
ರಾಜೇಂದ್ರ ಪ್ರಸಾದ್
ಅಕ್ಕನಿಗೆ ಒಬ್ಬ ಚೆನ್ನಮಲ್ಲ
ಮೀರಾಳಿಗೊಬ್ಬ ಗೊಲ್ಲ
ಚೈತನ್ಯನಿಗೆ ಸೂರದಾಸನಿಗೆ
ಬಸವಣ್ಣನಿಗೆ ಇಳೆಯಾಗಂಡ ಗುಡಿಮಾರನಿಗೆ
ದಾಸಿಮಯ್ಯನಿಗೆ ದಾರಶಿಖೋವಿಗೆ
ಏನಿದು ಎಲ್ಲರಿಗೂ ಈ ಭಗವಂತನೇ
ಪ್ರಿಯಕರನಾಗುವುದಂತೆ!
ಹೇಗೆ? ಹೇಗೆ?
ಶರಣ ಸತಿಯಂತೆ ಲಿಂಗಪತಿಯಂತೆ!
ನಾನೊಪ್ಪುವುದಿಲ್ಲ. ತೆಗೆಯಿರಿ.
ನಿಮ್ಮ ಕಳ್ಳಪ್ರೇಮದ ಸಮಜಾಯಿಸಿ;
ಭಗವಂತನೆನಗೆ ಒಪ್ಪಿತವಲ್ಲ.
ನಾನೇನು ಅವನಂತೆ ದ್ವಿಲಿಂಗಿಯಲ್ಲ!
ಈ ಮರ್ತ್ಯದ ಮರುಜೇವಣಿಯಲ್ಲಿ
ಸಿಕ್ಕು ಆನು ಕಾಯುತ್ತಿರುವುದು
ಶ್ರೀಶೈಲದ ಭ್ರಮರಾಂಬೆಗೆ
ಮಥುರೆಯ ಭಾಮೆಗೆ
ಪಟ್ಟಣದ ರಂಗನಾಯಕಿಗೆ
ಅವಳ ಸಖಿ ಲೋಪಾಮುದ್ರೆಗೆ ..






0 Comments