’ನಿಂತ ನೀರಿಗೆ ಸುಖವಿಲ್ಲ..’ – ರಾಘವೇಂದ್ರ ಜೋಶಿ ಕವನ


ರಾಘವೇಂದ್ರ ಜೋಶಿ

ಕನಸು ಕನವರಿಕೆ


ಅತ್ತ,
ಮಾತಿಗೆ
ಮಾತು
ಮಥಿಸಿ
ಮಳೆ ತರಿಸಿದೆವು
ಅಂತ
ಎರಡು ಮೋಡಗಳು
ಮಾತನಾಡಿಕೊಳ್ಳುತ್ತಿದ್ದರೆ-
 
ಇತ್ತ,
ಅಂಗಳದಲ್ಲಿ
ಹರಿಯುತ್ತಿದ್ದ ನೀರಿನಲ್ಲಿ
ಕಾಗದದ ದೋಣಿ
ತಯಾರಿಸುತ್ತಿರುವ
ಪೋರನ
ಅವಸರದ ಬಗ್ಗೆ
ಮಳೆರಾಯನಿಗೆ
ಕೆಟ್ಟ ಕುತೂಹಲವಿದೆ.

ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ
ಅಲ್ಲಿಂದಲೇ ವಿಪ್ಲವ ಶುರು.
 
ನೀರಿನಲ್ಲಿ
ಅಲೆಯ ಉಂಗುರ
ಹುಡುಕಲು ಹೊರಟವನಿಗೆ
ಶಕುಂತಳೆಯ
ಉಂಗುರ ದಕ್ಕಿದರೆ
ನುಂಗಲಾಗದ
ಮೀನಿನ ತಪ್ಪೇ?
ಗುರಿಯಿಡಬಹುದೇ ಕಣ್ಣಿಗೆ?
ಗುರಿಯಿಡಬಹುದೇ ಹೆಣ್ಣಿಗೆ?

ಅತ್ತ ಇತ್ತಗಳ
ಮಧ್ಯೆಯೇ
ಈ ಕವಿತೆಗೊಂದು
ಉಪಸಂಹಾರ ಮಾಡಿಬಿಡಿ.
ಸದ್ಯಕ್ಕೆ
ಕಪ್ಪೆಯಾಗಿರುವ
ಶಪಿತ ಸುಂದರಿಗೊಂದು
ಧ್ವನಿವರ್ಧಕ ಕೊಟ್ಟುಬಿಡಿ:
ಇಲ್ಲೀಗ
ಎಷ್ಟು ಶಾಪಗಳೋ
ಅಷ್ಟೇ ವಿಮುಕ್ತಿಗಳು..
 

‍ಲೇಖಕರು G

November 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. jyothi

    Beautiful
    Guri idabahude kaNNige
    Guri idabahudE heNNige…
    Ellavu chandada saalygaLu…

    ಪ್ರತಿಕ್ರಿಯೆ
  2. Anil Talikoti

    ಚೆನ್ನಾಗಿದೆ ಜೋಶಿಯವರೆ. #ಶಾಪ=#ವಿಮುಕ್ತಿ ಆದರೆ ನಿಂತ ನೀರು ಕೊರಗಬೇಕಾಗಿಲ್ಲ ಅಲ್ಲವೆ?
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  3. Arun

    ನದಿ ಸೇರಬಯಸುವ ಮಳೆನೀರಿಗೆ ನೀರಡಿಕೆಯಾಗುವುದೇ? ಯಾವತ್ತೂ ಕೇಳಿಲ್ಲ. ಆದರೆ, ನನಗಂತೂ ನೀರಡಿಕೆ ನೀಗಿಲ್ಲ. ಬರೆಯುತ್ತಾ ಇರಿ. ಶುಭವಾಗಲಿ.

    ಪ್ರತಿಕ್ರಿಯೆ
  4. Vidyashankar Harapanahalli

    Usual free flowing and thought provoking poetry from RJ 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: