ಬಿಟ್ಟು ಬಿಡು ತ್ರೇತಾಯುಗದ ಮಾತು
ಈಗ ಮಧುಚಂದ್ರದಲ್ಲೇ
ವಿಚ್ಛೇದನದ ಹೊರಳು,
ಬೆಳದಿಂಗಳ ಬದುಕಿನ
ಶಾಂತ ಸರೋವರದಲ್ಲಿ
ಕಾರ್ಗತ್ತಲೆಯ ನೆರಳು.
ಅರ್ಥವಿದೆಯೇ ಆದರ್ಶಗಳಿಗೆ?
ಸುಶಿಕ್ಷಿತ ಸು(ಳ್ಳು)ವಿಚಾರಗಳಿಗೆ.
ಸುಂದರ ಹಂದರದಲ್ಲೂ
ಸುಳಿಗಾಳಿಗಳು,
ಹಣ, ಶಿಕ್ಷಣ, ಸೌಂದರ್ಯಗಳ
ಮೋಹದ ಬಲೆ ಇದ್ದಿದ್ದರೆ
ಸಮ್ಮೋಹನಾಸ್ತ್ರ ಕಾರ್ಯಗತವಾಗುತ್ತಿತ್ತು.
ಗಂಡರದ್ದಲ್ಲ ಈ ಪ್ರಶ್ನೆ…
ಅವರೊಳಗಿನ ಭಂಡತನದ್ದು
ಅದಕ್ಕೇ..
ಅದಕ್ಕೇ……. ನೋಡು
ನಿರ್ವೀರ್ಯರಿಗೂ ನಿಯೋಗದ
ಪಟ್ಟವಿದೆ.
ಕೃತಘ್ನ ,ಕುರುಡು ಕಾನೂನಿಗೂ
ಕಾವಲಿದೆ.
ಅಳ್ಳೆದೆ ಮೇಲೂ ಇಂದು
ಬುಲೆಟ್ ಫ್ರುಫ್ ಇದೆ.
ಸಂಸ್ಕೃತಿಯ ಜೀವಂತಿಕೆ
ಹೆಣ್ಣಿನಲ್ಲೇ ಮಡುಗಟ್ಟಿದ್ದರೂ,
‘ಗಂಡು ಮೆಟ್ಟಿದ……’ಎನ್ನುವಲ್ಲಿ
ಗಂಡಿಗೆನೇ ಬೇಡಿಕೆ-ಪೋಷಣೆ
ಎರಡೂ ಇದೆ.
ನಗು
ನಗು ಬರದೇ… ನಿನಗೆ… ?
ಝಾಡಿಸಿ ಬಿಡು ಜನಪದರ ಹಾಡು
ಮನದುಂಬಿ ನಕ್ಕುಬಿಡು,
ನಕ್ಕುಬಿಡೇ…ಗೆಳತಿ
ಆಷಾಡದ ಮೊದಲ ಮಳೆಯ ಹಾಗೆ…,
ಮೊದಲ ರಾತ್ರಿಯಲಿ
ಬಿಸಿ ಏರುವ ಮೊದಲೇ
ಭದ್ರವೆಂದುಕೊಂಡ ಬದುಕು
ಬರಿದಾಯಿತೆಂದು
ಗಲ್ಲಕ್ಕೆ ಕೈಕೊಟ್ಟು
ಹೀಗೆ ದಿಗ್ಭ್ರಮಿಯಾಗದೆ
ಕಲಿಯುಗದಲ್ಲೂ ನಕ್ಕುಬಿಡೆ….
ದ್ವಾಪರದ ದ್ರೌಪದಿಯ ಹಾಗೆ.
ಪ್ರಳವಾಗಲಿನ್ನೊಮ್ಮೆ
ಭೂತದಲಿ ಹೂತ
ಕುರುಕ್ಷ್ರೇತ್ರದ ಹಾಗೆ……
ಮಹಾ…ಭಾರತದ ಹಾಗೆ.
ನಿರ್ವೀರ್ಯರಿಗೂ ನಿಯೋಗದ ಪಟ್ಟವಿದೆ….
ನಿಮಗೆ ಇವೂ ಇಷ್ಟವಾಗಬಹುದು…







ಮನ ಮಿಡಿದ ಕವಿತೆ.
olleya kavite
ಮೊದಲ ರಾತ್ರಿಯಲಿ
ಬಿಸಿ ಏರುವ ಮೊದಲೇ
ಭದ್ರವೆಂದುಕೊಂಡ ಬದುಕು
ಬರಿದಾಯಿತೆಂದು
ಗಲ್ಲಕ್ಕೆ ಕೈಕೊಟ್ಟು
ಹೀಗೆ ದಿಗ್ಭ್ರಮಿಯಾಗದೆ
ಕಲಿಯುಗದಲ್ಲೂ ನಕ್ಕುಬಿಡೆ….
ದ್ವಾಪರದ ದ್ರೌಪದಿಯ ಹಾಗೆ…….manakaaduva bhaavanegalu ….
nice very nice..
gandu mettid,,,,,salu vicharakke hacchitu
hennina manad maatugala pratidvani ide