ನಿರಂಜನರ ಕೃತಿಯನ್ನು 'ಬಹುರೂಪಿ' ಪ್ರಕಾಶನದವರು ಮರು ಮುದ್ರಿಸಿದ್ದಾರೆ

ಜಿ ಎನ್ ನಾಗರಾಜ್ 
“ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ” ಇದು ಕರ್ನಾಟಕದ ಯುವ ಮನಸ್ಸುಗಳು ಯೋಜಿಸಿದ ಒಂದು ವಿಶಿಷ್ಟ ಅಭಿಯಾನ.
ಈ ಅಭಿಯಾನದ ಸಮಯದಲ್ಲಿ ನಾನು ಕಯ್ಯೂರು ಹೋರಾಟ ಎಂಬುದೊಂದು ಎರಡನೆಯ ಮಹಾಯುದ್ಧದ ನಂತರ ಭಾರತದಲ್ಲಿ ಎದ್ದು ಬಂದ ರೈತ ಹೋರಾಟದ ಮಹಾ ಅಲೆಯ ಭಾಗ. ಕೇರಳದ ಮಲಬಾರ್‌‌‌ನ ಹಲವು ಹಳ್ಳಿಗಳಿಂದ ಈ ಹೋರಾಟದ ಕಿಡಿಗಳು ಚಿಮ್ಮಿದವು.
ಕಯ್ಯೂರು ಅಂತಹುದೊಂದು ಕಿಡಿ ಎಂದು ಅಂದಿನ ಸಂದರ್ಭವನ್ನು ಕಟ್ಟಿಕೊಡಲು ಹಲವು ಪೋಸ್ಟ್‌ಗಳನ್ನು ಹಾಕಿದ್ದೆ.
ಇದಾದ ಹಲವು ತಿಂಗಳುಗಳ ನಂತರ ನನ್ನ ಪುಸ್ತಕ ಭಂಡಾರದಲ್ಲಿ ಮತ್ಯಾವುದೋ ಪುಸ್ತಕಕ್ಕಾಗಿ ತಡಕಾಡುತ್ತಿದ್ದಾಗ ನಿಧಿ ಸಿಕ್ಕಿದಂತೆ ಈ ಕಿರು ಪುಸ್ತಕ ಕಣ್ಣಿಗೆ ಬೀಳಬೇಕೇ!
‘ಹುರ್ರಾ !’ ಎಂದು ಈ ಪುಸ್ತಕದ ಬಗ್ಗೆ ಇಲ್ಲಿ ಸ್ಟೇಟಸ್ ಹಾಕಿದ್ದದ್ದು ಹಲವರಿಗೆ ನೆನಪಿರಬಹುದು. ನನಗೊಂದು, ನನಗೊಂದು ಪ್ರತಿ ಬೇಕು ಎಂದು ನೀವುಗಳು ಕೇಳಿದಿರಿ.
ಅದನ್ನು ನೋಡಿದ ‘ಬಹುರೂಪಿ’ ಪ್ರಕಾಶನದವರು ಮರು ಮುದ್ರಿಸಲು ಮುಂದೆ ಬಂದರು. ತೇಜಸ್ವಿನಿ ನಿರಂಜನರನ್ನು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದು ಇದನ್ನು ಸುಂದರವಾಗಿ ಮುದ್ರಿಸಿದ್ದಾರೆ.
ಈಗ ಇದು ನಿಮ್ಮೆಲ್ಲರದು. ಬೆಲೆ 30 ರೂ.
ಪ್ರತಿಗಳಿಗಾಗಿ
editor. [email protected] ರವರನ್ನು ಸಂಪರ್ಕಿಸಿ.

 

‍ಲೇಖಕರು avadhi

June 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: