ಡಾ. ಅಜಿತ್ ಹರೀಶಿ
ಆರಾಧಿಸಲು ದೇವಿಯೇ
ಯಾಕೆಂದು ಕೇಳಬೇಡಿ
ಹಿಂದೆ ಆರಾಧಿಸಿದವರಿದ್ದಾರೆ
ಇರಬಹುದು ಮುಂದೆಯೂ
ಪುಷ್ಪಾರ್ಚನೆ ಹೊಗಳಿಕೆ
ಕಾವ್ಯಮಯ ಮಂತ್ರ
ಇವೂ ಒಂದು ತಂತ್ರವೋ
ಪ್ರಾಮಾಣಿಕವಾಗಿ ಗೊತ್ತಿಲ್ಲ
ಓಲೈಕೆ ಏಕೆ
ಇಷ್ಟಾರ್ಥ ಸಿದ್ಧಿಗಾಗಿ?
ಏನೊಂದೂ ಪಡೆಯದೆಯೂ
ದೇವಸ್ಥಾನ ಸುತ್ತುವ
ಭಕ್ತನನ್ನೂ ತೋರಿಸಬಹುದು
ನಿನ್ನ ತಪಸ್ಸನ್ನು ಮೆಚ್ಚಿದೆ
ಹೇಳಲೊಂದು ದಿನ
ಪ್ರತ್ಯಕ್ಷಳಾದಳು ಪರಮೇಶ್ವರಿ
ಮೂಡಿಸದಳು ಎಂಥ ಅಚ್ಚರಿ
ನಂತರದ್ದು ಯಾಂತ್ರಿಕ
ಹೂವೇರಿಸುವುದು, ಬಣ್ಣಿಸುವುದು
ಕೊನೆಯಾಗುತ್ತಿದೆ.
ಆರಾಧನೆಯ ಆವಾಹನೆಯ ಭ್ರಮೆ ಕಳಚಿ ಬೀಳುತ್ತಿದೆ
ಅವಳದ್ದೀಗ ಭಗ್ನದರ್ಶನ!






0 Comments