ಮನಸಿನ ಹೊಸ್ತಿಲಲೆ

ಸುನಿತಾ ಕೆ ಕೆ
ಬೃಂದಾವನ ಮೇಯುತ್ತಾ
ಚಲಿಸುತ್ತಿವೆ ಅಕ್ಷರಗಳು
ಶಬ್ಧಗಳ ಹೊದಿಕೆಯಡಿ
ನಾನು ಕೃಷ್ಣನೊಂದಿಗೆ
ಬೆಳಕು ಕಣ್ಮುಚ್ಚುತ್ತಲೇ
ಕಣ್ಣಲಿ ಪ್ರಣಯ ತರಂಗ
ತುಟಿಯ ಮೋಹ ಮಳೆ
ನೂಪುರ ಮಣಿ ಮೇಳದ
ನಡುವೆ

ಸುಪ್ರಭಾತ ದರ್ಶನ ನೀಡದೆ
ಮಾಯಾವಾದೆ
ಮುಳ್ಳಿದ್ದರೂ ನೋಯಿಸಿಲ್ಲ
ಗಿಡಗಳು
ವಿರಹವಿಲ್ಲ ಕೃಷ್ಣಾ
ನೆನಪುಗಳಿವೆ
ದಿಟ
ನೀ ನನ್ನ ಸ್ವಂತವಲ್ಲ
ಅಸ್ತಮಕೆ ಕಾಡುಮಲ್ಲಿಯ ಗಂಧ
ನೆನಪುಗಳು ನೇವರಿಸುತ್ತಿವೆ
ಒಂಟಿತನದಲಿ
ಮನಸಿನ ಮಧುಚಂದ್ರ ವೇದಿಕೆಯ
ಹೊಸ್ತಿಲಲ್ಲೇ ಛದ್ಮವೇಷ
ಸಾದರ ಪಡಿಸಿ ಬಿಟ್ಟೆ





ಚೆನ್ನಾಗಿದೆ ಕವಿತೆ
ಸಂಗೀತ ರವಿರಾಜ್
Chennagide kavite… smitha