ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬತ್ತೀಸ ರಾಗಗಳ ಮುಕುಂದ..

ಡಾ. ನಾಗರಾಜ .ಆರ್. ದೇಶಪಾಂಡೆ, ಹಾನಗಲ್

ಬತ್ತೀಸ ರಾಗಗಳು ಎತ್ತಹೋದವೊ‌ ಏನೋ
ಎತ್ತಣದೊ ಹೊಸರಾಗವ ನೆತ್ತಿ ಕೊಳಲಿಂದ ನುಡಿ
ಸುತ್ತ ನಿಂತಿಹ ಗೊಲ್ಲನತ್ತ ಮುಖ ಮಾಡುತ್ತ
ಸುತ್ತ ನೆರೆದಿಹ ಹಸುಗಳ್ಚಿತ್ತವನು ಗೆಲ್ವ ಈ
ಗತ್ತು ಇವನಿಗೆ ಮಾತ್ರ ಗೊತ್ತು ಎಂದಾದರೆ
ಮತ್ತಿವನೆ ಗೋವಿಂದ ನಿತ್ಯಾನಂದ ಮುಕುಂದ.

ಕರದೊಳಿಹ ಮುರಳಿಯನು
ಸರಸಾಗಿ ನುಡಿಸುತ್ತ
ಸ್ವರಲೋಕ ಸೃಷ್ಟಿಸುವ
ಸುರವಂದ್ಯ ಮುರವೈರಿ
ನರನಾರಿಯರನೆಲ್ಲ
ಮರಳು ಮಾಡುವನೀತ
ಸಿರಿರಮಣ ನವನೀತ
ಪುರುಷೋತ್ತಮ ಸಚ್ಚಿದಾನಂದನೀತ.

‍ಲೇಖಕರು avadhi

17 September, 2019

1 Comment

  1. prakash parvatikar

    very touching

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading