ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .
ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.
ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.
ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..
ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ
ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು
ಕಿರಣ್ ಕಂಗೊಕರ್ ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ.. ಬರೆದರು
ಈಗ ವಿನಿ ನಾಯಕ್ ತಮ್ಮ ದನಿ ಸೇರಿಸಿದ್ದಾರೆ
ಓದಿ
ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ
ನೀವೂ ಕವಿತೆ ಮುಂದುವರೆಸಿ
ಮುಸುಕು ಅನಿವಾರ್ಯವಾಗಿಬಿಟ್ಟಿತು
ವಿನಿ ನಾಯಕ್
ಇದು ಮುಖವಾಡವಲ್ಲ ಗೆಳೆಯ;
ಬದುಕು ಕಲಿಸಿದ ಪಾಠಗಳು
ನೀನು ಬರುವದಕ್ಕೂ ಮುಂಚೆ
ಕಳೆದು ಹೋದ ಕಾಲ ಕಠಿಣವಾಗಿತ್ತು.
ನಾನೂ ಕಠಿಣವಾಗಿದ್ದೇನೆ ಈಗ.
ಕಪ್ಪು ಬಣ್ಣದ ಹಳೆಯ ದಿನಗಳು
ನನ್ನೊಳಗೊಂದು ಕಪ್ಪು
ಕಂದಕವನ್ನೇ ಕೊರೆದುಬಿಟ್ಟವು.
ರಹಸ್ಯಗಳಿದ್ದವು ಸುಳ್ಳುಗಳಿದ್ದವು
ದೌರ್ಜನ್ಯ ಪಶ್ಚಾತಾಪಗಳಿದ್ದವು
ನನ್ನನ್ನು ವಕ್ರಗೊಳಿಸಿದವು.
ಮುಸುಕು ಅನಿವಾರ್ಯವಾಗಿಬಿಟ್ಟಿತು
ಭಯ ಹುಟ್ಟಿಕೊಂಡಿತು.
ಈಗಲೂ ಭಯ, ಗೆಳೆಯ
ನಿನ್ನೆದೆಗೆ ಒರಗಿ ಮಲಗಿದಾಗ
ನಿನ್ನ ಬಿಸಿ ಉಸಿರು ನನ್ನ ತಾಕಿದಾಗ
ನಿನ್ನ ಪ್ರೀತಿಯ ಧಗೆ ನನ್ನಾವರಿಸಿದಾಗ
ಎಲ್ಲ ಕಳೆದು ಹೋದರೆ ಎಂಬ ಭಯ
ನೀನೊಂದು ಚಟವಾಗಿಬಿಟ್ಟರೆ
ನಿರೀಕ್ಷೆಗಳೆಲ್ಲ ಹುಸಿಯಾಗಿಬಿಟ್ಟರೆ
ಮಾಯದ ಮನದ ಗಾಯವಾಗಿಬಿಟ್ಟರೆ…
ಮಂದ ಜ್ವಾಲೆಯಲ್ಲಿ
ಮಂದ ಗತಿಯಲ್ಲಿ ಬೇಯಿಸಿದ
ಅಡುಗೆಯ ಪರಿಮಳ
ಅತ್ಯಧ್ಬುತವಂತೆ.
ನಾವೂ ನಿಧಾನವಾಗೋಣ.
ಕಲ್ಪನೆಗಳಲ್ಲಿ ಒಮ್ಮೆಲೆ ಮುಳುಗಿ
ಉಸಿರು ಕಟ್ಟದಿರಲಿ.
ನಮ್ಮ ನಡತೆ ನಮ್ಮ ಬುದ್ಧಿಗಳೆಲ್ಲ
ನಿಧಾನಕ್ಕೆ ಬೆರೆಯಲಿ.
ಸದ್ಯಕ್ಕೆ
ನನ್ನೊಂದಿಗೇ ನಾನು ಸುಖಿ.
ನನಗೇ ನಾನೇ ಆಪ್ತ ಗೆಳತಿ.
ಕತ್ತಲಲ್ಲಿ ಸ್ವಚ್ಚಂದವಾಗಿ
ಹರಡಿದ ನ್ಯೂನ್ಯತೆಗಳೆಲ್ಲ
ಬೆಳಕಲ್ಲಿ ಕೆನ್ನೆಯ ರಂಗಾಗಿ
ಕಾಡುತಿವೆ.
Tumba Chennagide Vini Nayak.. Padagala balake sundaravaagide.. idondu mechina kavithe endare tappagadu..
dhanyavadagalu 😉
ಎಸ್ .ಪಿ. ವಿಜಯಲಕ್ಶ್ಮಿ
ಸ್ವೇಚ್ಛೆ ಕಟ್ಟಿಕೊಟ್ಟ ದುರಂತಗಳು ಮನಸನ್ನು ಬಾಗಿಸಿ, ಹದಗೊಳಿಸಿಟ್ಟು, ಇದೀಗ ಸಂಯಮದ ಚೌಕಟ್ಟಿನಲ್ಲಿ ಕಾಮನೆಯನ್ನು ಶುದ್ಧವಾಗಿಸಿಕೊಳ್ಳುವ ಪರಿ ಚೆನ್ನಾಗಿದೆ.
ತಪ್ಪು ಹೆಜ್ಜೆಗಳು ನೆರಳಾಗಿ ಕಾಡಿದ , ಕಾಡುವ ಹಿನ್ನೆಲೆಯಲ್ಲಿ , ಮುಂದಿನ ಬದುಕಿನ ಹೆಜ್ಜೆಗಳು ಎಚ್ಚರಿಕೆಯದಾಗಿರಬೆಕು ಎನ್ನುವ ಸಂಯಮ ಬಹಳ ಸುಂದರವಾಗಿ ಮೂಡಿಬಂದಿದೆ ……..S.P.Vijaya Lakshmi
thank you vijayalakshmi ma’m 😉