ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಿನ್ನ ಪ್ರತಿ ಮಾತಲ್ಲೂ ಗೂಡಾರ್ಥ..

shreedevi keremane

ಶ್ರೀದೇವಿ ಕರೆಮನೆ

 

ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತ್ತಿದ್ದೇನೆ

ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ

 

sheನಿನ್ನ ಪ್ರತಿ ಮಾತಲ್ಲೂ ಗೂಡಾರ್ಥ ಹೆಡೆಯೆತ್ತಿ ತೊನೆಯುತ್ತಿರುವಾಗ

ಎರಡು ಸಾಲುಗಳ ನಡುವಿನ ಅರ್ಥ ಹುಡುಕಲೆಂದು ಬರೆಯುತ್ತಿದ್ದೇನೆ

 

ಹೊಕ್ಕಳ ಸುಳಿಯಲ್ಲೇ ಎದ್ದೇಳುವ ತಲ್ಲಣದಲ್ಲೊಂದು ತಂಪ ಹುಡುಕುತ್ತ

ಬದುಕು ಗಿರಗಟ್ಟೆ ಆಡಿಸಬಹುದೆಂಬ ಭಯದ ನೆರಳಲ್ಲಿ ಬರೆಯುತ್ತಿದ್ದೇನೆ

 

ನಿದ್ದೆಯಿಲ್ಲದ ರಾತ್ರಿಯಲ್ಲೂ ಕನವರಿಕೆಗಳು ತಡೆಯಿಲ್ಲದೇ ಸಾಗುವಾಗ

ನಾಳಿನ ಎಲ್ಲಾ ಕನಸುಗಳ ಗುರಿ ನೀನೇ ಆಗಿರಲೆಂಬಂತೆ ಬರೆಯುತ್ತಿದ್ದೇನೆ

 

ಬರೆದು ಮುಚ್ಚಿಟ್ಟ ಸಾಲುಗಳು ‘ಸಿರಿ’ಯ ಸಾವಿನ ನಂತರವಾದರೂ

ನಿನ್ನೊಳಗೊಂದು ಕೋಲ್ಮಿಂಚು ಹಬ್ಬಿಸುವ ಧನ್ಯತೆಗಾಗಿ ಬರೆಯುತ್ತಿದ್ದೇನೆ

‍ಲೇಖಕರು Admin

16 August, 2016

3 Comments

  1. Sangeeta Kalmane

    ಬರೆಯುವುದಕ್ಕೊಂದು ಉಪಮೆಗಳ ಸಾಲು ಚೆನ್ನಾಗಿದೆ.

  2. ಚಲಂ

    ಒಳ್ಳೆಯ ಕವಿತೆ

  3. ನೂತನ ಎಮ್ ದೋಶೆಟ್ಟಿ

    ಶ್ರೀದೇವಿ ಕವಿತೆ ನವಿರಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading