ನಿಜವಾದ ವಿರಾಗಿಗಳು ನಾವು..!!

( ಹಂದ್ರಾಳ  ಕೇಶವ ರೆಡ್ಡಿಯವರ ಕವನ ಓದಿ ನಿಜಕ್ಕೂ ನನ್ನ ಮನ ಕಲಕಿತು.  ಎಷ್ಟು ಸತ್ಯವಾದ ಮಾತು ಬರೆದಿದ್ದಾರೆ.  ಒಂದಷ್ಟು ನಾನೂ ಬರೆದೆ ನೋವಿನಲಿ.)

ಗೀತಾ ಹೆಗ್ಡೆ ಕಲ್ಮನೆ

ಬೀಳಬಹುದು ನಾಳೆಯೇ ನಮ್ಮ ಹೆಣಗಳು
ಹೊಟ್ಟೆಯ ಹಸಿವು ತಾಳಲಾಗದೇ
ಅಥವಾ ಕುಡಿಯಲು ಗುಟುಕು ನೀರಿಲ್ಲದೇ
ಬನ್ನಿ ಬಲಾಡ್ಯರೆ ನಮ್ಮ ಹೆಣಗಳಲೂ
ಒಂದಷ್ಟು ಕಾಸು ಕವಡೆ ನಿಮಗೆ ಸಿಗಬಹುದು
ಹುಡುಕಿ ಬೇಗ ಇದಕೊಂದು ತಂತ್ರ ಮಂತ್ರ.

 

ಏಕೆ ನಿಮಗಿದರಿಂದ ಕಾಸು ಹುಟ್ಟಿಸಿಕೊಳ್ಳುವ ಖರಾಮತ್ತು
ಎಂದು ನಾವಂತೂ ಕೇಳುವುದೇ ಇಲ್ಲ
ಏಕೆಂದರೆ ಇಲ್ಲಿ ನಮ್ಮ ಸಂಸ್ಕಾರ ಮಾಡಲು
ಈಗಿನ ಮಂದಿಗೆ ವ್ಯವಧಾನವೂ ಇಲ್ಲ, ಸಮಯವೂ ಇಲ್ಲ,
ಇವೆಲ್ಲ ಮೂಢ ನಂಬಿಕೆ, ಪುರೋಹಿತರ ಅಭಾವದ ನೆವ
ಈ ದೇಶ ಬಿಟ್ಟು ತೊಲಗಿ ತಮ್ಮ ಧ್ಯೇಯ ಬೆಯಿಸಿಕೊಳ್ಳುತ್ತಿರುವ
ಒಂದಷ್ಟು ಮಕ್ಕಳು ಹುಟ್ಟಿ ಸಂಪ್ರದಾಯವೆಂಬುದು
ಕೆಟ್ಟು ಕುಲಗೆಟ್ಟು ಹೋಗಿದೆ!

ಮೊನ್ನೆ ಅದ್ಯಾವನೊ ಕೈಲಾಗದ ಹೆತ್ತ ತಾಯಿಯ
ಮೆಟ್ಟಲತ್ತಿಸಿ ಮೇಲಿಂದ ದೂಡಿಲ್ಲವೆ?
ಇನ್ನೂ ಹತ್ತು ಹಲವು ನಿಧರ್ಶನ ಗೋರಿಗೆ ತಳ್ಳಲು
ಜೀವಂತವಾಗಿರುವಾಗಲೇ ಸತ್ತು ಸತ್ತು ಬದುಕುವ ಹೆಣಗಳು
ಕೈ ಜೋಡಿಸುತ್ತಿರುವ ನಿಮ್ಮಂಥವರಿಗೂ
ಸಾಪ್ಟಾಂಗ ನಮಸ್ಕಾರ ಮಾಡಿ ಹೋಗಲು ತಯಾರಿದ್ದೇವೆ.

ಬದುಕಿನ ದಿನಗಳ ನೆನೆದು ಪರಿತಪಿಸುತ್ತ
ನಾಳೆಯ ಕಿಂಡಿಯಲಿ ಬೆಳಕ ಹುಡುಕುವ ಕನಸು
ಮಗ ಬರುವನೆ? ನಮ್ಮ ನೋಡಿಕೊಳ್ಳಬಹುದೆ?
ರಾಜ್ಯವನಾಳುವ ಧೀಮಂತರು ನಮ್ಮ ನೆರವಿಗೆ ಬರಬಹುದೆ?
ನೆಮ್ಮದಿಯ ಬದುಕು ಕೊನೆಗಾಲದಲ್ಲಾದರೂ ಕಾಣಬಹುದೆ?
ಇವೆಲ್ಲಾಗಲೇ ಸತ್ಯವಾಗಿಯೂ ಸತ್ತು ಕೆರೆ ಕಂಡಿರುವಾಗ
ಮಾತಿದ್ದೂ ಮೂಕರಾಗಿದ್ದೇವೆ ಚಿಂತೆಯನ್ನೆಂತೂ ಮಾಡದಿರಿ
ಇರುವುದೆಲ್ಲವ ಬಿಟ್ಟು ಹೊರಡಲು ನಿಂತ
ನಿಜವಾದ ವಿರಾಗಿಗಳು ನಾವು!!

 

‍ಲೇಖಕರು Avadhi GK

February 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: