ನನ್ನ ಮನಸ್ಸನ್ನು ತಟ್ಟಿತು..

r g halli nagaraj

ಆರ್ ಜಿ ಹಳ್ಳಿ ನಾಗರಾಜ್ 

‪#‎ಹೊಸ‬ ಓದಿಗೊಂದು ಸೃಜನೇತರ ಕೃತಿ

*ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕನಾಗಿರುವ ಗೆಳೆಯ ಡಾ. ಕೇಶವಶರ್ಮ ಕೆ, ಗಂಭೀರ ಚಿಂತನೆಯ ವಿಮರ್ಶಕ. ಈಚೆಗೆ ಅವನದ್ದೊಂದು ಅಧ್ಯಯನಪೂರ್ಣ ಸೃಜನೇತರ ಚಿಂತನೆಯ ಕೃತಿ “ಮಾರ್ಕ್ಸ್ ವಾದಿ ಮೀಮಾಂಸೆ” ಹೊರಬಂದಿದೆ. “ಮಾರ್ಕ್ಸ್ ವಾದವೆಂದರೆ ಬೇಕಾಬಿಟ್ಟಿಯಾಗಿ ಬಳಸಬಹುದಾದ ಒಂದು keshava sharma book1ಅರಾಜಕ ಸಿದ್ಧಾಂತವಲ್ಲ. ಈ ವಾದದ ತಿಳುವಳಿಕೆಯನ್ನು ತಿರುಚುವುದೂ ಕೂಡ ಅಪಾಯಕಾರಿಯೇ ಆಗಿದೆ” ಎಂದು ತನ್ನ ಮುನ್ನುಡಿ ರೂಪದ ಬರಹದಲ್ಲಿ ದಾಖಲಿಸಿದ್ದಾನೆ. ಸಾಹಿತ್ಯ ಹಾಗೂ ಸಾಹಿತ್ಯೇತರ ವಿದ್ಯಾರ್ಥಿಗಳು, ಓದುಗರು ಈ ಕೃತಿಯನ್ನು ಅಧ್ಯಯನ ಮಾಡಬೇಕು. ಇದರಲ್ಲಿ ಮಾರ್ಕ್ಸ್ ವಾದದ ನಿಲುವುಗಳ ನೋಟವಿದೆ.

“ಇದನ್ನು ಬರೆಯಲು ಏಕಾಂತ ಸಿಕ್ಕಿತು. ಬರೆಯುವುದರ ಮೂಲಕವೇ ಸಾಮಾಜಿಕ ಸಂಬಂಧ ಸ್ಥಾಪಿಸಿಕೊಂಡೆ. ಬರೆಯುವುದು ಎಂದರೆ ಖಾಲಿ ಜಾಗವನ್ನು ಭರ್ತಿಮಾಡಿಕೊಳ್ಳುವುದು…… ನನಗೆ ಇದುವೇ ಬಾಗಿಲು. ಇದು ಬಿಟ್ಟರೆ ಬೇರೆ ದಾರಿ ಇಲ್ಲ….” ಎಂದಿರುವ ಕೇಶವಶರ್ಮನ ಮಾತು ನನ್ನ ಮನಸ್ಸನ್ನು ತಟ್ಟಿತು. ನಿಜ, ನಮ್ಮ ಓದಿನ ಜ್ಞಾನ ಕ್ಷಿತಿಜದ ಕಕ್ಷೆ ಹಿಗ್ಗಿದರೆ ಮಾತ್ರ ಇಂಥ ಕೃತಿಯ ಚಿಂನೆಗಳೂ ಮನದೊಳಗೆ ನಾಟಲು ಸಾಧ್ಯ.

ಗೆಳೆಯ ಕೇಶವಶರ್ಮ ಕೆ, ಈ ಬೃಹತ್ ಕೃತಿ ಕಳುಹಿಸಿಕೊಟ್ಟು, ನಾಲ್ಕಾರು ದಿನ ನಿದ್ರೆ ಕಿತ್ತುಕೊಂಡು ಓದುವಂತೆ ಪ್ರೇರಣೆ ನೀಡಿದ್ದಕ್ಕೆ ಧನ್ಯವಾದ.

* ಈ ಹಿಂದೆ ನಮ್ಮ ಅನ್ವೇಷಣೆ ಪ್ರಕಾಶನದಿಂದ ಈ ಗೆಳೆಯನ “ಕ್ರಿಯೆ ಪ್ರತಿಕ್ರಿಯೆ”, “ಸ್ತ್ರೀವಾದಿ ವಿಮರ್ಶೆ ” ಎಂಬ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆಯಿದೆ.

* ಪುಟ 556, ಬೆಲೆ ರೂ. 300/- ಪ್ರಕಾಶಕರು: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ 577 204.
* ಡಾ. ಕೇಶವಶರ್ಮ ಸಂಪರ್ಕ : 94487 30611.

‍ಲೇಖಕರು Admin

May 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: