ಬಾನು ಬಾಗಿದೆ
ಭೂಮಿಯೆಡೆಗೆ
ಯಾದಗಿರಿ
ಬೆನ್ನಾಗಿ ನಿಂತಿಯಲ್ಲಾ
ಹೋಗಲು :ಸರಿ ಬಿಡು ,
ನೆನಪಲಿ ಕಳೆದ
ನನ್ನ ನಿದ್ದೆಗಳ ,
ಪ್ರತಿ ಋತು ತೆಗೆದುಕೊಂಡು ಹೋದ
ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು .. ..
ಈ ಒಂಟಿ ಕ್ಷಣಗಳ
ಜೊತೆಗೊಯ್ಯಿ. ಕಣ್ಣ ಕದನ
ತುಟಿ ಮೇಲಿನ ಪರಿಚಯ ಹೆಕ್ಕಿ ಕೊಡುವೆ ..
ಓಣಿಯಲಿ ಅಲೆದಾಡಿದ
ಮುನಿಸುಗಳ ಆಯ್ದು ಕೊಡುವೆ..
ನಿನ್ನ ನೆನಪುಗಳ ಒಟ್ಟಿ ಕೊಡುವೆ
ಬೆಂಕಿ ಇಡು ,
ಆಳಿದ ಆ ಸಂಜೆಗಳಿಗೆ
ಕೊಳ ತೊಡಿಸು
ಸಾಧ್ಯವಾದರೆ ..
ನಿನ್ನ ಭುಜಗಳ ಮೇಲೆ
ಸುರಿಸಿದ ಆ ಕಣ್ಣೀರ ತುಂಬಿ ಕೊಡು
ನನ್ನ ಅನಾಥ ಬೊಗಸೆಗೆ ..
ಗದ್ಗದಿತ ಕಣ್ಣ ಹನಿ
ಜಾರದಂತೆ ಇಂಗಿಸಿಕೊಂಡ
ಆ ತಂಪು ವಾಪಸ್ಸು ಕೊಟ್ಟು ಹೋಗು ..
ನೆರಳು ಕೊಟ್ಟು
ಬಿಸಿಲಲಿ ರಮಿಸಿದ
ಗಳಿಗೆಗಳ ಗುಡಿಸಿಕೋ..
ಮೋಡ ಕಟ್ಟುವ, ಹನಿಯೊಡೆಯುವ
ತಂಗಾಳಿಗಳ ಹಿಡಿದುಕೊ
ಹೋಗು .. ..
ತೋರು ಬೆರಳಿಂದ
ಹಚ್ಚಿದ ಕಾಡಿಗೆ ಅಳಿಸಿ ಹೋಗು .. ..
sooper))))..bhavapoorna abhivyakthi..
very poignant madam. Excellent
ಕವಿತೆಯ ದಿಟ್ಟತೆ ಮತ್ತು ಗಾಢ ಪ್ರೀತಿ ಮನ ಸೆಳೆಯುತ್ತದೆ.
chennagide mdm kvite 🙂
bahala chennagide madam
ಸುಂದರ ಕವಿತೆ.
ಪ್ರತಿ ಋತು ತೆಗೆದುಕೊಂಡು ಹೋದ
ನನ್ನ ನಿಟ್ಟುಸಿರ ಲೆಕ್ಕ ಕೊಟ್ಟು ಹೋಗು….
ಎಂತಹ ಅದ್ಭುತ ಸಾಲುಗಳು ಮೇಡಂ, ನಿಮ್ಮ ಸಂಕಲನ ಸಿಗುತ್ತ ತಿಳಿಸಿ. ಕೃಷ್ಣ, ಆರಿಫ್ ನಿಮ್ಮ ಬಗ್ಗೆ ಹೇಳ್ತಿರ್ತಾರೆ.
ramesh avare,krisna avara httira kottrtini tegedukoLLi…anisike nidida ellariguu dhanyavaada.
Good one
-Anil
Very nice poem
ಪದ್ಯ ತುಂಬಾ ಚೆನ್ನಾಗಿದೆ.
ಮೆಡಮ್ ವಂದನೆಗಳು
ಬಹಳ ಅರ್ಥಗರ್ಬಿತ ಕವನ ನೀಡಿದ್ದೀರಿ, ಲೆಖ್ಖ ಕೆಳುವ ನಿಮ್ಮ ನಿಟ್ಟುಸಿರು ಓದುಗನನ್ನು ಯೋಚನೆಗೆ ಹಚ್ಚುತ್ತದೆ ಮತ್ತೆ ಮತ್ತೆ ಓದ ಬೇಕೆನಿಸುವ ಕವನ.
naise bardeeri madam.keep it up.