ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನೀಗ ಅಹಲ್ಯೆ, ಶ್ರೀರಾಮನಿಗೆ ಕಾಯದ ಅಹಲ್ಯೆ !

ಗೀರ್ವಾಣಿ

ಸಣ್ಣ ತಪ್ಪಿಗೂ ಕಲ್ಲು ಮಾಡುವರಿಲ್ಲಿ
ಕಲ್ಲಾಗಿದ್ದಕ್ಕೆ ಮತ್ತವರೇ ಕಾರಣ ಕೇಳುವರು
ತಲೆ ಮೇಲೆ ಮೊಟಕಿ ಗಟ್ಟಿತನ ಪರೀಕ್ಷಿಸುವರು
ಉದ್ಢರಿಸಲು ಬಂದ ಶ್ರೀರಾಮನನ್ನೂ ತಡೆಯುವರು

sheನಾನೇನೂ ಇಂದ್ರನೊಡನೆ ಸರಸವಾಡಿರಲಿಲ್ಲ
ಗಂಡನೆಂದು ತಿಳಿದು ಮೋಸ ಹೋಗಿರಲಿಲ್ಲ
ಯಾರ ಶಾಪಕ್ಕೂ ಗುರಿಯಾದವಳಲ್ಲ
ಆದರೂ ಅಹಲ್ಯೆಯಾಗಿದ್ದೇನೆ
ಕಲ್ಲಾಗಿದ್ದೇನೆ

ಕಲ್ಲಿನಲ್ಲೇ ಮಿದುತ್ವ ಕಂಡುಕೊಂಡಿದ್ದೇನೆ
ಮಿದು ಭಾವಗಳಿಗೆ ಚಪ್ಪಡಿ ಎಳೆದಿದ್ದೇನೆ

ನಾನೇನೂ ಶ್ರೀರಾಮನಿಗೆ ಕಾಯುತ್ತಿಲ್ಲ
ಬಿಡುಗಡೆಗಾಗಿ ಕೈ ಎತ್ತಿ ಬೇಡುತ್ತಿಲ್ಲ
ಒಲವಿರುವವರೆಗೆ ಕೊರಗಿದವಳು ನಾನು
ಶಿಲೆಯಾದ ಮೇಲೆ ಇನ್ಯಾತರ ಕೊರಗು?
ಈಗೇನಿದ್ದರೂ ನನ್ನೊಳಗೆ ಅಗ್ನಿದಿವ್ಯ
ಸಿಡಿದೆದ್ದರೆ ಜ್ವಾಲಾಮುಖಿ

ಇಲ್ಲೆಲ್ಲ ಚೆನ್ನಾಗೇ ಇದೆ
ತಕರಾರು ತೆಗೆಯುವರಿಲ್ಲ
ಪುರಾವೆ ಕೇಳುವರಿಲ್ಲ
ಶಾಪ ಕೊಡುವವರೂ ಇಲ್ಲ
ಕಲ್ಲೇ ಆದ ಮೇಲೆ ಇನ್ನೆಂಥ ಶಾಪ?

ನಾನೇನೂ ಇಂದ್ರ ಚಂದ್ರರನ್ನು ಕೇಳಿರಲಿಲ್ಲ
ಸ್ವರ್ಗದೂರಿಗೆ ಹೋಗುವುದೂ ಬೇಕಿರಲಿಲ್ಲ
ಒಂದೇ ಒಂದು ಕಾರಣ ಕೇಳಿದ್ದೆ
ಕಲ್ಲಾಗಿಸಿದರು.
ನಾನೀಗ ಅಹಲ್ಯೆ !
ಶ್ರೀರಾಮನಿಗೆ ಕಾಯದ ಅಹಲ್ಯೆ !

‍ಲೇಖಕರು Admin

27 July, 2016

3 Comments

  1. Sangeeta Kalmane

    ಅಹಲ್ಯೆಯ ಮನಸೇ ನೀವಾಗಿದ್ದೀರಲ್ಲ! ಚೆನ್ನಾಗಿದೆ.

  2. S.p.vijaya Lakshmi

    S.P.Vijaya lakshmi…
    Beautiful.

  3. anjali

    Channagide anta heluvudakinta, nimma odalalada katu sathyakke mouni yagiddene, estu odhidaru athrupta bhavane

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading