ಬುದ್ಧ ಮತ್ತು ಕಾಲಾನಮಕ್ ಎಂಬ ಭತ್ತದ ತಳಿ

ಮಲ್ಲಿಕಾರ್ಜುನ ಹೊಸಪಾಳ್ಯ

ಇಂದು ಬುದ್ಧ ಪೂರ್ಣಿಮೆ. ಈ ನೆಪದಲ್ಲಿ ಕಾಲಾನಮಕ್ ಎಂಬ ದೇಸಿ ಭತ್ತದ ತಳಿ ನೆನಪಾಯಿತು. ಬುದ್ಧನಿಗೂ ಈ ದೇಸಿ ಭತ್ತಕ್ಕೂ ಏನು ಸಂಬಂಧ ಅಂದಿರಾ. ಈ ಸುವಾಸನಾಭರಿತ ಕಪ್ಪಕ್ಕಿ ತಳಿ ಬುದ್ಧನ ಕಾಲದಿಂದಲೂ (ಕ್ರಿ.ಪೂ 600) ಇದೆ. ಅದೇ ದೊಡ್ಡ ಅಚ್ಚರಿ. ಕಿಸಾ ಗೌತಮಿ ಬುದ್ಧನಿಗೆ ನೀಡಿದ ಪಾಯಸ ಇದೇ ಅಕ್ಕಿಯಿಂದ ತಯಾರಿಸಿದ್ದು ಎನ್ನುತ್ತಾರೆ ಪಶ್ಚಿಮ ಬಂಗಾಳದ ಭತ್ತ ವಿಜ್ನಾನಿ ಡಾ. ಅನುಪಮ್ ಪೌಲ್.

ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸಾಕಷ್ಟು ಜನಪ್ರಿಯವಾಗಿದೆ ಮತ್ತು ಇದನ್ನು ಉತ್ತರ ಪ್ರದೇಶದ ಪರಿಮಳಭರಿತ ಕಪ್ಪು ಮುತ್ತು ಎಂದೂ ಕರೆಯುತ್ತಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಈ ತಳಿಯನ್ನು ‘ವಿಶ್ವದ ವಿಶೇಷ ಅಕ್ಕಿಗಳಲ್ಲಿ ಒಂದು ಎಂದು ಗುರುತಿಸಿದೆ.

ನೇಪಾಳ ಗಡಿಯಲ್ಲಿರುವ ಅಲಿಗರ್ವಾ (ಸಿದ್ಧಾರ್ಥನಗರ ಜಿಲ್ಲೆ, ಉತ್ತರ ಪ್ರದೇಶ) ಪ್ರದೇಶದಲ್ಲಿ ಉತ್ಖನನ ಮಾಡುವಾಗ ಅಲ್ಲಿನ ಅಡುಗೆ ಕೋಣೆಯೊಂದರಲ್ಲಿ ಈ ಭತ್ತದ ಕಾಳು ಪತ್ತೆಯಾಗಿವೆ. ಅಲಿಗರ್ವಾ ಪ್ರದೇಶವೇ ನಿಜವಾದ ಕಪಿಲ ವಸ್ತು ಎನ್ನಲಾಗುತ್ತದೆ.

ಬಾಸುಮತಿಗಿಂತಲೂ ಸುವಾಸನೆಯುಳ್ಳ ಈ ತಳಿಯ ಅಕ್ಕಿ ಅಮೆಜಾನ್ ಹಾಗೂ ಇನ್ನಿತರೆ ಆನ್ ಲೈನ್ ಮಾರಾಟ ತಾಣಗಳಲ್ಲಿ 300 ರೂ. ಕಿಲೋ ಮಾರಾಟವಾಗುತ್ತಿದೆ. ಕೆಲವರಂತೂ ಬುದ್ಧ ರೈಸ್ ಅಂತಲೇ ಬ್ರ್ಯಾಂಡ್ ಮಾಡಿದ್ದಾರೆ.

‍ಲೇಖಕರು Avadhi

May 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. km vasundhara

    ವಿಶೇಷ ಮಾಹಿತಿ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು

    ಪ್ರತಿಕ್ರಿಯೆ
  2. Mallikarjuna Hosapalya

    ಧನ್ಯವಾದಗಳು, ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: