– ಸೌಮ್ಯಾ ಕೆ ಆರ್
ಗುಬ್ಬಚ್ಚಿಯ ಮರಿಗಳಂತೆ
ಸದಾ ಒಳಗೊಳಗೆ
ಚಿಲಿಪಿಲಿಗುಟ್ಟುವ ಪಿಸುಮಾತುಗಳು
ಒಂದಲ್ಲ ಎರಡಲ್ಲ ನೂರೆಂಟು…
ಅವೆಲ್ಲವೂ ಮನದಾಳದಿ
ಆರ್ಭಟಿಸಿ, ಭೋರ್ಗರೆಯುತ್ತಿವೆ
ನಿನಗಾಗಿ, ನೀ ಬರುವ ದಾರಿಗಾಗಿ

ಅಸಹಾಯಕತೆ ಅಡಗಿ ಕುಳಿತಿದೆ
ನಿನ್ನ ಎದೆಯುಸಿರ ಏರಿಳಿತದ ಸದ್ದು
ಕದ್ದು ಕೇಳಿಸಿಕೊಳ್ಳಲು ಆಗದೆ
ಮನ ಪರಿತಪಿಸುತ್ತಿದೆ
ಇನಿಯನ ಬರುವಿಕೆ ಕಾದು ಕಾದು
ನೀ ಬರುವ ದಾರಿಯಲ್ಲಿ
ಪದೇಪದೆ ಇಣುಕಿ ನೋಡುತ್ತಿದೆ ಮನ
ಬಂದು ಎದೆಯಪ್ಪಿ,
ಪಪ್ಪಿ ಕೊಡುವ ಹೊತ್ತಿಗಾಗಿ
ಉಸಿರು ಬಗಿ ಹಿಡಿದು ಕುಳಿತಿದೆ ಹೃದಯ
ಮನಸಾರೆ ಮನದಾಳದ ಮಾತು
ಹರವಬೇಕಿದೆ ರಾಶಿರಾಶಿಯಾಗಿ
ನನಗಾಗಿ ತುಸು ಸಮಯ ನೀಡು…
ನಿನ್ನೆದುರು ಸಾಗರ ಸೇರುವ ನದಿಯಾಗಬೇಕಿದೆ
ಬೇಗ ಬಾ ನನ್ನಿನಿಯ
ಮಿಡಿವ ಮನವ ಕಾಯೋ ನೀನಿದ್ದು ಸನಿಹ






ಮನಸಾರೆ ಮನದಾಳದ ಮಾತು
ಹರವಬೇಕಿದೆ ರಾಶಿರಾಶಿಯಾಗಿ
ನನಗಾಗಿ ತುಸು ಸಮಯ ನೀಡು…
ನಿನ್ನೆದುರು ಸಾಗರ ಸೇರುವ ನದಿಯಾಗಬೇಕಿದೆ
ಬೇಗ ಬಾ ನನ್ನಿನಿಯ
ಮಿಡಿವ ಮನವ ಕಾಯೋ ನೀನಿದ್ದು ಸನಿಹ
manamuttuva manatattuva kaavya…
ಗುಬ್ಬಚ್ಚಿಯ ಮರಿಗಳಂತೆ
ಸದಾ ಒಳಗೊಳಗೆ
ಚಿಲಿಪಿಲಿಗುಟ್ಟುವ ಪಿಸುಮಾತುಗಳು
ಒಂದಲ್ಲ ಎರಡಲ್ಲ ನೂರೆಂಟು…this is good
Nice one..
ನಿಜಕ್ಕೂ ಕವಿತೆ ಉತ್ತಮವಾಗಿದೆ…
-ರಮೇಶ್ ಹಿರೇಜಂಬೂರು
nice..very nice..