ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನಯ, ನಾಜೂಕು ಮಾತುಗಳೇ ಸಂಗೀತ ನಿಮಗೆ’ – ಟಿ ಎಸ್ ಗೊರವರ

ಒಂಟಿ ಹೂ

– ಟಿ ಎಸ್ ಗೊರವರ

ಬಿಂಕವ ತೋರಿ ಫಳ ಫಳಿಸೋ ನಕ್ಷತ್ರಕ್ಕೇ ಇಲ್ಲಿ ಕಿಮ್ಮತ್ತು
ಕುಂಡದಲಿ ಅರಳಿದ ಹೂಗಳಿಗೇ ಇಲ್ಲಿ ಬೆಲೆ
ಮಿಣುಕುವ ಚಿಮಣಿಗೆ, ಘಮ ಘಮಿಸುವ ಹೂವಿಗೆ
ನಿಮ್ಮ ಹಂಗು ಬೇಕಿಲ್ಲ ಬಿಡಿ

ನಯ, ನಾಜೂಕು ಮಾತುಗಳೇ ಸಂಗೀತ ನಿಮಗೆ
ಅಲಾದಿ ನಗುವ ತುಟಿಗಳೇ ಬಲು ಇಷ್ಟ ನಿಮಗೆ
ಲಾಲಿ ಹಾಡಿಗೆ ನಿಮ್ಮ ಬಹುಮಾನ, ಮೆಚ್ಚುಗೆ ಬೇಡ ಬಿಡಿ
 
ಎದೆಯ ಭಾವಗಳ ಬಸಿದು ಪದವ ಹಾಡಿದೆ
ಜನಪದವೇ ನುಡಿಯಾಗಿಸಿ ಕತೆಯ ಹೇಳಿದೆ
ನೀವು ಕೇಳಿಯೂ ಕೇಳದಂತಿದ್ದಿರಿ
ನಿಮ್ಮ ಮಜುಕುರ ಗೊತ್ತು ;
ದೇವರಾಣೆ, ನೀವು ಕೇಳಲೇಬೇಕೆಂದು ವಸೂಲಿ ಹಚ್ಚಲಾರೆ
 
ನಾನೊಂದು ಒಂಟಿ ಹೂ
ಘಮ ಘಮಾಡಿಸುತ ನಿಂತಿರುವೆ
ಮಕರಂದ ಹೀರುವ ದುಂಬಿ ಬಂದೇ ಬರುವುದು
 

‍ಲೇಖಕರು G

10 December, 2014

11 Comments

  1. samyuktha

    🙂

  2. Rukmini Nagannavar

    ಚಂದದ ಕವಿತೆ. ತುಂಬ ಇಷ್ಟವಾಯ್ತು ಸರ್.

  3. ತಿರುಪತಿ ಭಂಗಿ

    ಕಾವ್ಯದಲ್ಲಿ ಜಾಗೃಕತೆಯ ಛಾಯೆ
    ಕಡೆಗಣಿಸದ ಕೊರಗು
    ಅದ್ಭುತ .

  4. mmshaik

    chennaagide kavite..

  5. lakshmishankarjoshi.

    ಆಲಾದಿ ನಗುವ ತುಟಿ.ಅಲಾದಿ ರೋಣ ತಾಲೂಕಿನ ಶಬ್ದ.ಕವಿತೆ ತುಂಬಾ ಇಷ್ಟವಾಯಿತು.ಅಲಾದಿ ಅಂದರೆ ಯಾವಾಗಲೂ ಅನ್ನುವ ಅರ್ಥ ಅಲ್ಲವೇ?

  6. lakshmishankarjoshi.

    ದುಂಬಿ ಖಂಡಿತ ಬಂದೇ ಬರುತ್ತೆ.ಕಾಯಬೇಕು.

  7. Shivakumar Menasinakai

    ನಿವೇದನೆ ಹೀಗೂ ಮಾಡಬಹುದು..!

  8. ಟಿ.ಎಸ್.ಗೊರವರ, ರಾಜೂರು

    ಎಲ್ಲರಿಗೂ ಥ್ಯಾಂಕ್ಸ್. ಹೌದು lakshmishankarjoshiಯವರೆ,. ಅಲಾದಿ ಅಂದ್ರೆ ಯಾವಾಗಲೂ ಅಂತ ಅರ್ಥ. 😉

  9. kaligananath Gudadur

    Dumbiyoo barutte. Nimage chennagi kavana bareyaloo barutte.

  10. Anonymous

    verry nice sir

  11. sanjeevkumar kunnur

    verrry nice sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading