ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಶಾಂತ್ ಆಡೂರ್ ಕರೆ: ಕನ್ಯಾ ಉಳಿಸಿ..ಕನ್ಯಾ ಬೆಳಿಸಿ

ಪ್ರಶಾಂತ್ ಆಡೂರ್

ಜುಲೈ ೨, ೨೦೦೯. ನಂಗ ಇನ್ನೂ ನೆನಪದ ಅವತ್ತ ಗುರವಾರ, ನಾನು ನನ್ನ ಹೆಂಡತಿ ತೊರವಿಗಲ್ಲಿ ರಾಯರ ಮಠಕ್ಕ ಹೋಗಿ ಎರಡ ಪ್ರದಕ್ಷಿಣಿ ಹಾಕಿ ಕಲ್ಲಸಕ್ಕರಿ ಬಾಯಾಗ, ಮಂತ್ರಾಕ್ಷತಿ ತಲಿ ಮ್ಯಾಲೆ ಹಾಕ್ಕೊಂಡ ಬರೋದಕ್ಕು ಎದರಿಗೆ ಒಂದಿಷ್ಟ ಹುಡುಗರು ಅಗದಿ ಓಕಳಿ ಆಡ್ಕೋತ ಕುಣಕೋತ ಬರಲಿಕತ್ತಿದ್ದರು.
“ಲೇ, ಇಗ್ಯಾಕರಲೇ ಬಣ್ಣಾ, ಹೋಳಿ ಹುಣ್ಣಮಿ ಮುಗದ ಮೂರ ತಿಂಗಳಾತ, ಯಾರಿಗರ ಕನ್ಯಾ ಸಿಕ್ಕ ಲಗ್ನ ಫಿಕ್ಸ್ ಆತೇನ ಮತ್ತ?” ಅಂತ ನಾ ಕೇಳಿದರ
“ಇನ್ನ ಯಾಕ ಬೇಕ ಕನ್ಯಾ ಅಣ್ಣಾ?” ಅಂತ ಒಬ್ಬಂವ ಅಂದಾ, ಇನ್ನೊಬ್ಬಂವಾ
“ಏ, ನಿಂಗ ಸುದ್ದಿ ಗೊತ್ತಿಲ್ಲೇನ” ಅಂತ ನಂಗs ಕೇಳಿದಾ.

ಹಂತಾದ ಏನ ಆಗೇದರಲೇ ಛಂದಾಗಿ ಬಾಯಿ ಬಿಟ್ಟ ಹೇಳರಿ ಮಕ್ಕಳ ಅಂತ ಜೋರ ಮಾಡಿದ ಮ್ಯಾಲೆ
“ಅಣ್ಣಾ, ಇವತ್ತ ಬೆಳಿಗ್ಗೆ ದಿಲ್ಲಿ ಹೈಕೋರ್ಟನಾಗ ‘ಹೊಮೊ ಸೆಕ್ಸೂವಲಿಟಿ’ಗೆ ಜೈ ಅಂದಾರ, ಇನ್ನ ಮುಂದ ಸಲಿಂಗ ಮದುವಿ ಗೈರ ಕಾನೂನ ಅಲ್ಲಾ ಅಂತ ಡಿಸಿಸನ್ ಕೊಟ್ಟಾರ” ಅಂತ ಭಡಾ ಭಡಾ ನನ್ನ ಬಾಯಾಗ ಒಂದ ಧಾರವಾಡ ಫೇಡೆ ತುರುಕಿ ಮಠಕ್ಕ ಕಾಯಿ ಒಡಿಸಿಗೊಂಡ ಬರತೇವಿ ಅಂತ ಹೋಗೆ ಬಿಟ್ಟರು.
ನಾ ಖರೆ ಹೇಳ್ತೇನಿ ನಂಗ ಏನ ಮಾತಡಬೇಕ ತಿಳಿಲಾರದಂಗಾಗಿ ಎದಿ ತುಂಬಿ ಬಂತ. ಬಾಜುಕ ಇದ್ದ ಹೆಂಡ್ತಿ ಹೆಗಲ ಹಿಡಕೊಂಡ ಸಮಾಧಾನ ಮಾಡ್ಕೊಂಡ ಮನಸ್ಸಿನಾಗ ಟಚ್ ವುಡ್ ಅಂದ ಅಲ್ಲಿಂದ ಮನಿಗೆ ಹಾದಿ ಹಿಡದೆ.
ಅಲ್ಲಿ ಇದ್ದ ಎಲ್ಲಾ ಹುಡುಗರು ಮುವತ್ತ ದಾಟಿದವರು. ಎಲ್ಲಾ ತೊರವಿ ಗಲ್ಲಿ, ದೇಸಾಯರ ವಾಡಾ, ವಾಳ್ವೇಕರ ಚಾಳಿನ ಹುಡುಗರು. ಒಬ್ಬರದೂ ಲಗ್ನ ಆಗಿದ್ದಿಲ್ಲಾ. ಆಗಿದ್ದಿಲ್ಲಾ ಏನ್ ತಲಿ, ಒಬ್ಬರಿಗೂ ಕನ್ಯಾನs ಸಿಕ್ಕಿದ್ದಿಲ್ಲಾ. ಪಾಪ ಜೀವನದಾಗ ಭಾಳ ನೊಂದ ಬಿಟ್ಟಿದ್ವು.’ಸತ್ತ ಮ್ಯಾಲೆ ಏನೈತೆ ಬರಿ ಸೊನ್ನೆ, ಬದುಕಿದಾಗ ಸಿಗವಲ್ತ ಒಂದೂ ಕನ್ಯೆ’ಅಂತ ಫೇಸಬುಕ್ಕಿನಾಗ ಸ್ಟೇಟಸ್ ಮೆಸೆಜ ಹಾಕ್ಕೊಂಡ ಅಡ್ಯಾಡತಿದ್ವು. ಅಲ್ಲಾ ಆ ಮಾತಿಗೆ ಇವತ್ತ ನಾಲ್ಕ ವರ್ಷ ಆತ ಖರೆ ಆದರ ಇನ್ನೂ ಆ ಹುಡುಗರ ಒಳಗ ಒಬ್ಬವಂಗೂ ಒಂದs ಕನ್ಯಾನೂ ಸಿಕ್ಕಿಲ್ಲಾ.(ಅಲ್ಲಾ ಹಂಗ ಒಬ್ಬವಂಗ ಒಂದ ಕನ್ಯಾ ಆ ಮಾತ ಬ್ಯಾರೆ).

ಹೋದ ತಿಂಗಳ ಮೇ ೧೭ಕ್ಕ ಹಂತಾ ಒಂದಿಪ್ಪತ್ತ ಹುಡುಗರು ಸೇರಿ word endangered species day ಸೆಲೆಬ್ರೇಟ ಮಾಡಿದರು. ನಂಗ ಇವರ ಎಲ್ಲಾ ಬಿಟ್ಟ ಎಂಡೇಂಜರಡ್ ಸ್ಪಿಸಿಸ್ ಡೇ ಯಾಕ ಆಚರಸಲಿಕತ್ತಾರ ಗೊತ್ತಾಗಲಿಲ್ಲಾ. ಇದ ಏನ ಹಕೀಕತ್ ನೋಡಿದರಾತ ಅಂತ ಹೋದೆ.
ಅಲ್ಲೇ ನೋಡಿದರ ಹೊರಗ welcome to endangered species day ಅಂತ ಬೋರ್ಡ್ ಹಾಕಿದ್ದರು ಒಳಗ ನೋಡಿದರ ಯಾ ಸ್ಪಿಸಿಸದ್ದ ಫೋಟೊನೂ ಇರಲಿಲ್ಲಾ. ಮಾರಿ ಮ್ಯಾಲೆ ಮಾರ ಉದ್ದ ನೀರಗಿ ಬಿದ್ದ ಗಂಡ ಹುಡುಗರು ಮತ್ತ ಅವರನ ನೂರಾ ಎಂಟ ವೃತಾ ಮಾಡಿ ಹಡದ ಪೇರೆಂಟ್ಸ್ ಒಂದ ಕಡೆ ಜಮಖಾನಿ, ಚಾಪಿ ಮ್ಯಾಲೆ ಮ್ಯಾಲೆ ಕುತಿದ್ದರ ಅವರ ಹಿಂದ ಚೇರ ಮ್ಯಾಲೆ ಕನ್ಯಾ ಹಡದ ಪುಣ್ಯವಂತರು ತಮ್ಮ ತಮ್ಮ ಕನ್ಯಾ ಬಗಲಾಗ ಕರಕೊಂಡ ಕುತಿದ್ದರು. ಯಾರಿಗೆ ನೋಡಿದರು ಅಗದಿ ಸಹಜ ಗೊತ್ತಾಗತಿತ್ತ ಬ್ರಾಹ್ಮರ ಒಳಗ ಗಂಡ ಹಡದವರಿಗೆ ಹೆಣ್ಣ ಹಡದವರಿಗೆ ಎಷ್ಟ ರೇಸಿಯಲ್ ಡಿಫರೆನ್ಸ್ ಅದ ಅಂತ. ಅಲ್ಲಾ ಹಂಗ ಅದ ನಡದ ಭಾಳ ದಿವಸಾತ ಬಿಡ್ರಿ, ಎಲ್ಲಾ ಮಾಡಿದ್ದ ಉಣ್ಣೊ ಮಾರಾಯಾ ಅಂತ ಮೊದ್ಲ ಬರೇ ಗಂಡ ಹಡದವರ ಇವತ್ತ ಅನಭವಸಲಿಕತ್ತಾರ.
ಎದರಿಗೆ ಒಂದ ಸ್ಟೇಜ ಮ್ಯಾಲೆ ನಾಲ್ಕ ಕಬ್ಬಣದ ಚೇರ ಹಾಕಿ ಹಿಂದ ಒಂದ ಪ್ಲೆಕ್ಸ್ ಮ್ಯಾಲೆ ‘ಕನ್ಯಾ ಉಳಿಸಿ- ಕನ್ಯಾ ಬೆಳಿಸಿ’ ಅಂತ ಬರದ ಅದರ ಕೆಳಗ endangered species day ಅಂತ ಬರದಿದ್ದರು. ಇದ ಏನ ಒಂದಕ್ಕ ಒಂದ ಸಂಬಂಧ ಅಂತ ನಂಗ ತಿಳಿಲಿಲ್ಲಾ. ಅಷ್ಟರಾಗ ಒಬ್ಬಂವಾ ಎದ್ದ
“ಇವತ್ತ ನಿಮಗೇಲ್ಲಾ ನಾವು ಎಂಡೇಂಜರಡ್ ಸ್ಪಿಸಿಸ್ ಡೇ ಅಂತ ಕರದ ಇಲ್ಲೆ ಕನ್ಯಾ ಉಳಿಸಿ – ಕನ್ಯಾ ಬೆಳಸಿ ಅಂತ ಕಾರ್ಯಕ್ರಮ ಮಾಡ್ತಾ ಇರೋದ ನೋಡಿ ಆಶ್ಚರ್ಯ ಆಗತಿರಬಹುದು, ಆದರ ಒಂದ ಮಾತ ನೆನಪ ಇಡ್ರಿ ಇವತ್ತ ಬ್ರಾಹ್ಮರ ಒಳಗ ಕನ್ಯಾದ್ದ ಇಷ್ಟs ಅಭಾವ ಅದ ಅಲಾ ಇನ್ನೊಂದ ಸ್ವಲ್ಪ ದಿವಸಕ್ಕ IUCN ( Internation union for conservation of nature and natural resources) ದವರು ಬ್ರಾಹ್ಮರ ಕನ್ಯಾನ್ನ endangered species list ಒಳಗ ಸೇರಸಿದರ ಆಶ್ಚರ್ಯ ಪಡೊಹಂಗಿಲ್ಲಾ. ಈಗಾಗಲೇ ಈ ಕನ್ಯಾಗೊಳನ್ನ threatened species list ಒಳಗ ಸೇರಿಸಿದ್ದ ನಿಮಗೇಲ್ಲಾ ಗೊತ್ತದ” ಅಂತ ಭಾಷಣ ಶುರು ಮಾಡೇ ಬಿಟ್ಟಾ.

ಹಕ್ಕ, ಏನಿದ ಬ್ರಾಹ್ಮರ ಕನ್ಯಾಕ್ಕ ಸೀದಾ ಎಂಡೇಂಜರಡ ಸ್ಪಿಸೀಸಗೆ ಹೋಲಿಸಿದನಲಾ ಅಂತ ನಂಗ ಆಶ್ಚರ್ಯ ಮತ್ತ ದುಃಖ ಎರಡು ಆತ. ಅಲ್ಲಾ ಬ್ರಾಹ್ಮರಾಗ ಕನ್ಯಾ ಖಾಲಿ ಆಗ್ಯಾವ, ಇದ್ದ ಬಿದ್ದ ಕನ್ಯಾನು IT/BT ವರಾನ ಬೇಕ ಅನ್ನಲಿಕತ್ತಾರ ಖರೆ ಆದರೂ ಹಿಂಗ ನಮ್ಮ ಕನ್ಯಾಕ್ಕ ಎಂಡೇಂಜರಡ ಸ್ಪಿಸೀಸ ಅಂದರ ನಂಗ ಹೆಂಗ ಅನಸಬಾರದ? ಅದರಾಗ ನಾನು ಒಂದ ಕನ್ಯಾಮಣಿ ಹಡದೇನಿ.
ಅತ್ತಲಾಗ ಅಂವಾ ಮಾತಾಡ್ಕೋತ
“ನಾವ ಇಷ್ಟ ದಿವಸ ಗೋತ್ರ ಬಿಟ್ಟರ ಆತು ವೈಷ್ಣವರದು,ಸ್ಮಾರ್ತರದು,ಗೌಡ ಸಾರಸ್ವತರದು, ಚಿತ್ಪಾವನರದು, ಕರಾಡೆವರದು, ಹವೈಕರದು, ಹೆಗಡೆಯವರದು, ಇವರದು, ಅವರದು, ಬಾಜು ಮನಿಯವರದು, ಹಿಂದಿನ ಮನಿಯವರದು ಅಂತ ನೋಡದ ಒಟ್ಟ ಲಿಂಗ ಬಿಟ್ಟರ ಸಾಕು ಲಗ್ನಾ ಮಾಡ್ಕೊಂಡ ಬಿಡ್ತೇವಿ ಅಂತ ಹೇಳಿದ್ವಿ, ಆದರ ಈಗ ಅವು ಸಿಗವಲ್ವು. ಹಿಂಗಾದರ ಮುಂದ ಹೆಂಗ ಅಂತ ವಿಚಾರ ಮಾಡಲಿಕ್ಕೆ ಇವತ್ತ ನಾವೇಲ್ಲಾ ಸೇರಿವಿ. ಇವತ್ತ ಕನ್ಯಾ ಉಳಸೋದು, ಬೇಳಸೋದ ಎಲ್ಲಾ ನಿಮ್ಮ ಕೈಯಾಗ ಅದ. ಇಲ್ಲಾಂದರ ಮುಂದ ನಮ್ಮ ದಾರಿ ನಾವ ನೋಡ್ಕೋತೇವಿ. ಹೆಂಗಿದ್ದರು homosexuality is not illegal” ಅಂತ ಸೀದಾ ಧಮಕಿ ಕೊಟ್ಟ ಬಿಟ್ಟಾ.
ಅಲ್ಲಾ ಮೊದ್ಲ ಕನ್ಯಾ ಹಡದರ ಅಲಾ ಈ ‘ಕನ್ಯಾ ಉಳಸೋದು ಕನ್ಯಾ ಬೆಳಸೋದು’.
ಹೆಂಗ green revolution ಸಂಬಂಧ ನಾವೇಲ್ಲಾ ಕಂಡ ಕಂಡಲ್ಲೆ plantation ಮಾಡತೇವಿ ಹಂಗ ಈ ಕನ್ಯಾಕ್ಕು ಏನರ ಮಾಡs ಬೇಕ ಅಂತ ನನ್ನ creative mind ಹೇಳಲಿಕತ್ತು.
ಅಲ್ಲಾ, ಇವತ್ತೀನ ನಮ್ಮ ಜನರೇಶನ ಹುಡುಗರು ಗಂಡಾಗಲಿ, ಹೆಣ್ಣಾಗಲಿ ಒಬ್ಬಕಿಗೆ ಒಂದ ಇರಲಿ ಅಂತ ಒಂದೊಂದ ಹಡಕೋತ ಹೊಂಟರ ಖರೇನ ಬ್ರಾಹ್ಮರ ಕನ್ಯಾ endangerd species ಆಗೋದ ಗ್ಯಾರಂಟಿ ಬಿಡ್ರಿ. ಇನ್ನ ಮುಂದಿನ ಜನರೇಶನಗೆ ಈ ಪ್ರಾಬ್ಲೆಮ ಕಂಟಿನ್ಯೂ ಆಗಬಾರದಂದ್ರ ನಮ್ಮಂತಾವರ ಇನ್ನೊಂದ ಎರಡ ಹೆಣ್ಣ ಮಿನಿಮಮ್ ಹಡಿಲೇ ಬೇಕು.
ಆದ್ರು ಬ್ರಾಹ್ಮರ ಕನ್ಯಾಕ್ಕ endangered species ಗೆ ಹೋಲಿಸಿದರಲಾ ನಮ್ಮ ವರಗಳು ಅವರ ಮನಸ್ಸಿಗೆ ಎಷ್ಟ ಬೇಜಾರ ಆಗಿರಬೇಕ ಅನಸ್ತ. ಇದ ಹಿಂಗ ಮುಂದ ವರಿತಂದರ ಎಲ್ಲೆ ಖರೇನ ನಮ್ಮ ಹುಡುಗರು ಲಿಂಗ ಬಿಡಲಿರ ಇಲ್ಲಾ, ಹೆಂಗಿದ್ದರು ‘ಹೊಮೊ ಸೆಕ್ಸೂವಲಿಟಿ’ ಲಿಗಲ್ ಆಗೇದ ತೊಗೊ ಅಂತಾರೊ ಅಂತ ನಂಗ ಚಿಂತಿ ಹತ್ತಿ ಬಿಟ್ಟದ. ಯಾಕಂದರ ನಾ ಒಂದ ವರಾ ಬ್ಯಾರೆ ಹಡದೇನಲಾ ಅದಕ್ಕ.
 
 

‍ಲೇಖಕರು G

2 July, 2013

10 Comments

  1. santosh patil

    “ಅಣ್ಣಾ, ಇವತ್ತ ಬೆಳಿಗ್ಗೆ ದಿಲ್ಲಿ ಹೈಕೋರ್ಟನಾಗ ‘ಹೊಮೊ ಸೆಕ್ಸೂವಲಿಟಿ’ಗೆ ಜೈ ಅಂದಾರ, ಇನ್ನ ಮುಂದ ಸಲಿಂಗ ಮದುವಿ ಗೈರ ಕಾನೂನ ಅಲ್ಲಾ ಅಂತ ಡಿಸಿಸನ್ ಕೊಟ್ಟಾರ” ಅಂತ ಭಡಾ ಭಡಾ ನನ್ನ ಬಾಯಾಗ ಒಂದ ಧಾರವಾಡ ಫೇಡೆ ತುರುಕಿ ಮಠಕ್ಕ ಕಾಯಿ ಒಡಿಸಿಗೊಂಡ ಬರತೇವಿ ಅಂತ ಹೋಗೆ ಬಿಟ್ಟರು….
    ಹಾ..ಹಾ…ಏನ ಬರೀತಿರಿ ಸರ್.. ಅವನೌನ ಜಬರದಸ್ತ ಆಗೇತಿ ಮತ್ತ ಅಗದಿ ಹಕಿಕತ್ ಬರದಿರಿ ಬಿಡ್ರಿ. ಮೊದ್ಲ ಬರೇ ಗಂಡ ಗಂಡ ಅಂತ ಆರಿಸಿ ಹಡದವರ ಈಗ ಅನುಭವಿಸಲಿಕತ್ತಾರ ತೊಗೊರ್ರಿ.
    ಸಂತೋಷ

  2. Priyadarshini

    Prashant sir i think idaka best solution andra best bestest aamath forget castism ignore dowry except any girl who is ready to be like a daughter and look after the parents well what else required more than this ?

  3. G Venkatesha

    Hennu makkala bagge nimagiruva kaaLaji Artaaaytu. Haasyada daaTi yalli nirupisiddiri. Adare bari sexgoskara namage hennu beku illaandre homosexuality ge hogtivi annodu aarogyakara chintaneyalla.

    • prashant adur

      I did not say that we need female for sex only. we need life partner and for a male, female is partner. when there is scarcity for girls in community then what to do? so now there is a option of having same gender as life partner also, though it sounds nontraditional and may not fit into our culture. Allowing gay sex does not mean that their relation is only for sex. when gay marriage takes place they are also like couple as rest of the heterocouples.

  4. vishalkumar

    nice article sir!!

  5. ಸಂಜೀವ ಓಡೇಯರ್

    ಮನ್ನೆ ನಮ್ಮನಿಗೆ ಯಾರೋ ಬಂದಿದ್ರು ನೋದ್ರಿ ಕಾಕು ಕನ್ಯಾ ಬಂದದ ಆದ್ರ ಕುಂಡ್ಲಿ ಕೂಡವಲ್ತು ಅಂತ ಅದಕ್ಕ ನಮ್ಮವ್ವಾ ಸಟಕ್ಕನೆ “ಕುಂಡಿ ಕುಂಡಿನೇ ಕೂಡ್ಲಿಕತ್ತಾವ ಇನ್ನ ಕುಂಡ್ಲಿ ತೊಗೊಂಡ ಏನ್ ಮಾಡ್ತಿರಿ ಅಂತ” (ಮದ್ವಿ ಮುಂಚೆ ಬೈಕ್ ಮ್ಯಾಲೆ,ಹೋಟೆಲು,ಪಾರ್ಕು ಅಂತ ಎಲ್ಲಾ ಕಡೆ ಅಡ್ಯಾಡೋದ್ರ ವಿಶ್ಲೇಷಣೆ) ಅಗ್ದಿ ಖರೆ ಅಂತ ಅನಸ್ತ ನೊಡ್ರಿ ಪ್ರಶಾಂತಣ್ಣ. ನೌನ್ ಕನ್ಯಾದ ಅಭಾವ ಭಾಳ ಆಗೇದ ಎಲ್ಲಾರಿಗೂ ನೀವಂಧಂಘ IT/BT ಬೆಂಗಳೂರ್ನಾಗ ಸೇಟಲ್ ಆದಾರ್ವ ಬೇಕು ಅಂದ್ರ ನಮ್ಮಂಥಾ ಮಂದಿ ಏನ್ ಮಾಡಬೇಕ್ರಿ ..! ಒಂದೇ ಮಗು ಇರ್ಲಿ ಬಾಳಿಗೆ ಅಂತ ನಮ್ಮ ಸರ್ಕಾರ ಮಾಡಿದ್ದ ತಪ್ಪ ಆಗೀ ಬಿಟ್ಟದನೋಡ್ರಿ …

  6. Umesh

    Simply Loved this line 🙂
    “ಹೆಂಗ green revolution ಸಂಬಂಧ ನಾವೇಲ್ಲಾ ಕಂಡ ಕಂಡಲ್ಲೆ plantation ಮಾಡತೇವಿ ಹಂಗ ಈ ಕನ್ಯಾಕ್ಕು ಏನರ ಮಾಡs ಬೇಕ ಅಂತ ನನ್ನ creative mind ಹೇಳಲಿಕತ್ತು.”

  7. girija

    sir, very nice article.but it is very serious issue. if plantation is not done now, next generation will definitely suffer LoL. 🙂

  8. jayashree

    i don’t think this is serious issue. because this is the time to demolish caste system in the society. there are so many girls in India, may be not from Brahman caste but know the Indian culture, respect the relation. they lead the happy and healthy life as well.

  9. rahul huddar

    well i have 2 endangered species

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading