ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಮೇಶ್ವರ್ ಕ್ಯಾಮೆರಾ ಕಣ್ಣಿನಲ್ಲಿ ’ರಾಕ್ ಗಾರ್ಡನ್’

ಉತ್ಸವ್ ರಾಕ್ ಗಾರ್ಡನ್ – ಒಂದು ಝಲಕ್

ಪರಮೇಶ್ವರ್ ಗುರುಸ್ವಾಮಿ

ಸಾಮಾನ್ಯ ರೈತನ ಮಗನಾಗಿ ಹುಟ್ಟಿ ತಿಪ್ಪಣ್ಣ ಬಿ. ಸೊಲಬಕ್ಕನವರ್ ಕಲಾವಿದನಾಗಿ ಸಾಧಿಸಿರುವುದು ಅಪಾರ. ಅವರ ಕಾಂಕ್ರೀಟ್ ರಚನೆಗಳು ಅದರಲ್ಲೂ ಸಾಕು ಪ್ರಾಣಿಗಳ ರಚನೆಗಳು ನಿಬ್ಬೆರಗುಗೊಳಿಸುವ ಕೃತಿಗಳು. ನಿಜವಾದ ಪ್ರಾನಿಗಳೇ ಏನೊ ಅನಿಸಿವಷ್ಟು ನೈಜವಾಗಿವೆ. ಪಾಶ್ಚಾತ್ಯ ಮತ್ತು ಪೌರಾತ್ಯ ರಚನಾ ವಿಧಾನಗಳನ್ನು ಮಿಳಿತಗೊಳಿಸಿ ತಮ್ಮದೇ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಪೌರಾತ್ಯ approach ಅನ್ನಾಗಲಿ ಪೌರಾತ್ಯ ಕಲಾಸಿದ್ಧಾಂತಗಳನ್ನಾಗಲಿ ಪ್ರಯತ್ನಪೂರ್ವಕವಾಗಿ ಅವಲೋಕಿಸಲು ಅವರು ಪ್ರಯತ್ನಿಸಿಲ್ಲ ಎಂದು ನನಗನಿಸುತ್ತದೆ.
ಇಲ್ಲಿ ಅವರ ನಾಲ್ಕು ಕೃತಿಗಳ ಫೋಟೋ ಹಾಕುತ್ತಿದ್ದೇನೆ :
1. ರಾಜ್ ಕುಮಾರ್ ಅವರು ನಿರ್ವಹಿಸಿರುವ ಪಾತ್ರಗಳ ಪ್ರತಿಮೆಗಳ ಸಾಲು ಸುಲಭಕ್ಕನವರ್ ರಾಜ್ ರವರ ಅಭಿಮಾನಿ. ರಾಜ್ ಪಾತ್ರಗಳ ಪ್ರತಿಮೆಗಳದ್ದೇ ಒಂದು ಆವರಣ ಮಾಡಿದ್ದಾರೆ. ರಾಜ್ ರವರ “ಅಭಿಮಾನಿ ದೇವರು” ಅನ್ನುವ ಮಾತು ಸೊಲಬಕ್ಕನವರ್ ಗೆ ಬಹಳ ಇಷ್ಟವಾದ ಮಾತಂತೆ.

2. ಕೊಟ್ಟಿಗೆಯಲ್ಲಿ ಅವರು ರಚಿಸಿರುವ ರಾಸುಗಳೊಂದಿಗೆ. ಇಲ್ಲಿ ಅವರು ನಿಜವೋ ಅವರ ಕೃತಿಗಳು ನಿಜವೋ ಎಂಬ ಅನುಮಾನ ಉಂಟಾಗುತ್ತದೆ

3. ಇನ್ನೂ ಪೂರ್ಣಗೊಂಡಿಲ್ಲದ ‘ಮಹಿಳಾ ಮಂಟಪ’ದ ಒಂದು ಸ್ಥಂಭ. ವ್ಯವಸ್ಥೆಗೆ ಮಹಿಳೆಯರು ಕಂಬಗಳಾಗಿದ್ದಾರೆ ಎನ್ನುವುದು ಈ ಮಂಟಪದ ಅಭಿವ್ಯಕ್ತಿ

4. ರಾಜ್ ಆವರಣದಲ್ಲಿ, “ಹುಟ್ಟಿದರೆ…

 

‍ಲೇಖಕರು G

29 July, 2014

1 Comment

  1. Kiran

    Where is this place?
    Such details like its location, hours, hot to get there etc. are a must for this kind of articles so people can plan visits there.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading