ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ …

ಸಮರಸ

ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು.

8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.

ಮೊದಲನೇ ಗುಂಪು ಹೀಗಿತ್ತು..

1.      ಎಚ್ ನರಸಿಂಹಯ್ಯನವರ ಆತ್ಮಕತೆ ________________

2.     “ಮೇಲೆ ನೋಡೆ ಕಣ್ಣ ತಣಿಪ.. ನೀಲ ಪಟದಿ ವಿವಿಧ ರೂಪ” ಬರೆದ ಕವಿ ______________________

3.     “ಕನ್ನಡ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್” ಪುಸ್ತಕ ಬರೆದದ್ದು – ಅ) ತ್ರಿವೇಣಿ ಆ) ಎಂ. ಕೆ. ಇಂದಿರಾ ಇ) ಸಾಯಿಸುತೆ

4.    ರಾಮಕೃಷ್ಣ ಅಭಿನಯದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಲಚಿತ್ರ ಇದು ______________

5.     ಪಂಜೆಮಂಗೇಶರಾಯರ ಕಾವ್ಯನಾಮ ____________________

6.    ಬೇಲೂರು ಯಾವ ನದಿ ದಡದಲ್ಲಿದೆ? _______________

7.     ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ______________________

8.     “ಕಬ್ಬಿಗರ ಕಾವ್ಯ” ಬರೆದವರು ______________

ಇದಕ್ಕೆ ಉತ್ತರಗಳು ಕೆಳಕಂಡಂತಿವೆ..
೧. ಹೋರಾಟದ ಹಾದಿ
೨. ಡಿ. ವಿ. ಜಿ
೩, ಎಂ. ಕೆ. ಇಂದಿರಾ
೪. ಅಬಚೂರಿನ ಪೋಸ್ಟಾಫೀಸು
೫. ಕವಿಶಿಷ್ಯ
೬. ಯಗಚಿ (ಯಗಚಿ ಹೇಮಾವತಿಯ ಉಪನದಿಯಾದ್ದರಿಂದ ಹೇಮಾವತಿ ಎಂಬ ಉತ್ತರವೂ ಸರಿ ಎಂದು ಪರಿಗಣಿಸಲಾಗಿದೆ)
೭. ಮುಳ್ಳಯ್ಯನ ಗಿರಿ
೮. ಅಂಡಯ್ಯ

13 ಜನರು ಈ ಗುಂಪಿನ ರಸಪ್ರಶ್ನೆಗೆ ಉತ್ತರಿಸದರು.
5 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಮೂರು ಜನ) ಜಿ ಕಲ್ಲೇಶ್ವರಪ್ಪ, ಜಗದೀಶ್ ಕೆ ಎಸ್, ಜೆ ಸಿ ಭಾರವಿ
3 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು  — (ಒಬ್ಬರು)
2 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಏಳು ಜನ)
1 ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದವು — (ಇಬ್ಬರು)

ಎರಡನೇ ಗುಂಪಿನ ಪ್ರಶ್ನೆಗಳು.

1. “ನಾ ಕಂಡ ಪುಟ್ಟಣ್ಣ ಕಣಗಾಲ್” ಪುಸ್ತಕದ ಕರ್ತೃ ________________

2. “ವಿಗಡ ವಿಕ್ರಮರಾಯ” ಇವರ ನಾಟಕ ____________________

3. ಬೀchi ಅವರ ಆತ್ಮಕಥೆ ____________________

4. ‘ಹೆಣ್ಣು ಹೆಣ್ಣೆ೦ದೇತಕೆ ಬೀಳುಗಳೆವರು?’ ಎ೦ದ ವಚನಗಾರ್ತಿ ಯಾರು? ____________

5. ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕದ ಮುಖಪುಟಕ್ಕೆ ಚಿತ್ರ ಬಿಡಿಸಿದ ಕಲಾವಿದ ______________

6. ೨೦೧೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಕೃತಿ ___________________

7. “ನಾಗರ ಹಾವೇ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ!” ಬರೆದ ಕವಿ _____________________

8. ಪೊರ್ಚುಗೀಸರ ವಿರುದ್ಧ ಹೋರಾಡಿದ ಕರಾವಳಿಯ ರಾಣಿ ಯಾರು? ______________

ಇದಕ್ಕೆ ಉತ್ತರಗಳಿ ಕೆಳಕಂಡಂತಿವೆ..
೧. ಡಿ. ಬಿ. ಬಸವೇಗೌಡ
೨. ಸಂಸ
೩. ನನ್ನ ಭಯಾಗ್ರಫಿ
೪. ಸಂಚಿ ಹೊನ್ನಮ್ಮ
೫. ಕೆ.ಕೆ.ಹೆಬ್ಬಾರ್
೬. ಪಾಪು ಗಾಂಧಿ, ಬಾಪು ಗಾಂಧಿ ಆದ ಕತೆ
೭. ಪಂಜೆ ಮಂಗೇಶ ರಾಯರು
೮. ರಾಣಿ ಅಬ್ಬಕ್ಕ

11 ಜನರು ಈ ಗುಂಪಿನ ರಸಪ್ರಶ್ನೆಗೆ ಉತ್ತರಿಸದರು.
5 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಒಬ್ಬರು)  ಡಾ| ಎಚ್ ವಿ ವೇಣುಗೋಪಾಲ್
3 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು  — (ಒಬ್ಬರು)
2 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಇಬ್ಬರು)
1 ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದವು — (ಆರು ಜನ)
ಯಾವುದೇ ಪ್ರಶ್ನೆಗೆ ಉತ್ತರಿಸದವರು — (ಒಬ್ಬರು)

೧೩ ನವೆಂಬರ್ ನ ಜಯಶಾಲಿಗಳು
ಜಿ ಕಲ್ಲೇಶ್ವರಪ್ಪ, ಜಗದೀಶ್ ಕೆ ಎಸ್, ಜೆ ಸಿ ಭಾರವಿ, ಡಾ| ಎಚ್ ವಿ ವೇಣುಗೋಪಾಲ್

ಇವರಿಗೆ ಆಕೃತಿ ವತಿಯಿಂದ ತಲಾ ೨೫೦ ರೂಗಳ ಗಿಫ್ಟ್ ಕೂಪನ್‌ಗಳನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ.
ಆಕೃತಿ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು! ಎಲ್ಲಾ ವಿಜೇತರಿಗೆ ಅಭಿನಂದನೆಗಳು. ನೀವೂ ಭಾಗವಹಿಸಿ!

‍ಲೇಖಕರು avadhi

14 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading