ಬುದ್ಧ ಹಾಲುನಗೆ ಬೀರಿ

ಬುದ್ಧ ಪೂರ್ಣಿಮೆ
 ಸುಧಾ ಆಡುಕಳ

ಹಾಲು ಸುರಿಯುವ ಇರುಳು
ಕಡಲ ದಂಡೆಯ ಮರಳು
ಅಗಾಧ ಜಲರಾಶಿಯೆದುರು
ನಮ್ಮ ಭೇಟಿ
ಗುರುತು ಪರಿಚಯವಿಲ್ಲ
ಆತ್ಮ ಬಂಧುಗಳು
ಹೇಗೆ ಒಂದಾದೆವು?
ಅರಿವೇ ಇಲ್ಲ
ಸಂಧಿಸಿದ ಆ ಕ್ಷಣ
ಒಂದರಗಳಿಗೆ ಮೌನ
ಮತ್ತೊಂದು ಮುಗುಳ್ನಗು
ಮರುಕ್ಷಣ ನಿನ್ನ
ತೋಳ ತೆಕ್ಕೆಯಲಿ ನಾನು
ನನ್ನ ಮಡಿಲ ಮಗು ನೀನು!

ಹೆರಳ ರಾಶಿಯ ಹರಡಿ
ನೇವರಿಸುವಾಗ ನೀ
ರಾಗವಾಗಿ ಮಿಡಿದೆ ನಾನು
ನಿನ್ನೆದೆಯ ಮೇಲೆ
ಬೆರಳಲ್ಲಿ ಬರೆದೆ
ನನ್ನದೇ ಹೆಸರನ್ನು
ನನ್ನ ಬೆನ್ನಿನ ಮೇಲೆ
ನಿನ್ನ ಹೆಸರಿನ ಗುರುತು
ಕಡಲ ಭೋರ್ಗರೆತ!
ತೆರೆಯ ಮಾರ್ದನಿ
ಮರುಗಳಿಗೆ ಎಲ್ಲ
ಶಾಂತ, ನಿಶಾಂತ
ಕಪ್ಪುಬಿಳುಪಿನ ಚಿತ್ರ
ವಿಶಾಲ ಕಡಲು
ಒಂದು ಇರುಳು, ಎರಡು ನೆರಳು
ಅಂಗಾತ ಮಲಗಿ
ಆಗಸವ ದಿಟ್ಟಿಸಿದರೆ
ಬುದ್ಧ ಹಾಲುನಗೆ ಬೀರಿ
ನಗುತ್ತಿದ್ದ!
ಮಿಕ್ಕಿದ್ದೆಲ್ಲವೂ ವಿಷ
ಬೇರೆಯಾದೆವು ನಾವು
ಆ ಕ್ಷಣದ ಇರವು
ಅದುವೇ ಸತ್ಯ
ಬುದ್ಧವಾಣಿಯ ಸದ್ದಿಗೆ
ಕನಸು ಹರಿದು ಬೆಳಗಾಯಿತು

‍ಲೇಖಕರು nalike

May 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: