ಯಾಕ ಒಲ್ಯಂತಿ

ಕೃಷ್ಣ ದೇವಾಂಗಮಠ
ಬರಲಾಕ ಯಾಕ ಒಲ್ಯಂತಿ
ಬಿಟ್ಟಹೋಗಾಕ ಮನಸಿಲ್ಲ ನಿನ್ನ
ಪಟಾ ತರಗೇಲಿಯ ಹಾಂಗ
ನೆಲಕ್ಕ ಬಿದ್ದರ
ಜೀವಾ ಬಿಲಿಬಿಲಿ ಅನ್ನದ್ಹ್ಯಾಂಗ
ಗರಕಿನೂ ಬೆಳೆಯದಂಥ ಮಣ್ಣಾಗ
ಮನೆ ಕಟ್ಟಲದ್ಹ್ಯಾಂಗಾದಾತೆ
ಗುಬ್ಬಚ್ಚಿ ಚಿಂವು ದನಿಯಿಲ್ಲದ
ಮನ ಅದ್ಹ್ಯಾಂಗ ತಡದಿತೆ
ಕೊಳಲು ಉರಿದಾಂಗ ಮನಸು ಮುರದರ
ದನಿ ಹ್ಯಾಂಗ ಆಚೆ ಬರತೈತಿ
ಒಡೆದ ಹಾಲಿನ ಗಿಣ್ಣ ಒಡೆಸಿ ಮಾಡು ಗಿಣ್ಣ
ಗಿಣ್ಣದಾಲಿನ ಗಟ್ಟಿ ಗಿಣ್ಣ ದ ರೂಪ ಒಂದೇ
ಬ್ಯಾರೆ ರುಚಿಯೋ ಎಲ್ಲ ಒಳಗಿನ ಮಹಿಮ ನಾ ಭಿರುಚಿಯ ಹಾಂಗ
ಬರದ ಹೋದರ ನೀನು
ಬರಸಿಡಿಲು ಬಡಿತೈತಿ
ಬರದ ನಾಡಾಂಗ ನನ್ನೆದಿಯ ಭೂಮಿ
ಬಿಟ್ಟು ಹೋದರ ನಿನ್ನ ಆಡಿಕೊಂಡಾರೆನ್ನ
ಕೈ ಬಿಟ್ಟು ಹೋದನಂತ
ಬರದ ಬಿಡದ ನಡು ಏನೈತಿ ಎಲ್ಲ
ಬಲ್ಲಾವ ಯಾವ ಶಿವನ
ಗುಡಿಯಾಗ ಕುಂತ ಕಲ್ಲೇನ





Good poem