ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾರಿಜಾತದ ಕಥೆ – ಸ್ವರ್ಣ ಬರೀತಾರೆ

ಪಾರಿಜಾತ

ಸ್ವರ್ಣ ಎನ್ ಪಿ

ಒಬ್ಬ ರಾಜಗೊಬ್ಬ ಮಗಳು, ವಯಸಿಗೆ ಬಂದಳು.

ಸೂರ್ಯನನ್ನೇ ಪ್ರೇಮಿಸಿದಳು !

ಅವನೂ ಇವಳನ್ನ ಮೋಹಿಸಿದ

ಆದರೆ, ತಂದೆಗೆ ಉರಿವ ಸೂರ್ಯ ಬೇಡವಾದ.

ನಾ ಬೇಕೆಂದಾದರೆ ತಂದೆಯ ಬಿಡೆಂದ ತಮ ವೈರಿ

ಹುಡುಗಿಯ ಮುಂದೆ ಇದ್ದುದೊಂದೇ ದಾರಿ .

ಸೂರ್ಯನೊಡನೆ ಹೊರಟಳು ಕನ್ಯೆ

ಮೂರು ಲೋಕ ಮಾನ್ಯೆ.

ತಂದೆ ತಾಯ ಮರೆಯದಾದಳು.

ಬಂಧು ಬಂಧವ ತೊರೆಯದಾದಳು.

ಸೂರ್ಯ ಕೆಂಪಾಗಿ ಉರಿದ.

ಹುಡುಗಿಯ ಮತ್ತೆ ತವರಿಗಟ್ಟಿದ.

ಬಾಲೆ ಬೆಂದಳು ಅರುಣನುರಿಯಲ್ಲಿ.

ಕಂಬನಿಯು ಆವಿಯಾಗಿತ್ತಲ್ಲಿ ,

ಕೆನ್ನೆಗೆ ಜಾರುವ ಮುಂಚೆ

ಇದು ವಿಧಿಯ ಕ್ರೂರ ಸಂಚೇ ?

ಹುಡುಗಿ ಒಣಗಿ ಪ್ರಾಣ ಬಿಟ್ಟಳು

ಉರಿವ ಸೂರ್ಯನಿಗಾಗಿ ಉರಿದು ಹೋದಳು.

ತಂದೆ ನೆಟ್ಟನೊಂದು ಗಿಡ ಅವಳ ಗೋರಿಯ ಮೇಲೆ

ಅಲ್ಲೊಂದು ಗಿಡ ಚಿಗುರಿತ್ತು, ಇದಾವ ಶಿವ ಲೀಲೆ ?

ನಸುಕಲ್ಲಿ ಹೂವೊಂದು ಅರಳಿತ್ತು

ಸೂರ್ಯನ ಕಂಡೊಡನೆ ಬಾಡಿತ್ತು .

ಲೋಕ ಅದಕಿತ್ತ ಹೆಸರು ಪಾರಿಜಾತ

ಅದು ‘ಅವಳ’ ಸುನೀತ ಪ್ರೇಮ ಗೀತ .

(ಮೈಸೂರಿನ ವಸ್ತು ಪ್ರದರ್ಶನದಲ್ಲಿ ಓದಿದ ‘ ಪಾರಿಜಾತ’ ಜನಪದ ಕಥೆಯನ್ನಾಧಾರಿಸಿ ಬರೆದದ್ದು )

 

‍ಲೇಖಕರು G

21 November, 2012

4 Comments

  1. mmshaik

    nice madam..

  2. sunil rao

    beautifulll

  3. Suma

    Very nicely written!

  4. Badarinath Palavalli

    ಬಹಳ ಚೆನ್ನಾಗಿದೆ ಸ್ವರ್ಣಾ ಅವರೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading