ರಾಘವೇಂದ್ರ ಜೋಶಿ
ಅತ್ತ,
ಮಾತಿಗೆ
ಮಾತು
ಮಥಿಸಿ
ಮಳೆ ತರಿಸಿದೆವು
ಅಂತ
ಎರಡು ಮೋಡಗಳು
ಮಾತನಾಡಿಕೊಳ್ಳುತ್ತಿದ್ದರೆ-
ಇತ್ತ,
ಅಂಗಳದಲ್ಲಿ
ಹರಿಯುತ್ತಿದ್ದ ನೀರಿನಲ್ಲಿ
ಕಾಗದದ ದೋಣಿ
ತಯಾರಿಸುತ್ತಿರುವ
ಪೋರನ
ಅವಸರದ ಬಗ್ಗೆ
ಮಳೆರಾಯನಿಗೆ
ಕೆಟ್ಟ ಕುತೂಹಲವಿದೆ.
ಓಡುವ,
ಧಾವಿಸುವ,
ಹರಿದುಹೋಗುವ,
ಬತ್ತುವ ಮೊದಲೇ
ನದಿ ಸೇರಬಯಸುವ
ಮಳೆನೀರಿಗೆ
ಯಾವತ್ತೂ
ನೀರಡಿಕೆಯಾಗುವದಿಲ್ಲ
ಅಂತ ಅಂದುಕೊಂಡರೆ
ಅಲ್ಲಿಂದಲೇ ವಿಪ್ಲವ ಶುರು.
ನೀರಿನಲ್ಲಿ
ಅಲೆಯ ಉಂಗುರ
ಹುಡುಕಲು ಹೊರಟವನಿಗೆ
ಶಕುಂತಳೆಯ
ಉಂಗುರ ದಕ್ಕಿದರೆ
ನುಂಗಲಾಗದ
ಮೀನಿನ ತಪ್ಪೇ?
ಗುರಿಯಿಡಬಹುದೇ ಕಣ್ಣಿಗೆ?
ಗುರಿಯಿಡಬಹುದೇ ಹೆಣ್ಣಿಗೆ?
ಅತ್ತ ಇತ್ತಗಳ
ಮಧ್ಯೆಯೇ
ಈ ಕವಿತೆಗೊಂದು
ಉಪಸಂಹಾರ ಮಾಡಿಬಿಡಿ.
ಸದ್ಯಕ್ಕೆ
ಕಪ್ಪೆಯಾಗಿರುವ
ಶಪಿತ ಸುಂದರಿಗೊಂದು
ಧ್ವನಿವರ್ಧಕ ಕೊಟ್ಟುಬಿಡಿ:
ಇಲ್ಲೀಗ
ಎಷ್ಟು ಶಾಪಗಳೋ
ಅಷ್ಟೇ ವಿಮುಕ್ತಿಗಳು..
tumba padya odida khushi…
Beautiful
Guri idabahude kaNNige
Guri idabahudE heNNige…
Ellavu chandada saalygaLu…
tumba kaaduva saalugaLu..sir..deepavaLiya shubhashayagaLu..avadhigu..
ಚೆನ್ನಾಗಿದೆ ಜೋಶಿಯವರೆ. #ಶಾಪ=#ವಿಮುಕ್ತಿ ಆದರೆ ನಿಂತ ನೀರು ಕೊರಗಬೇಕಾಗಿಲ್ಲ ಅಲ್ಲವೆ?
-ಅನಿಲ ತಾಳಿಕೋಟಿ
ನದಿ ಸೇರಬಯಸುವ ಮಳೆನೀರಿಗೆ ನೀರಡಿಕೆಯಾಗುವುದೇ? ಯಾವತ್ತೂ ಕೇಳಿಲ್ಲ. ಆದರೆ, ನನಗಂತೂ ನೀರಡಿಕೆ ನೀಗಿಲ್ಲ. ಬರೆಯುತ್ತಾ ಇರಿ. ಶುಭವಾಗಲಿ.
Usual free flowing and thought provoking poetry from RJ 🙂
chennagide joshi ….