ಪ್ರತಿ ಪುಸ್ತಕದಲ್ಲೂ ವಸುಧೇಂದ್ರರ ಆಪ್ತತೆ..

 

 

 

 

 

 

 

ಸಂಯುಕ್ತ ಪುಲಿಗಲ್

 

ಎಷ್ಟು ಭಿನ್ನ ಮಾಡಿದರೂ ಕೊನೆಗೂ ಉಳಿದುಬಿಡುವ ಶೇಷ ಇದೆಯಲ್ಲಾ….. ಈ concept ನನಗೆ ತುಂಬಾ ಇಷ್ಟವಾಯಿತು. ಎಲ್ಲರ ಬದುಕಿನಲ್ಲೂ ಉಳಿದುಕೊಳ್ಳುವ ಈ ಶೇಷ(ಗಳು) ಮೌನರಾಗವಾಗಿ ಒಳಗೊಳಗೇ ಮಿಡಿಯುತ್ತಿರುತ್ತವೆ. ಈ ರಾಗಗಳನ್ನು ಒಂದು ತಾನವಾಗಿಸಿ, ಪುಸ್ತಕವಾಗಿಸಿದ ವಸುಧೇಂದ್ರರಿಗೆ ಅಭಿನಂದನೆ.

ಪುಸ್ತಕದ ಎರಡು ಭಾಗಗಳಾದ ’ಅಂಶ’ ಮತ್ತು ’ಛೇದ’ ನಮ್ಮ ವಿಶೇಷ ಗಮನಸೆಳೆಯುತ್ತದೆ. ’ಅಂಶ’ದ ಭಾಗದ ಕಥೆಗಳು ಹೊಸ ರೀತಿಯ ಕಥಾ ಹೆಣಿಕೆಯನ್ನು ಕಟ್ಟಿಕೊಡುತ್ತದೆ. ’ಅಮೃತಸೊಪ್ಪು’ ಮತ್ತು ’ಡೆವಿಲ್ ಡಾಗ್’ ನ ಕಥಾಹಂದರ ಮತ್ತು ನಿರೂಪಣಾ ನಾವೀನ್ಯತೆ ಬಹಳ ಮೆಚ್ಚುಗೆಯಾಯಿತು.

ವಸುಧೇಂದ್ರರ ಗಟ್ಟಿ ಭಾಷೆ ಮತ್ತು ಸರಳ ನಿರೂಪಣೆ ಅವರ ಪ್ರತಿ ಪುಸ್ತಕದಲ್ಲೂ ಎದ್ದು ಕಾಣುವ ಆಪ್ತತೆ.

ಇನ್ನು ಬಹಳವಾಗಿ ಕಾಡಿದ್ದು ’ಛೇದ’ ಭಾಗದ ಕಥೆಗಳು. ಸಲಿಂಗಿಗಳ ಒಳತೋಟಿಯ ವಿವಿಧ ರೂಪುಗಳಾದ ಈ ಕಥೆಗಳ ರಚನೆ, ಉದ್ದೇಶ ಎಲ್ಲವೂ ಓದಿಯೇ ತಿಳಿಯಬೇಕಾದದ್ದು. Casual ಆಗಿ ಓದಿಸುವ ಒಂದು ಚಿಕ್ಕ ಕಥೆಯೂ ಸಹ ನಮ್ಮ ಬದುಕಿನ ಎಷ್ಟೆಲ್ಲಾ ಕತ್ತಲಕೋಣೆಗಳಿಗೆ ಬೆಳಕುಚೆಲ್ಲುತ್ತದೆ ಎಂಬುದಕ್ಕೆ ಈ ಕಥೆಗಳು ಸಾಕ್ಷಿ.

ಕೆಲವೊಮ್ಮೆ, ಏಕತಾನತೆಯು ಈ ಕಥೆಗಳಲ್ಲಿ ಮೂಡುತ್ತಿದೆಯೇ ಎನಿಸಿದಾಕ್ಷಣ “ಗಂಡು-ಹೆಣ್ಣಿನ ಸಂಬಂಧದ ಕುರಿತಾದ ಸಾವಿರಾರು ಕಥೆಗಳಲ್ಲಿ ಕಾಣದ ಏಕತಾನತೆ ಈ ಕಥೆಗಳಲ್ಲಿ ನನಗೇಕೆ ಕಾಣುತ್ತಿದೆ?” ಎಂದು ಪ್ರಶ್ನೆ ಹಾಕಿಕೊಂಡಾಗ ನನ್ನ ಮಿತಿಯೇ ನನಗೆ ಅರಿವಾಗಿತ್ತು.

ಎಲ್ಲರೂ ಓದಲೇಬೇಕಾದ ಉತ್ತಮ ಪುಸ್ತಕವನ್ನು ಬರೆದ ವಸುಧೇಂದ್ರರಿಗೆ ಧನ್ಯವಾದಗಳು.

‍ಲೇಖಕರು avadhi

November 28, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: