಿವ ಮಳೆಗೆ
ಕಾಡ ಕಣಿವೆ ಕೊರೆದು ಹರಿವ ನದಿಗೆ
ಮಣ್ಣ ಸೀಳಿ ತೂಗುವ ತೆನೆಗೆ
ಕರಿಯ ಮೇಲೆ ಕುಂತ
ಚಾಮುಂಡಿಯ ಸಿಂಗಾರದೂವಿಗೆ
ಧರ್ಮವೆಲ್ಲಿ ?

ಜಾತಿ, ಧರ್ಮ ಬಗೆದು ನೋಡುವ
ದೇವರುಗಳು ಲೋಕದಲ್ಲಿಲ್ಲ
ಇಲ್ಲಿ ಮನುಷ್ಯರು ಮಾತ್ರವೇ ಇದ್ದಾರೆ

ಸಪ್ತ ಸಾಗರಗಳಾಚೆ
ಕನ್ನಡದ ಡಿಂಡಿಮ
ಲೋಕವೆಲ್ಲ ನೆರೆದು ನಿಂತಿದೆ
ಹಬ್ಬ ನೋಡಲು
ದೊರೆಯು ದೀನನು ಒಂದಾದ
ಮಹಿಷನೂರಿನಲಿ
“ಹೃದಯ ದೀಪ”ಗಳ ಮೆರವಣಿಗೆ

ಎಲ್ಲರ ಹೃದಯದಲ್ಲೊಂದು
ಪ್ರೇಮದ ಹಣತೆ ಉರಿಯಲಿ
ಜಗದಗಲ ಮುಗಿಲಗಲ
ಕನ್ನಡದ ಬಾನು ಬೆಳಗಲಿ.

‍ಲೇಖಕರು Admin

24 September, 2025

1 Comment

  1. sushilendracharya kundaragi

    superrrrrr poem
    belakuuuuu yarindaluu sigabahudu mast

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading