ಪ್ರಕಾಶ್ ಕೊಡಗನೂರ್ ಕವಿತೆ- ಅನುಭಾವದ ಲಹರಿಯಲ್ಲಿ ಬಿದರಹಳ್ಳಿ…

ಪ್ರಕಾಶ್ ಕೊಡಗನೂರ್

1. ಅನುಭಾವದ ಲಹರಿಯಲ್ಲಿ ಬಿದರಹಳ್ಳಿ

ಮೊದಲ ಬಾರಿಯೇ
ಮದಿರಾಮೃತವ ಹೀರಿ
ಮನೆಗೆ ಕಾಲಿಟ್ಟವನನ್ನ
ಕಲ್ಲುಸಕ್ಕರೆ ಕೊಟ್ಟು
ಸ್ವಾಗತಿಸಿ ಕುಳ್ಳಿರಿಸುತ್ತಾ
ಹೊಟ್ಟೆಗೆ ತಣ್ಣನೆಯ
ಶರಬತ್ತು ನೀಡಿ
ನನ್ನೆಲ್ಲ ಒದರಾಟಕ್ಕೂ
ಹೂಂಗುಡುತ್ತಲೇ ಉಪಚರಿಸುತ್ತಾ
ದೇಹದ ಜೊತೆ
ಮನಸ್ಸನ್ನೂ ಮತ್ತನ್ನೂ
ತಣಿಸಿ ಮಾನವಾಂತಃಕರಣದ
ದಿವ್ಯಪ್ರದರ್ಶನಗೈದಿರಿ ಒಮ್ಮೆ

ಕೆಲ ಕಾರ್ಯಕ್ರಮಗಳಿಗೆ
ಬಂದು ಹಾರೈಸಿದುದಲ್ಲದೆ
ಸಂಭಾವನೆಯಿರಲಿ ತಂದ ಕಾರಿಗೂ
ಇಂಧನದ ಖರ್ಚು ಬಯಸದೆ
ಖ್ಯಾತನಾಮರ ಬಡಿವಾರದ
ಗಡಿಗೆಯನ್ನೊಡೆದವರಂತೆ
ಫಕೀರತನದಲ್ಲಿ ಮಿಂದಿರಿ ಕೆಲವೊಮ್ಮೆ

ಸಹಧರ್ಮಿಣಿಯ ಅಗಲಿಕೆ
ಮಕ್ಕಳ ವಿದೇಶವಾಸದ ನಡುವೆ
ಬದುಕು ಕೇಟರಿಂಗ್ ಊಟಕೆ
ಸೀಮಿತವಾದರೂ ಅಳುಕದೆ
ಮತ್ತದೇ ಕಳಕಳಿಯ
ತೋರಿ ನನಗೆ
ಏಕಾಂತವಾಸದಲ್ಲೂ ಧೀಮಂತಿಕೆಯಲಿ
ಮೆರೆದಿರಿ ಕೊನೆಗೊಮ್ಮೆ

ಸಾಗಿಬಂದ ಹಾದಿಯಲಿ
ಜೇನಿನಂತೆ ನೀವು
ಸವಿದಾಗ ನೆನಪಲ್ಲಿ
ನವಿಲಿನಂತೆ ನಾನು!!

2. ಪ್ರೀತಿ ಕಾರಣಕೆ!

ನನ್ನವಳು
ಜಗದೇಕ ಸುಂದರಿ
ಪ್ರೀತಿ ಕಾರಣಕೆ!

ನನ್ನವಳು
ಅವತರಿಸಿದ ಅರಗಿಣಿ
ಪ್ರೀತಿ ಕಾರಣಕೆ!

ನನ್ನವಳು
ಚಿರಲೋಕದ ಕಣ್ಮಣಿ
ಪ್ರೀತಿ ಕಾರಣಕೆ!

ನನ್ನವಳು
ಮಕರಂದದ ಮಹಾಗಣಿ
ಪ್ರೀತಿ ಕಾರಣಕೆ!

ನನ್ನವಳು
ಭವಲೋಕದ ಬಳುವಳಿ
ಪ್ರೀತಿ ಕಾರಣಕೆ!

‍ಲೇಖಕರು avadhi

May 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: