ನಾವ್ ರೆಡಿ.. ನಾವ್ ರೆಡಿ..

ಸಾಹಿತ್ಯ ಸಮ್ಮೇಳನಕ್ಕೆ ರಂಗ ಸಜ್ಜಾಗಿದೆ. ಹಾಗೆಯೇ ನಾವೂ..  ಆನ್ಲೈನ್ ಮಾಧ್ಯಮದಲ್ಲಿ ಅತ್ಯಂತ ಯಶಸ್ವಿಯಾಗಿ ಸಮ್ಮೇಳನದ ಕವರೇಜ್ ನೀಡುತ್ತಿರುವ ಬ್ಲಾಗ್ ನಮ್ಮದು. ಚಿತ್ರದುರ್ಗ ಸಮ್ಮೇಳನದಿಂದ ‘ಅವಧಿ’ ತಂಡ ಎಕ್ಸ್ಕ್ಲುಸಿವ್ ಆದ ತಂಡ ರಚಿಸಿ ಅವರನ್ನು ಸಮ್ಮೇಳನದ ಅಂಗಳಕ್ಕೆ ಕಳಿಸುತ್ತಿದೆ. ಚಿತ್ರದುರ್ಗ ಸಮ್ಮೇಳನದ ಕವರೇಜ್ ಅನ್ನು ಸುಘೋಷ್ ನಿಗಳೆ ಮುನ್ನಡೆಸಿದ್ದರು. ನಂದೀಶ್ ಹಾಗೂ ಸತೀಶ್ ಸಾಥ್ ನೀಡಿದ್ದರು. ಗದಗ ಸಮ್ಮೇಳನದಲ್ಲಿ ಈ ಕವರೇಜ್ ಇನ್ನೂ ವಿಸ್ತಾರ ಹಾಗೂ ವ್ಯವಸ್ಥಿತ  ರೂಪು ಪಡೆಯಿತು. ಆದಿತ್ಯ ಭಾರದ್ವಾಜ್, ಹೇಮಂತ್, ಪ್ರುತ್ವಿ, ಚಾಣಕ್ಯ ಅವರ ತಂಡ ಆಡಿಯೋ, ವಿಡಿಯೋ, ಸ್ಟಿಲ್ ಕ್ಯಾಮೆರಾ ಹೊತ್ತು ಸಮ್ಮೇಳನದ ಇಂಚಿಂಚೂ ಕವರ್ ಮಾಡಿತು. ಈ ಸಾಹಸವನ್ನು ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಸಹಾ ಶ್ಲಾಘಿಸಿತು. ಎಷ್ಟೋ ಪ್ರಮುಖ ದೈನಿಕಗಳೂ ಸಹಾ ನಮ್ಮ ಸೈಟ್ ನಿಂದ ಫೋಟೋ ಪಡೆದು ಪ್ರಕಟಿಸಿದವು. ಈಗ ಸಮ್ಮೇಳನ ಬೆಂಗಳೂರಿನಲ್ಲಿ.. ರಾಜಧಾನಿಯಲ್ಲಿ ಜರುಗುವ ಸಮ್ಮೇಳನಕ್ಕೆ ನಮ್ಮ ಇರುವೆ ದಂಡೂ ಸಜ್ಜಾಗಿದೆ. ಬೆಲ್ಲ ಇರುವಲ್ಲೆಲ್ಲಾ ಮುತ್ತಿಗೆ ಹಾಕಿಯೇ ಸೈ ಎನ್ನುವ ನಿಲುವು ನಮ್ಮದು. ಈ ಬಾರಿ ಹೇಮಂತ್, ಪ್ರುತ್ವಿ ಹಾಗೂ ಆದಿತ್ಯ ಭಾರದ್ವಾಜ್ ಸಮ್ಮೇಳನದ ಕವರೇಜ್ ಅನ್ನು ಮುನ್ನಡೆಸಲಿದ್ದಾರೆ. ಇವರೊಂದಿಗೆ ಸಾಕಷ್ಟು ಸಾಹಿತ್ಯ ಓದಿಕೊಂಡಿರುವ, ಚಟ್ ಪಟ್ ಎಂದು ಮಾತನಾಡುವ, ಹಿಡಿದರೆ ಕೆಲಸ ಮಾಡಿಯೇ ತೀರುವ ಒಂದು ದೊಡ್ಡ ತಂಡ ಬಗಲಿಗಿದೆ. ರಮ್ಯ, ಗಜೇಂದ್ರ, ಶಿಲ್ಪ, ನಯನ, ಸುಮಂತ್, ಶ್ರೀವತ್ಸ, ರಶ್ಮಿ, ಮಾಲಾ..ಇರುವ ಈ ತಂಡ ಸಕಲ ಸಾಮಗ್ರಿಯೊಂದಿಗೆ ಸಜ್ಜಾಗಿದೆ. ಅವರು ನಿಮ್ಮ ಎದುರು ಪ್ರತ್ಯಕ್ಷರಾದರೆ, ಮೈಕ್ ಹಿಡಿದರೆ, ಅವರ ಕೊರಳಲ್ಲಿ ‘ಅವಧಿ’ ಗುರುತು ಪತ್ರ ತೂಗುತ್ತಿರುತ್ತದೆ. ಸೋ ಪ್ರೀತಿಯಿಂದ ಮಾತನಾಡಿ, ಅನಿಸಿದ್ದೆಲ್ಲಾ ಮಾತನಾಡಿ, ಎಲ್ಲವೂ  ‘ಅವಧಿ’ಯಲ್ಲಿ ಓದಿ- [gallery]  ]]>

‍ಲೇಖಕರು avadhi

February 3, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: