ಈಟೀವಿ ಕನ್ನಡ ವಾಹಿನಿಯಲ್ಲಿ ವಾವ್ ! ಕಾರ್ಯಕ್ರಮದಲ್ಲಿ ವಿಶೇಷ ಅನ್ನಿಸಿದ್ದು ಹಾಸ್ಯ ಕಲಾವಿದರ ಹಾಗೆನ್ನುವುದಕ್ಕಿಂತ ಮನೋಲ್ಲಾಸ ಹೆಚ್ಚಿಸುವ ಕಲಾವಿದರ ಕಾರ್ಯಕ್ರಮ. ನಾಗರಾಜ ಕೋಟೆ, ಮಿಮಿಕ್ರಿ ಪ್ರೊಫೆಸರ್ ದಯಾನಂದ್ ಕಾರ್ಯಕ್ರಮ ವಾವ್ ಅನ್ನುವಂತೆ ಇತ್ತು. ಮುಖ್ಯವಾಗಿ ಸಾಮಾನ್ಯವಾಗಿ ನಾಗರಾಜ್ ಕೋಟೆ ಅವರ ಹಾಸ್ಯ ಹನಿಗವನ ನನಗೆ ತುಂಬಾನೆ ಇಷ್ಟ. ಅವರು ಎಫೆಮ್ ಒಂದರಲ್ಲಿ ಮಾಡುವ ಪಟೇಲನ ಜೋಕ್ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಅಂತಹುದೇ ಹಾಸ್ಯದ ಖುಷಿ ಸಾಯಿ ಕುಮಾರ್ ಅವರ ಕಾರ್ಯಕ್ರಮದಲ್ಲಿ ಹಂಚಿದರು. ಕೋಟೆಯವರ ಮಾತಿನ ಶೈಲಿ ಕಂಡು ಸಾಯಿ ಎಮಿಟೇಮಿಟೊ ಎಂದು ಮೌನವಾಗಿ ಎಂಜಾಯ್ ಮಾಡಿದರು 🙂
ಮಿಮಿಕ್ರಿ ದಯಾನಂದ್ ಮಾತಾಡದೆ ಮೌನವಾಗಿ ಅವರು ಆಂಗಿಕ ಶೈಲಿಯಿಂದ ಹಿರಿಯ ಕಲಾವಿದರ ಸ್ಟೈಲ್ಸ್ ತೋರಿದರು. ಡಯಲಾಗ್ ಹೇಳುವುದರಿಂದ ಎಲ್ಲರಿಗೂ ಆ ಕಲಾವಿದರ ಬಗ್ಗೆ ಚೆನ್ನಾಗಿ ತಿಳಿಯುತ್ತದೆ. ಆದರೆ ಇವರು ಕೇವಲ ಬಾಡಿ ಲಾಂಗ್ವೇಜ್ ಮೂಲಕ ಈ ಪರಿ ಪ್ರತಿಭೆ ತೋರಿದರೆ ಸಾಯಿ ಮಾತ್ರವಲ್ಲ ಸಮಸ್ತ ವೀಕ್ಷಕ ಪ್ರಭುಗಳು ಖುಷಿ ಪಡ್ತಾರೆ ಸಚ್ಚಿ 🙂 ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>
0 ಪ್ರತಿಕ್ರಿಯೆಗಳು