ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಸಿ ಬಿಡದಷ್ಟು ಮಡಿಲ ಪ್ರೀತಿ

ನಿನ್ನೆ ಪ್ರಕಟವಾಗಿದ್ದ ಎಂ ಎಸ್ ಮೂರ್ತಿಯವರ ರೇಖಾ ಚಿತ್ರಕ್ಕೆ ರವಿ ಮೂರ್ನಾಡು ಅವರು ಬರೆದ ಕವನ ನಿಮಗಾಗಿ.

– ಚಿತ್ರ ಎಂ ಎಸ್ ಮೂರ್ತಿ, ಕವನ  ರವಿ ಮೂರ್ನಾಡು, ಕ್ಯಾಮರೂನ್

 

ಕಣ್ಣು ಬಂತು ಚಳಿಬಿಸಿಗೆ

ಮುಲುಕುಗಳು ಆಕಳಿಸಿ

ತೊಟ್ಟಿಕ್ಕಿದ ಹನಿಯಲ್ಲೂ

ತಿಕ್ಕಿ ಸಿಲುಕುಗಳು !

ಶ್ರಾವಣ ಬಂತೆಂದರೆ..

ಮುಚ್ಚಳಿಕೆಯೊಳಗೂ…

ಚಳಿಯನರಸುವ ಬಿಸಿ !

ಖಂಡ ಖಂಡವೂ ಅವನು

ಮಂಜುಗೆಡ್ಡೆ… ಹಗುರ

ಅವಳ ಖಂಡದ ಕೆಂಡಕೆ

ಕರಗಿ ಕಳೆವ ಭಾರ !

ಹೆಣ್ಣೊಂದು ಅರ್ಧ

ಬಂದಾಗ….

ಇನ್ನರ್ಧ ಗಂಡು ಇಳಿದಾಗ

ಭೂಮಿ ದುಂಡಗಿದೆ

ಅರ್ಧಗಳು ಒಂದಾದಾಗ !

ಇಗೋ ಇಲ್ಲಿ ಭುವಿ

ಮೇಲೆ ಭಾನು

ಝಣ ಝಣ ಬಿಸಿಲು

ಜಿಟಿ ಜಿಟಿ ಮಳೆಗೆ

ತೊರೆ-ನೆರೆಯೆದ್ದ ನದಿ

ಹರಿದು ಜೀವದ ಹಸಿರು

ಎಲೆಗೆ ಹನಿ ಬೆವರು !

ತೊಟ್ಟಿಕ್ಕಿ ತೆನೆ ಪೈರು

ಗಾಳಿ ತೀಡಿ ಮುಂಗುರುಳು !

ಈಗ….

ತುಟಿಯಿಟ್ಟ ಮಗುವಿಗೆ

ಬಿಸಿ ಬಿಡದಷ್ಟು ಮಡಿಲ ಪ್ರೀತಿ !

]]>

‍ಲೇಖಕರು G

30 July, 2012

2 Comments

  1. D.RAVI VARMA

    tumbaa claasic aagide

  2. Badarinath Palavalli

    ಭಾವತೀವ್ರತೆ ಮತ್ತು ಬಹು ಅರ್ಥ ಸಂಹಿತೆ ಈ ಕವನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading