ಬಿ ಎಂ ಬಶೀರ್
1.ಅಕೌಂಟ್
ಇತ್ತೀಚೆಗೆ ದುಬೈಯಿಂದ
ಬಂದ ಗೆಳೆಯ ಕೇಳಿದ
ಹೇಳು ನಿನ್ನ ಅಕೌಂಟ್
ನಲ್ಲಿ
ಎಷ್ಟು ದುಡ್ಡಿದೆ…?
ಫೇಸ್ಬುಕ್ ಅಕೌಂಟ್
ತೆರೆದು ತೋರಿಸಿದೆ
ಸಾವಿರಾರು
ಗೆಳೆಯರು
ಅಲ್ಲಿ ನಗುತ್ತಿದ್ದರು
.
2. ಸದ್ದು
.
ಮರ ಗಿಡಗಳಿಗೂ ಆತ್ಮ
ಇರಬಹುದೇ
ಎಂಬ ಪ್ರಶ್ನೆ ಹೊಳೆದಂದಿನಿಂದ
ನಡೆಯುವಾಗೆಲ್ಲ
ನನ್ನ ಪಾದ ತುಳಿತಕ್ಕೆ
ಹುಲ್ಲುಗರಿಗಳು
ನರಳುವ
ಸದ್ದು ಕೇಳುತ್ತಿವೆ…
.
3. ಮಾವಿನ ಗೊರಟೆ
.
ನಾನು ತಿಂದು ಎಸೆದ
ಮಾವಿನ ಗೊರಟೆ
ನನ್ನ
ಕವಿತೆ!
ಅದು
ಯಾವುದಾದರೂ
ಹಸಿ ಎದೆಯ ಮೇಲೆ ಬಿದ್ದು
ಮೊಳಕೆಯೊಡೆದು
ಗಿಡವಾಗಿ,
ಮರವಾಗಿ
ಹಣ್ಣುಗಳು ತೂಗಿ
ಹಕ್ಕಿಗಳಿಗೆ ಗುಡಿಲಾಗಿ,
ನೂರಾರು ಜನರಿಗೆ
ನೆರಳಾಗಿ
ಬೆಳೆದರೆ ಅದಕ್ಕೆ ನಾನು
ಹೊಣೆಯಲ್ಲ…!
.
4.ಮತ್ತೊಮ್ಮೆ
ಗಣರಾಜ್ಯೋತ್ಸವದ ದಿನ
ಬೀದಿಯಲ್ಲಿ
ಸಂಭ್ರಮಗಳೆಲ್ಲ ಕಳಚಿ
ಅನಾಥವಾಗಿ ಬಿದ್ದಿದ್ದ
ಪ್ಲಾಸ್ಟಿಕ್ ಧ್ವಜಗಳ
ಮೇಲೆ
ಯಾರ್ಯಾರದೋ
ಪಾದ ಗುರುತುಗಳು!
ಮರುದಿನ ಬೀದಿ ಗುಡಿಸುವವರ
ಮಕ್ಕಳ ಕೈಯಲ್ಲಿ
ಈ
ದೇಶಕ್ಕೆ ಮತ್ತೊಮ್ಮೆ
ಗಣರಾಜ್ಯೋತ್ಸವ!
ಇರಬಹುದೇ
ಎಂಬ ಪ್ರಶ್ನೆ ಹೊಳೆದಂದಿನಿಂದ
ನಡೆಯುವಾಗೆಲ್ಲ
ನನ್ನ ಪಾದ ತುಳಿತಕ್ಕೆ
ಹುಲ್ಲುಗರಿಗಳು
ನರಳುವ
ಸದ್ದು ಕೇಳುತ್ತಿವೆ…
ಮಾವಿನ ಗೊರಟೆ
ನನ್ನ
ಕವಿತೆ!
ಅದು
ಯಾವುದಾದರೂ
ಹಸಿ ಎದೆಯ ಮೇಲೆ ಬಿದ್ದು
ಮೊಳಕೆಯೊಡೆದು
ಗಿಡವಾಗಿ,
ಮರವಾಗಿ
ಹಣ್ಣುಗಳು ತೂಗಿ
ಹಕ್ಕಿಗಳಿಗೆ ಗುಡಿಲಾಗಿ,
ನೂರಾರು ಜನರಿಗೆ
ನೆರಳಾಗಿ
ಬೆಳೆದರೆ ಅದಕ್ಕೆ ನಾನು
ಹೊಣೆಯಲ್ಲ…!
ಬೀದಿಯಲ್ಲಿ
ಸಂಭ್ರಮಗಳೆಲ್ಲ ಕಳಚಿ
ಅನಾಥವಾಗಿ ಬಿದ್ದಿದ್ದ
ಪ್ಲಾಸ್ಟಿಕ್ ಧ್ವಜಗಳ
ಮೇಲೆ
ಯಾರ್ಯಾರದೋ
ಪಾದ ಗುರುತುಗಳು!
ಮರುದಿನ ಬೀದಿ ಗುಡಿಸುವವರ
ಮಕ್ಕಳ ಕೈಯಲ್ಲಿ
ಈ
ದೇಶಕ್ಕೆ ಮತ್ತೊಮ್ಮೆ
ಗಣರಾಜ್ಯೋತ್ಸವ!







ನಾನು ತಿಂದು ಎಸೆದ
ಮಾವಿನ ಗೊರಟೆ
ನನ್ನ
ಕವಿತೆ
ಚೆನ್ನಾಗಿದೆ ಬಶೀರ್ ಸರ್
ಚೆನ್ನಾಗಿದೆ.ಮೊಳಕೆಗಿಂತ ಬೇರೆ ಕವಿತೆ ಬೇಕೇ ?
“ಅವ ನಡೆವ ಹಾದಿಲಿ ಗರಿಕೆನೂ ಬೆಳೆಯಲ್ಲ “
beautiful
Superb ree basheer!!
I enjoyed reading them.
nice baseer sir..!!!